ADVERTISEMENT
Thursday, April 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಸಿಸಿಐ ಬೊಕ್ಕಸ ತುಂಬುತ್ತಿರುವ ಐಪಿಎಲ್ ಟೂರ್ನಿಯ ದುಡ್ಡಿನ ಮೂಲ ಯಾವುದು ?

admin by admin
July 25, 2020
in Newsbeat, Sports, ಕ್ರೀಡೆ
ipl 2021 bcci ipl saakshatv
Share on FacebookShare on TwitterShare on WhatsappShare on Telegram

ಬಿಸಿಸಿಐ ಬೊಕ್ಕಸ ತುಂಬುತ್ತಿರುವ ಐಪಿಎಲ್ ಟೂರ್ನಿಯ ದುಡ್ಡಿನ ಮೂಲ ಯಾವುದು ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಐಪಿಎಲ್ ಟೂರ್ನಿ ಬಹು ದೊಡ್ಡ ಆಸ್ತಿ. ಬಿಸಿಸಿಐನ ಬೊಕ್ಕಸವನ್ನು ತುಂಬಿ ತುಳುಕುವಂತೆ ಮಾಡುವ ಐಪಿಎಲ್ ಟೂರ್ನಿ ಚಿನ್ನದ ಮೊಟ್ಟೆ ಇಡುವ ಕೋಳಿ. ಹೀಗಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸುವ ಅವಕಾಶಗಳೇ ಇರಲಿಲ್ಲ. ಹೇಗಾದ್ರೂ ಮಾಡಿ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲೇಬೇಕು ಎಂಬ ಹಠ ಬಿಸಿಸಿಐಗಿತ್ತು. ಇದಕ್ಕಾಗಿಯೇ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಕೂಡ ರದ್ದು ಮಾಡುವಂತೆ ಐಸಿಸಿ ಮೇಲೆ ಒತ್ತಡ ಹೇರುವುದಕ್ಕೂ ಹಿಂದೆ ಮುಂದೆ ನೋಡಲ್ಲ. ಒಂದು ಮೂಲದ ಪ್ರಕಾರ ಬಿಸಿಸಿಐನ ಒತ್ತಡಕ್ಕೆ ಮಣಿದು ಐಸಿಸಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿರುವುದು ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ಮಾತು ನಿಜವಾಗಿದ್ರೂ ಅಚ್ಚರಿ ಏನಿಲ್ಲ. ಯಾಕಂದ್ರೆ ಐಸಿಸಿಗೂ ಬಿಸಿಸಿಐ ಬೇಕೇ ಬೇಕು.
ಅದೇನೇ ಇರಲಿ, ಐಪಿಎಲ್ ಟೂರ್ನಿಯಲ್ಲಿ ಹಣ ನೀರಿನಂತೆ ಹರಿದು ಬರುತ್ತಿದೆ. ಫ್ರಾಂಚೈಸಿಗಳ ದುಡ್ಡು, ಜಾಹಿರಾತು, ನೇರ ಪ್ರಸಾರದ ಹಕ್ಕು, ಕಾರ್ಪರೇಟ್ ಕಂಪೆನಿಗಳು ಹೀಗೆ ಐಪಿಎಲ್‍ಗೆ ಎಲ್ಲಾ ಮೂಲಗಳಿಂದಲೂ ದುಡ್ಡು ಬರುತ್ತದೆ. ಹಾಗಿದ್ರೆ ಬಿಸಿಸಿಐ ಈ ದುಡ್ಡು ಅನ್ನು ಏನು ಮಾಡುತ್ತೆ ಅನ್ನೋದಕ್ಕೂ ಉತ್ತರ ಇಲ್ಲಿದೆ. ಬಿಸಿಸಿಐ ಮಾಜಿ ಕಾರ್ಯದರ್ಶಿ, ಅಧ್ಯಕ್ಷ ದಿ. ಜಗ್‍ಮೋಹನ್ ದಾಲ್ಮಿಯ ಅವರ ದೂರದೃಷ್ಟಿ, ವಂಚಕನಾಗಿದ್ರೂ ಚಾಣಕ್ಯ ಲಲಿತ್ ಮೋದಿಯ ತಂತ್ರಗಾರಿಕೆಯಿಂದ ಇವತ್ತು ಬಿಸಿಸಿಐ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದ್ದು. ಹಾಗೇ ಐಪಿಎಲ್ ಈ ಮಟ್ಟದಲ್ಲಿ ಖ್ಯಾತಿ ಗಳಿಸಲು ಸಾಧ್ಯವಾಗಿದ್ದು ಎಂಬುದನ್ನು ಮರೆಯುವ ಹಾಗಿಲ್ಲ.
ವಿಶ್ವ ಕ್ರಿಕೆಟ್ ನಲ್ಲಿ ಬಿಸಿಸಿಐಗೆ ತನ್ನದೇ ಆದ ಸ್ಥಾನ ಮಾನವಿದೆ. ಎಲ್ಲವನ್ನೂ ದುಡ್ಡಿನಿಂದಲೇ ಲೆಕ್ಕಚಾರ ಮಾಡುವ ಬಿಸಿಸಿಐ ಹೇಳಿದ ಹಾಗೇ ಇನ್ನುಳಿದ ಕ್ರಿಕೆಟ್ ಸಂಸ್ಥೆಗಳು ಕುಣಿಯುತ್ತವೆ. ಯಾಕಂದ್ರೆ ಬಿಸಿಸಿಐ ಅನ್ನು ಎದುರು ಹಾಕಿಕೊಂಡ್ರೆ ಹಣ ಬರುವುದಿಲ್ಲ ಎಂಬ ಲೆಕ್ಕಚಾರವೂ ಬೇರೆ ಬೇರೆ ಕ್ರಿಕೆಟ್ ಸಂಸ್ಥೆಗಳದ್ದು. ಅಷ್ಟೇ ಅಲ್ಲ, ಟೀಮ್ ಇಂಡಿಯಾ ವಿರುದ್ಧದ ಸರಣಿಯನ್ನು ಕೂಡ ಬೇರೆ ಕ್ರಿಕೆಟ್ ತಂಡಗಳ ಮಂಡಳಿಗಳು ಕಾತರದಿಂದ ಕಾಯುತ್ತಿರುತ್ತವೆ. ಇನ್ನು ಐಪಿಎಲ್ ಅಷ್ಟೇ. ವಿದೇಶಿ ಆಟಗಾರರು ಕೋಟಿ ಕೋಟಿ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದಾರೆ. ಇದು ಅಲ್ಲಿನ ಕ್ರಿಕೆಟ್ ಮಂಡಳಿಗೂ ಸಹಾಯವಾಗುತ್ತದೆ.
ಈ ವರ್ಷ ಅಂದ್ರೆ 2020ರ ಐಪಿಎಲ್ ಭವಿಷ್ಯ ಬಹುತೇಕ ಮುಗಿದೇ ಹೋಯ್ತು ಅಂತ ಎಲ್ಲರೂ ಭಾವಿಸಿದ್ದರು. ಆದ್ರೆ ಬಿಸಿಸಿಐ ಸಮಯಕ್ಕಾಗಿ ಕಾಯುತ್ತಿತ್ತು. ಈ ನಡುವೆ, ಶ್ರೀಲಂಕಾ, ಯುಎಇ ಕ್ರಿಕೆಟ್ ಮಂಡಳಿಗಳು ಕೂಡ ಐಪಿಎಲ್ ಆತಿಥ್ಯಕ್ಕೆ ಮುಂದೆ ಬಂದಿದ್ದವು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈಗ ಯುಎಇನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ಆಯೋಜನೆ ಮಾಡಲಿದೆ. ಇದಕ್ಕೆ ಈಗ ಭಾರತ ಸರ್ಕಾರದ ಅನುಮತಿಯೊಂದು ಬೇಕಿದೆ ಅಷ್ಟೇ.
ಬಿಸಿಸಿಐ ಬೊಕ್ಕಸ ತುಂಬತ್ತಿರುವ ಐಪಿಎಲ್‍ನ ಹಣದ ಮೂಲ ಏನು ?
ಹೌದು, ಬಿಸಿಸಿಐ ಬೊಕ್ಕಸ ತುಂಬುತ್ತಿರುವ ಐಪಿಎಲ್ ಹಣದ ಮೂಲವನ್ನು ಹುಡಕಿದಾಗ ಅದೊಂದು ನಿಧಿ ಎಂದು ಹೇಳಬಹುದು. ಇಲ್ಲಿ ಬಗೆದಷ್ಟು ಸಂಪತ್ತು ಸಿಗುತ್ತದೆ.

Related posts

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (30-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

April 30, 2026
ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

April 30, 2026

ಪಂದ್ಯಗಳ ನೇರ ಪ್ರಸಾರದಿಂದ 3300 ಕೋಟಿ ರೂಪಾಯಿ.
ಬಿಸಿಸಿಐಗೆ ಐಪಿಎಲ್ ಪಂದ್ಯಗಳ ನೇರ ಪ್ರಸಾರದಿಂದಲೇ 3300 ಕೋಟಿ ರೂಪಾಯಿ ಸಿಗುತ್ತದೆ. ಸ್ಟಾರ್ ಟಿವಿ ಗ್ರೂಪ್ ಈಗಾಗಲೇ 2000 ಕೋಟಿ ರೂಪಾಯಿಯನ್ನು ಮುಂಗಡವಾಗಿ ಪಾವತಿಸಿದೆ.
ಟೈಟಲ್ ಪ್ರಾಯೋಜಕತ್ವದಿಂದ 440 ಕೋಟಿ ರೂ.
ಇನ್ನು ಐಪಿಎಲ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವದಿಂದ ಬಿಸಿಸಿಐ ಬೊಕ್ಕಸಕ್ಕೆ 440 ಕೋಟಿ ರೂಪಾಯಿ ಸಿಗುತ್ತದೆ. ಚೈನಾ ಮೂಲದ ಮೊಬೈಲ್ ಕಂಪೆನಿಯಾಗಿರುವ ವಿವೋ ಬಿಸಿಸಿಐ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ನಡುವೆ ಇಂಡೋ -ಚೀನಾ ಬಾರ್ಡರ್ ನಲ್ಲಿ ಆಗಿರುವ ಸಮಸ್ಯೆ ಚೀನಾ ಮೂಲದ ವಿವೋ ಕಂಪೆನಿಗೆ ತೊಂದರೆಯನ್ನುಂಟು ಮಾಡಬಹುದು. ಆದ್ರೆ ಬಿಸಿಸಿಐ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಇನ್ನಿತರ ಪ್ರಾಯೋಜಕತ್ವದಿಂದ 170 ಕೋಟಿ ರೂ.
ಇನ್ನು ಐಪಿಎಲ್ ಟೂರ್ನಿಯ ವೇಳೆ ಅನೇಕ ಕಂಪೆನಿಗಳು ಪ್ರಾಯೋಜಕತ್ವವನ್ನು ನೀಡುತ್ತಿವೆ. ಇದರಿಂದ ಬಿಸಿಸಿಐಗೆ ಸುಮಾರು 170 ಕೋಟಿ ರೂಪಾಯಿ ಸಿಗುತ್ತದೆ. ಡ್ರೀಮ್ 11, ಪೇಟಿಎಂ, ಸಿಇಎಟಿ, ಸೇರಿದಂತೆ ಅನೇಕ ಕಂಪೆನಿಗಳು ಪ್ರಾಯೋಜಕತ್ವ ನೀಡುತ್ತಿವೆ.
ಇನ್ನು ಐಪಿಎಲ್ ಫ್ರಾಂಚೈಸಿಗಳು ಕೂಡ ಐಪಿಎಲ್ ಪಂದ್ಯದಲ್ಲಿ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಆಟಗಾರರ ಕಿಟ್, ಬ್ರ್ಯಾಂಡ್ ಸೇರಿದಂತೆ ಅನೇಕ ಮೂಲಗಳಿಂದ ಹಣದ ಹೊಳೆಯೇ ಹರಿದು ಬರುತ್ತದೆ. ಹೀಗಾಗಿ ಐಪಿಎಲ್ ಬಿಸಿಸಿಐ, ಫ್ರಾಂಚೈಸಿಗಳು ಸೇರಿದಂತೆ ಎಲ್ಲರಿಗೂ ನಿಧಿ ಎಂದರೇ ತಪ್ಪಾಗಲಾರದು.
ಬಿಸಿಸಿಐ ಈ ಹಣವನ್ನು ಏನು ಮಾಡುತ್ತದೆ.. ?
ಕೋಟಿ ಕೋಟಿ ದುಡ್ಡು ಹರಿದು ಬಂದ್ರೂ ಬಿಸಿಸಿಐಗೆ ಖರ್ಚು ಕೂಡ ಇದೆ. ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿ ಉಳಿದಂತಹ ಹಣವನ್ನು ಬಿಸಿಸಿಐ ಆಟಗಾರರ ವೇತನ ಸೇರಿದಂತೆ ದೇಸಿ ಕ್ರಿಕೆಟ್‍ಗೆ ಭರಿಸುತ್ತದೆ. ಪ್ರತಿ ವರ್ಷ ಬಿಸಿಸಿಐ ಸುಮಾರು 20000 ದೇಸಿ ಪಂದ್ಯಗಳನ್ನು ಆಡಿಸುತ್ತದೆ. ಇದಕ್ಕೆಲ್ಲಾ ಈ ಹಣವನ್ನು ವಿನಿಯೋಗ ಮಾಡಲಾಗುತ್ತದೆ.
ಈ ಬಾರಿ ಜಾಸ್ತಿ ಹಣ ಉಳಿಯಲ್ಲ… ?
ಕೋವಿಡ್ -19ನಿಂದಾಗಿ ಈ ಬಾರಿಯ ಐಪಿಎಲ್ ನಲ್ಲಿ ಬಿಸಿಸಿಐಗೆ ಸಾಕಷ್ಟು ಖರ್ಚು ಇದೆ. ಯುಎಇ ಕ್ರಿಕೆಟ್ ಸಂಸ್ಥೆಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಹಾಗೇ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐಗೆ ಈ ಬಾರಿಯ ಐಪಿಎಲ್ ನಲ್ಲಿ ಲಾಭಂಶ ಕಡಿಮೆಯಾಗಬಹುದು. ಅದೂ ಅಲ್ಲದೇ ಈ ಬಾರಿಯ ಐಪಿಎಲ್ ಪ್ರೇಕ್ಷಕರಿಲ್ಲದೇ ಆಡಬೇಕಾಗುತ್ತದೆ. ಇಲ್ಲೂ ಕೂಡ ಬಿಸಿಸಿಐಗೆ ನಷ್ಟವಾಗುತ್ತದೆ. ಒಟ್ಟಿನಲ್ಲಿ ಬಿಸಿಸಿಐ ಹೆಚ್ಚಿನ ಲಾಭವಿಲ್ಲದಿದ್ರೂ ತನ್ನ ಪ್ರತಿಷ್ಠೆ ಹಾಗೂ ಮುಂಗಡವಾಗಿ ಪಾವತಿಸಿರುವ ಹಣವನ್ನು ಹಿಂತಿರುಗಿಸಬಾರದು ಎಂಬ ಲೆಕ್ಕಾಚಾರವಿಟ್ಟುಕೊಂಡೇ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲಾಗುತ್ತಿದೆ.

Tags: bccicskdelhi capitalsIndian cricketIPLIPL 2020kings 11 punjabkkrmubai indiansRCBsunrisiers hydrabadteam indiaUAE
ShareTweetSendShare
Join us on:

Related Posts

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (30-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 30, 2026
0

ದಿನ ಭವಿಷ್ಯ : 30-04-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಅತ್ಯಂತ ಸಕ್ರಿಯವಾದ ದಿನವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸವು ಶಿಖರದಲ್ಲಿರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ವ್ಯಾಪಾರಸ್ಥರಿಗೆ...

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

by Shwetha
April 30, 2026
0

ಪಂಚರಾಜ್ಯಗಳ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಭಾರೀ ಸಂಚಲನ ಶುರುವಾಗಿದೆ. ಇಲ್ಲಿಯವರೆಗೆ ಚುನಾವಣಾ ಪ್ರಚಾರದ ನೆಪದಲ್ಲಿ ನಾಯಕತ್ವ ಬದಲಾವಣೆಯ ವಿಷಯವನ್ನು ಮುಂದೂಡುತ್ತಾ ಬಂದಿದ್ದ...

ಬಿಜೆಪಿ ಸೋತರೆ ಮೋದಿ ರಾಜೀನಾಮೆ ಕೊಡಲಿ: ಡೆರೆಕ್ ಓಬ್ರಿಯಾನ್ ಸವಾಲು

ಬಿಜೆಪಿ ಸೋತರೆ ಮೋದಿ ರಾಜೀನಾಮೆ ಕೊಡಲಿ: ಡೆರೆಕ್ ಓಬ್ರಿಯಾನ್ ಸವಾಲು

by Shwetha
April 30, 2026
0

ಪಶ್ಚಿಮ ಬಂಗಾಳ ರಾಜಕೀಯ ಕಣ ತೀವ್ರಗೊಂಡಿರುವ ನಡುವೆ, ಡೆರೆಕ್ ಓಬ್ರಿಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ಸವಾಲು ಹಾಕಿದ್ದಾರೆ. ಬಂಗಾಳದ ಎಲ್ಲಾ 294 ವಿಧಾನಸಭಾ...

ಮಲ್ಲಿಕಾರ್ಜುನ ಖರ್ಗೆ ಸಿಎಂ? ಗೃಹ ಸಚಿವರ ಅಚ್ಚರಿ ಹೇಳಿಕೆ

ಮಲ್ಲಿಕಾರ್ಜುನ ಖರ್ಗೆ ಸಿಎಂ? ಗೃಹ ಸಚಿವರ ಅಚ್ಚರಿ ಹೇಳಿಕೆ

by Shwetha
April 30, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದ್ರೆ ಸಂತೋಷ, ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮಗಳ...

ದೀದಿಗೆ ಭಾರೀ ಆಘಾತ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಜಯಭೇರಿ ! ಎಕ್ಸಿಟ್ ಪೋಲ್ ಸಮೀಕ್ಷೆಗಳ ಕಂಪ್ಲೀಟ್ ರಿಪೋರ್ಟ್

ದೀದಿಗೆ ಭಾರೀ ಆಘಾತ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಜಯಭೇರಿ ! ಎಕ್ಸಿಟ್ ಪೋಲ್ ಸಮೀಕ್ಷೆಗಳ ಕಂಪ್ಲೀಟ್ ರಿಪೋರ್ಟ್

by Shwetha
April 30, 2026
0

ಪಶ್ಚಿಮ ಬಂಗಾಳದ ಮತದಾನ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ದೇಶಾದ್ಯಂತ ಕುತೂಹಲ ಮೂಡಿಸಿದ್ದ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಈ ಫಲಿತಾಂಶಗಳು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram