ಚಿಕ್ಕಮಗಳೂರು:ಅಂಗವಿಕಲ ಮಹಿಳೆಯೊಬ್ಬರು ಕಾಫಿ ತೋಟದ (Coffe Estate) ಎದುರು ರಸ್ತೆ ಬದಿ ಪೆಟ್ಟಿಗೆ ಅಂಗಡಿ (Shop) ತೆರದಿದ್ದಕ್ಕೆ ಆಕ್ರೋಶಗೊಂಡ ಮಾಲಿಕ ಅದನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.
ಮೂಡಿಗೆರೆ (Mudigere) ತಾಲೂಕಿನ ಬಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗೂಡಂಗಡಿ ನಡೆಸುತ್ತಿದ್ದರು. ಅಂಗವಿಕಲವಿರುವ ಪತ್ನಿಗಾಗಿ ಗ್ರಾಪಂ ಅನುಮತಿ ಪಡೆದು ಪತಿ ರಾಜು 15 ದಿನಗಳ ಹಿಂದೆ ರಸ್ತೆ ಬದಿ ಅಂಗಡಿ ತೆರದಿದ್ದರು. ಮಹಿಳೆ ಅಂಗಡಿಯನ್ನು ನಡೆಸುತ್ತಿದ್ದರು. ಮಾಲೀಕ ವಿದ್ಯಾಶ್ರೀ ಸತ್ಯೇಂದ್ರ ಎಂಬುವವರೇ ಧ್ವಂಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಾವಿದ್ಯಾಶ್ರೀ ಸತ್ಯೇಂದ್ರ ಅವರ ಈ ವರ್ತನೆಯಿಂದ ಬಡ ಅಂಗವಿಕಲ ಮಹಿಳೆ ಕಂಗಾಲು ಆಗಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.