ಸಿಡಿ ಪ್ರಕರಣವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ : ಡಿ.ವಿ.ಸದಾನಂದಗೌಡ
ಬೆಂಗಳೂರು : ಸಿಡಿ ಪ್ರರಕಣವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಬಹಿರಂಗವಾಗುತ್ತಿದ್ದಂತೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದೆ.
ಬಾಂಬೆ ಫ್ರೆಂಡ್ಸ್ ಎಂದೇ ಗುರುತಿಸಿಕೊಂಡಿರುವ ಸಚಿವರು ಮತ್ತು ಶಾಸಕರು ಇದೀಗ ಕೋರ್ಟ್ ಮೊರೆ ಹೋಗಿರುವುದು ಹಲವಾರು ಗೊಂದಲ ಮತ್ತು ಅನುಮಾನಗಳಿಗೆ ಕಾರಣವಾಗಿದೆ.
ತಮ್ಮ ಮಾನಹಾನಿಕಾರಕ ಸುದ್ದಿಗಳನ್ನ ಪ್ರಸಾರ ಮಾಡದಂತೆ ಸಚಿವರು ಕೋರ್ಟ್ ಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಸಿಡಿ ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ.
ನಾವು ಕೇಂದ್ರದ ವರಿಷ್ಟರ ಗಮನಕ್ಕೆ ತಂದ ಕಾರಣದಿಂದಲೇ ಅವರು ರಾಜೀನಾಮೆ ಕೊಡುವಂತಾಯ್ತು. ಈಗ ಇನ್ನೂ 20 ಸಚಿವರು ಕೋರ್ಟ್ ಮೆಟ್ಟಿಲೇರುತ್ತಾರೆ ಎಂಬುದನ್ನು ಕೇಳಿದೆ.
ಇದು ನೈತಿಕತೆ ಪ್ರಶ್ನೆ, ಸಾರ್ವಜನಿಕ ಜೀವನದಲ್ಲಿ ಇರುವವರು ತುಂಬ ಎಚ್ಚರಿಕೆಯಿಂದ ಇರಬೇಕಾದ ಸೂಕ್ಷ್ಮ ವಿಚಾರ ಹಾಗಾಗಿ ಕೋರ್ಟ್ ಗೆ ಹೋಗಿ ಇದನ್ನು ಮತ್ತಷ್ಟು ಗೊಂದಲ ಮಾಡಿಕೊಳ್ಳುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.