ಹೋಟೆಲ್ ಗೆ ತಿಂಡಿ ತಿನ್ನಲು ಹೋಗಿದ್ದವ ಮೃತನಾಗಿದ್ದಾನೆ Saaksha Tv
ಮೈಸೂರು: ಸ್ನೇಹಿತನ ಜೊತೆ ತಿಂಡಿ ತಿನ್ನಲು ಕುಳಿತ ವಿದ್ಯಾರ್ಥಿಯೊಬ್ಬ ಹಠಾತ್ ನೆ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಹೋಟೆಲ್ ನಲ್ಲಿ ನಡೆದಿದೆ.
ನಿತಿನ್ ಕುಮಾರ್ (25) ಮೃತ ವ್ಯಕ್ತಿ. ಈತನು ಹುಣುಸೂರು ತಾಲೂಕಿನ ನಂಜಾಪುರ ಗ್ರಾಮದ ನಿವಾಸಿಯಾಗಿದ್ದು, ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ತಿಂಡಿ ತಿನ್ನಲೆಂದು ಹುಣುಸೂರಿನ ಟಿಫಾನಿಸ್ ಹೋಂ ಹೋಟೆಲ್ ಗೆ ಗೆಳೆಯನ ಜೊತೆ ಬಂದಿದ್ದರು. ತಿಂಡಿಗೆ ಆರ್ಡರ್ ಮಾಡಿ ಇಬ್ಬರೂ ಊಟದ ಟೇಬಲ್ ನಲ್ಲಿ ಕೂತಿದ್ದಾರೆ.
ನಿತಿನ್ ಮತ್ತು ಆತನ ಗೆಳೆಯ ಇಬ್ಬರೂ ತಿಂಡಿಗಾಗಿ ಎದುರು ನೋಡುತ್ತಾ ಪರಸ್ಪರ ಮಾತಾಡುತ್ತಾ ಕೂತಿದ್ದಾರೆ. ಇನ್ನೇನು ತಿಂಡಿ ಬರಬೇಕು ಅನ್ನುವಷ್ಟರಲ್ಲಿ ನಿತಿನ ಕುರ್ಚಿ ಮೇಲಿಂದ ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಸ್ನೇಹಿತ ನಿತಿನ್ ನನ್ನು ಮೇಲೆಕ್ಕೆ ಎತ್ತಿದರು. ಈತನ ಸಹಾಯಕ್ಕೆ ಅಕ್ಕಪಕ್ಕದಲ್ಲಿದ್ದ ಗ್ರಾಹಕರೂ ನೆರವಿಗೆ ಬಂದಿದ್ದರು. ಆದರೆ ಅಷ್ಟರಲ್ಲಿ ಹೃದಯಾಘಾತದಿಂದ ನಿತಿನ್ ಸಾವನ್ನಪ್ಪಿದ್ದಾರೆ. ಹೋಟೆಲ್ ನಲ್ಲಿ ನಿತಿನ್ ಕುಸಿದು ಬೀಳುವ ಕೊನೇ ಕ್ಷಣದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.