ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಯಾವತ್ತು ಪ್ರಿಂಟಿಂಗ್‌ ಪ್ರೆಸ್‌ಗಳು ಪತ್ರಿಕೆಯ ಮುದ್ರಣ ನಿಲ್ಲಿಸುತ್ತವೆಯೋ ಅವತ್ತೇ ಮುದ್ರಣ ಮಾಧ್ಯಮ ಸಾಯುತ್ತದೆ; ಓದುವ ಸಂಸ್ಕೃತಿಯೂ ನಾಶವಾಗುತ್ತದೆ:

Shwetha by Shwetha
October 9, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Marjala manthana Printing press
Share on FacebookShare on TwitterShare on WhatsappShare on Telegram

ಯಾವತ್ತು ಪ್ರಿಂಟಿಂಗ್‌ ಪ್ರೆಸ್‌ಗಳು ಪತ್ರಿಕೆಯ ಮುದ್ರಣ ನಿಲ್ಲಿಸುತ್ತವೆಯೋ ಅವತ್ತೇ ಮುದ್ರಣ ಮಾಧ್ಯಮ ಸಾಯುತ್ತದೆ; ಓದುವ ಸಂಸ್ಕೃತಿಯೂ ನಾಶವಾಗುತ್ತದೆ: Marjala manthana Printing press

ಕಾಲ ಬದಲಾದಂತೆ ತಂತ್ರಜ್ಞಾನ ಮುಂದುವರೆದಂತೆ ಹಳೆಯ ಮಾಧ್ಯಮಗಳು ಮೂಲೆಗೆ ಸರಿದು ಹೊಸದು ಅದರ ಜಾಗ ಆಕ್ರಮಿಸಿಕೊಳ್ಳುವುದು ಒಂದು ಸಾಮಾನ್ಯ ಪ್ರಕ್ರಿಯೆ. ಕ್ಯಾಲ್ಕುಲೇಟರ್‌, ಟೈಪ್‌ರೈಟರ್‌ ಜಾಗದಲ್ಲಿ ಕಂಪ್ಯೂಟರ್‌ ಬಂದಿತು. ಹಾಗಂತ ಇವತ್ತಿಗೂ ಕ್ಯಾಲ್ಕುಲೇಟರ್‌ ಮತ್ತು ಟೈಪ್‌ರೈಟರ್‌ಗಳು ಹೋಗೇಬಿಟ್ಟವು ಅಂತಲ್ಲ. ಅವುಗಳ ಬಳಕೆ ಕಡಿಮೆಯಾಯಿತು. ಟೆಲಿಫೋನ್‌ ಜಾಗದಲ್ಲಿ ಮೊಬೈಲ್‌, ಸ್ಮಾರ್ಟ್‌ಫೋನ್‌ಗಳು ಬಂದವು. ಆದರೂ ಇನ್ನೂ ಟೆಲಿಫೋನ್‌ ಬಳಕೆಯಲ್ಲಿದೆ. ನಾಶವಾಗಿದ್ದು ಪೇಜರ್‌ ಮಾತ್ರ. ರೇಡಿಯೋ ಸತ್ತೇ ಹೋಗಲಿಲ್ಲ, ಅದರ ಬದಲು ಎಫ್‌ಎಂ ಆಗಿ ಹೊಸ ರೂಪ ಧರಿಸಿ ಚಾಲ್ತಿಯಲ್ಲಿದೆ. ಹೀಗೆಯೇ! ಹಳೆಯದರ ಬದಲು ಹೊಸತು, ಹಳೆಯದರ ಮಾರ್ಪಾಡು, ಹೊಸತು ಆವಿಷ್ಕಾರ ಇವೆಲ್ಲವೂ ಲಾಗಾಯ್ತಿನಿಂದಲೂ ನಡೆಯುತ್ತಲೇ ಬಂದಿದೆ. ಸುದ್ದಿಮನೆಯಲ್ಲಿಯೂ ಈ ಪ್ರಕ್ರಿಯೆ ನಡೆದೇ ಇದೆ. ಟಿವಿ ಮಾಧ್ಯಮ ಅದರಲ್ಲೂ ೨೪/೭ ಸುದ್ದಿ ವಾಹಿನಿಗಳು ಬಂದ ಕೂಡಲೇ ಪತ್ರಿಕೆ ಸಾಯುತ್ತದೆ ಎನ್ನುತ್ತಿದ್ದರು. ಆದರೆ ಅವತ್ತೂ ಪತ್ರಿಕೆ ಉಳಿದಿತ್ತು. ಇವತ್ತು ಇಂಟರ್ನೆಟ್‌, ವೆಬ್‌ ದುನಿಯಾ. ಆಗ ಘಟಿಸುವ ಸಂಗತಿಗಳನ್ನು ಆಗಲೇ ವರದಿ ಮಾಡಬಲ್ಲ ಅಂತರ್ಜಾಲ ಮಾಧ್ಯಮಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಂಟರ್ನೆಟ್‌ ಆಧಾರಿತ ವೆಬ್‌ ನ್ಯೂಸ್‌ ಮ್ಯಾಗ್ಜಿನ್‌ಗಳನ್ನು ಫ್ಯೂಚರ್‌ ಎನ್ನಲಾಗುತ್ತಿದೆ. ಈಗಲೂ ಪತ್ರಿಕೆಗಳು ನೇಪಥ್ಯಕ್ಕೆ ಸರಿಯುತ್ತವೆ ಎನ್ನಲಾಗುತ್ತಿದೆ. ಆದರೆ ಫ್ಯಾಕ್ಟ್‌ ಏನೆಂದರೆ ಪತ್ರಿಕೆ ಯಾವತ್ತೂ ಸಾಯುವುದಿಲ್ಲ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಪತ್ರಿಕೆ ಅಥವಾ ಮುದ್ರಣ ಮಾಧ್ಯಮ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜನರೇಷನ್‌ ಬದಲಾದಾಗ ಅದರ ಅಸ್ಥಿತ್ವ ಸ್ವಲ್ಪ ಅಲುಗಾಡಬಹುದು ಅಷ್ಟೆ. ಸಂಪೂರ್ಣ ನಾಶವಾಗುತ್ತದೆ ಎನ್ನುವುದು ಸುಳ್ಳು.
Marjala manthana Printing press

Related posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

August 13, 2026

ಕೋವಿಡ್‌ ಬಂದ ನಂತರ ನಮ್ಮ ಪತ್ರಿಕೆಗಳ ಪುಟಗಳು ಕಡಿಮೆಯಾದವು. ಸಾಪ್ತಾಹಿಕ ಸಂಚಿಕೆಗಳು ನಿಂತೇಹೋದವು. ದೊಡ್ಡ ದೊಡ್ಡ ಪತ್ರಿಕಾ ದಿಗ್ಗಜರುಗಳಾದ ಟೈಮ್ಸ್‌ ಗ್ರೂಪ್‌, ಇಂಡಿಯನ್‌ ಎಕ್ಸ್‌ಪ್ರೆಸ್‌, ಹಿಂದೂ, ಮಣಿಪಾಲ್‌ ಮುಂತಾದವು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಿತು, ಸಂಬಳ ಅರ್ಧಕ್ಕಿಳಿಸಿತು. ಪುಟಗಳು ಸಂಖ್ಯೆ ಕಡಿಮೆಯಾಯಿತಾದರೂ ಪತ್ರಿಕೆಗಳು ನಿಲ್ಲಲಿಲ್ಲ. ಯಾಕಂದರೆ ಪತ್ರಿಕಾ ಮಾರುಕಟ್ಟೆಯ ಆಡ್‌ ರೆವಿನ್ಯೂ ಮಾರ್ಕೆಟ್‌ ಅತಿ ವಿಸ್ತಾರವಾದುದ್ದು. ಸರ್ಕಾರಗಳ ನೋಟಿಫಿಕೇಶನ್‌ಗಳಿಂದ, ಹರಾಜು ಪ್ರಕ್ರಿಯೆ ಸೂಚನೆಗಳು, ಕ್ಲಾಸಿಫೈಡ್‌ಗಳು ಟೆಂಡರ್‌ ಪ್ರಕ್ರಿಯೆ ಅಧಿಸೂಚನೆ ಇತ್ಯಾದಿ ಆಡಳಿತಾತ್ಮಕ ಸೂಚನೆ ರವಾನಿಸಲು ಇರುವ ಏಕೈಕ ಮಾಧ್ಯಮ ಪತ್ರಿಕೆ ಮಾತ್ರ. ನಮ್ಮ ಭಾರತದ ಭಾಗ್ಯ ವಿಧಾತ ಪ್ರಧಾನಿಗಳಂತೂ ವರ್ಷಾ ವರ್ಷ ೨೦೦೦ ಕೋಟಿಗೂ ಹೆಚ್ಚು ಜಾಹಿರಾತು ಹಣವನ್ನು ಮುದ್ರಣ ಮಾಧ್ಯಮಗಳಿಗೆ ನೀಡುತ್ತಾರೆ. ಪ್ರತಿ ರಾಜ್ಯಗಳ ಸರ್ಕಾರಗಳೂ ರಾಜ್ಯದ ಮತ್ತು ಕೇಂದ್ರದ ಯೋಜನೆಯ ಶುರುವಾತನ್ನು ದೊಡ್ಡ ದೊಡ್ಡ ಪುಟಗಳ ಜಾಹಿರಾತು ನೀಡಿ ಮುದ್ರಣ ಮಾಧ್ಯಮವನ್ನು ಪೋಷಿಸುತ್ತವೆ. ಖಾಸಗಿ ಸಂಸ್ಥೆಗಳಿಗೂ ಮುದ್ರಣ ಮಾಧ್ಯಮದ ಜಾಹಿರಾತು ಅನಿವಾರ್ಯ. ಯಾಕಂದರೆ ಟಿವಿ ಮಾಧ್ಯಮದಲ್ಲಿ ಇಲ್ಲದ ಒಂದು ಅಡ್ವಾಂಟೇಜ್‌ ಮುದ್ರಣ ಮಾಧ್ಯಮದಲ್ಲಿದೆ. ಅದು ಡಾಕ್ಯಮೆಂಟೇಶನ್‌; ಅಧಿಕೃತ ದಾಖಲೀಕರಣ.

ನಮ್ಮ ಹಿಂದಿನ ತಲೆಮಾರು ಮತ್ತು ನಮ್ಮ ತಲೆಮಾಡಿನವರಿಗೆ ಪತ್ರಿಕೆ ಸಾಂಗತ್ಯ ಅತ್ಯಂತ ಅನಿವಾತರ್ಯ ದೈನಂದಿನ ಚಟುವಟಿಕೆ. ನಮ್ಮಲ್ಲಿ ಬಹಳಷ್ಟು ಜನರಿಗೆ ಬೆಳ್ಳಂಬೆಳಿಗ್ಗೆ ಒಂದು ಕಪ್‌ ಕಾಫಿಯ ಜೊತೆ ಪತ್ರಿಕೆ ಓದದೇ ಇದ್ದರೆ ವಿಸರ್ಜನೆಯೇ ಆಗುವುದಿಲ್ಲ. ಎಷ್ಟೆ ಡಿಜಿಟಲ್‌ ಸ್ವರೂಪದ ಪತ್ರಿಕೋದ್ಯಮ ಜಾರಿಯಾದರೂ ಹಾರ್ಡ್‌ ಕಾಪಿ ಓದುವ ಸುಖವಿದೆಯಲ್ಲ ಅದನ್ನು ಯಾವ ವೆಬ್‌ ಚಾನೆಲ್‌ಗಳೂ ಮಾಡುವುದಿಲ್ಲ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ ಅನ್ನುವುದು ಒಂದು ಮಿಥ್‌ ಅಷ್ಟೆ. ಓದುಗರು ಇದ್ದೇ ಇರುತ್ತಾರೆ ಅವರಿಗೆ ಉತ್ತಮವಾದುದ್ದನ್ನು ಕೊಡಬೇಕಿರುವುದು ಪತ್ರಕರ್ತರನ ಕರ್ತವ್ಯ ಮತ್ತು ಪತ್ರಿಕಾ ಧರ್ಮ ಅಷ್ಟೆ. ಇವತ್ತಿನ ಪೀಳಿಗೆಯ ಬಹಳಷ್ಟು ಮಂದಿ ಮೊಬೈಲ್‌ ದಾಸರಾಗಿರುವ ಕಾರಣ ಎಲ್ಲವೂ ಅಂತರ್ಜಾಲದಲ್ಲೇ ಬೇಕು. ಒಂದು ವೇಳೆ ಅಂತರ್ಜಾಲದ ಮೇಲೆ ನಿಯಂತ್ರಣ ಹೇರಲ್ಪಟ್ಟರೇ ಅಥವಾ ಇಂಟರ್ನೆಟ್‌ ಬಳಕೆ ಅಪಾಯಗಳು ಮಿತಿಮೀರಿದಾಗ ಮತ್ತೆ ಯಥಾ ಪ್ರಕಾರ ಈ ಜನಸಮೂಹ ಮುದ್ರಣ ಮಾಧ್ಯಮದತ್ತ ಹೊರಳುತ್ತಾರೆ. ಪತ್ರಿಕೆ ಅಥವಾ ಪತ್ರಿಕೋದ್ಯಮವಿಲ್ಲದ ಜನಸಮಾಜ ಇರಲು ಸಾಧ್ಯವೇ ಇಲ್ಲ. ಎಷ್ಟೇ ಆಧುನಿಕ ತಂತ್ರಜ್ಞಾನ ಬದಲಾದರೂ ನಮ್ಮ ಮೈಂಡ್‌ ಸೆಟ್‌ ಬದಲಾಗುವುದಿಲ್ಲ. Marjala manthana Printing press

Marjala manthana Printing press
ಮುದ್ರಣ ಮಾಧ್ಯಮದ ಇತಿಹಾಸ ಬಹಳ ಪುರಾತನವಾದುದ್ದು. ಕ್ರಿ.ಶ ೮೬೮ರಲ್ಲಿ ಚೀನಾದಲ್ಲಿ ಪ್ರಕಟವಾದ ಮೊತ್ತಮೊದಲ ಮುದ್ರಿತ ಪುಸ್ತಕ ಡೈಮಂಡ್‌ ಸೂತ್ರ. 1041ರ ಹೊತ್ತಿಗೆ ಚೀನಿಯರು ಮಣ್ಣಿನ ಮುದ್ರಣ ಯಂತ್ರವನ್ನು ಬಳಸುತ್ತಿದ್ದರಂತೆ. ೧೨ನೇ ಶತಮಾನದಲ್ಲಿ ಉತ್ತರದ ಸಾಂಗ್‌ ಸಾಮ್ರಾಜ್ಯದ ಅವಧಿಯಲ್ಲಿ ಚೀನಿಯರು ತಾಮ್ರದ ಹಾಳೆಗಳುಳ್ಳು ಮುದ್ರಣ ಯಂತ್ರವನ್ನು ಕಂಡುಹಿಡಿದಿದ್ದರು. ಅದನ್ನು ಆಗ ದೊಡ್ಡ ಪ್ರಮಾಣದಲ್ಲಿ ಕರೆನ್ಸಿ ಪ್ರಿಂಟ್‌ ಮಾಡಲು ಮಾತ್ರ ಉಪಯೋಗಿಸಲಾಗುತ್ತಿತ್ತು. ನಂತರ ಈ ತಂತ್ರಜ್ಞಾನ ಮತ್ತಷ್ಟು ಅಪ್‌ಗ್ರೇಡ್‌ ಆಗಿ ಕೋರಿಯಾದ ಗೋರ್ಯೋ ಸಾಮ್ರಾಜ್ಯವನ್ನು ತಲುಪಿತು. ೧೨೩೦ರ ಸುಮಾರಿಗೆ ಕೊರಿಯನ್ನರು ಲೋಹದ ಮುದ್ರಣ ಯಂತ್ರ ಶುರುಮಾಡಿದರು, ಅದರಲ್ಲಿ ಕಂಚಿನ ಹಾಳೆ ಬಳಸಲಾಯಿತು. ಜರ್ಮನಿಯ ಮಿಯಾಂಜ್‌ ನ ರಾಜಕಾರಣಿ ಗೋಲ್ಡ್‌ಸ್ಮಿತ್‌ ಮತ್ತು ಜೋಹನ್ನೇಸ್‌ ಗುಟೇನ್‌ಬರ್ಗ್‌ ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿ ೧೪೪೦ರ ಸುಮಾರಿಗೆ ಮುದ್ರಣ ಮಾಧ್ಯಮದಲ್ಲಿ ಮತ್ತಷ್ಟು ಆಧುನಿಕತೆ ಸೇರಿಸಿ ಹೊಸ ನಮೂನೆಯ ಪ್ರಿಂಟಿಂಗ್‌ ಕೌಶಲ್ಯ ಪರಿಚಯಿಸಿದರು.

ಮುದ್ರಣ ಮಾಧ್ಯಮ ನಮ್ಮ ದೇಶದಲ್ಲಿ ಆರಂಭವಾಗಿದ್ದು 1780ರ ಪೂರ್ವಾರ್ಧದಲ್ಲಿ, ಸಮೂಹ ಸಂವಹನದ ಇನ್ನೊಂದು ಪ್ರಭಾವಿ ಮಾಧ್ಯಮ ರೇಡಿಯೋ ಶುರುವಾಗಿದ್ದು ೧೯೨೭ರಲ್ಲಿ. ಮೊತ್ತಮೊದಲು ಭಾರತದಲ್ಲಿ ಸುದ್ದಿ ಪತ್ರಿಕೆ ಪ್ರಕಟವಾಗಿದ್ದ ೨೯ ಜನವರಿ ೧೭೮೦ರಲ್ಲಿ. ಬ್ರಿಟೀಶ್‌ ರಾಜ್‌ ಅಧಿಪತ್ಯ ನಡೆಯುತ್ತಿದ್ದಾಗ ಜೇಮ್ಸ್‌ ಅಗಸ್ಟಸ್‌ ಹಿಕ್ಕಿ ಬೆಂಗಾಲ್‌ ಗೆಜೆಟ್‌ ಶುರು ಮಾಡಿದ. ಇದನ್ನು ಕೊಲ್ಕತ್ತದಲ್ಲಿ ಹಿಕ್ಕಿಸ್‌ ಗೆಜೆಟ್‌ ಎಂದೇ ಕರೆಯಲಾಗುತ್ತಿತ್ತಂತೆ. ಅದಾದ ನಂತರ ದಿನಪತ್ರಿಕೆ ಅಥವಾ ಮುದ್ರಣ ಮಾಧ್ಯಮ ಅತಿ ಹೆಚ್ಚು ಸಕ್ರಿಯವಾಗಿ ಜನಮಾನಸದ ಮಧ್ಯೆ ಸೇರಿಕೊಂಡಿದ್ದು ಭಾರತದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಸಂದರ್ಭದಲ್ಲಿ.

ಭಾರತೀಯ ಭಾಷೆಗಳ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಸಿಕೊಂಡವರು ರಾಜಾರಾಮ್‌ ಮೋಹನ್‌ ರಾಯ್. ಅವರ ಪ್ರಕಾಶನ ಸಂಸ್ಥೆಯಲ್ಲಿ ೧೮೨೧ರ ವೇಳೆಗೆ ಬೆಂಗಾಲಿ ಭಾಷೆಯಲ್ಲಿ ಸಂಬಂಧ್‌ ಕೌಮುದಿ ಅನ್ನುವ ಪತ್ರಿಕೆ ಮತ್ತು ೧೮೨೨ರಲ್ಲಿ ಮಿರತ್‌ ಉಲ್‌ ಅಕ್ಬರ್‌ ಅನ್ನುವ ಪರ್ಷಿಯನ್‌ ಭಾಷೆಯ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಸದ್ಯ ಭಾರತದಲ್ಲಿ ೪೦೦ ಸುದ್ದಿ ವಾಹಿನಿಗಳೂ ಸೇರಿದಂತೆ ಒಟ್ಟು 1,600 ಸ್ಯಾಟಲೈಟ್‌ ಚಾನೆಲ್‌ಗಳಿವೆ. ಆದರೂ ಭಾರತದ ನ್ಯೂಸ್‌ ಪೇಪರ್‌ ಮಾರುಕಟ್ಟೆ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಇಂದಿಗೂ ದೃಢವಾಗಿ ನಿಂತಿದೆಯೆಂದರೇ, ೧೦೦ ಮಿಲಿಯನ್‌ ನ್ಯೂಸ್‌ ಪೇಪರ್‌ ಕಾಪಿಗಳು ಪ್ರತಿನಿತ್ಯ ಮಾರುಕಟ್ಟೆ ತಲುಪುತ್ತವೆ. ಅಂದಹಾಗೆ ನಿಮಗೆ ನೆನಪಿರಲಿ ಭಾರತದ ಮೊತ್ತ ಮೊದಲ ದಿನಪತ್ರಿಕೆ ಹಿಕ್ಕಿ ಸಂಸ್ಥಾಪಿಸಿದ ಬೆಂಗಾಲ್‌ ಗೆಜೆಟ್‌ ಪ್ರಾರಂಭವಾಗಿದ್ದು ೧೭೮೦ರಲ್ಲಿ. ಅಂದಿನಿಂದ ಇಂದಿನವರೆಗೆ ಪತ್ರಿಕೆಗಳು ಬೆಳೆದು ನಿಂತ ಪರಿಯಿದೆಯಲ್ಲ ಇಟ್ಸ್‌ ಅಮೇಜಿಂಗ್! ೩೧ ಮಾರ್ಚ್‌ ೨೦೧೮ರ ಅಂತ್ಯದಲ್ಲಿ ದೆಹಲಿಯ ಆರ್‌ಎನ್‌ಐ ಬಹಿರಂಗ ಪಡಿಸಿದ ಮಾಹಿತಿಯ ಅನ್ವಯ ಭಾರತದಲ್ಲಿ ಒಟ್ಟು ೧ ಲಕ್ಷಕ್ಕೂ ಅಧಿಕ ರಿಜಿಸ್ಟರ್‌ ಆಗಿರುವ ಪತ್ರಿಕೆಗಳಿವೆ.
Marjala manthana Printing press
ವಿಶ್ವದಲ್ಲಿ ಭಾರತದ ಮುದ್ರಣ ಮಾಧ್ಯಮ ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಬೃಹತ್‌ ಗಾತ್ರದ ಪತ್ರಿಕಾ ಉದ್ಯಮವೆಂದು ಕರೆಸಿಕೊಳ್ಳುತ್ತದೆ. ಭಾರತದಲ್ಲಿ ಅತಿ ಹೆಚ್ಚಿ ಪ್ರಸರಣವುಳ್ಳ ಟೈಮ್ಸ್‌ ಆಫ್‌ ಇಂಡಿಯಾ ವಿಶ್ವದ ೮ನೇ ಅತಿ ಹೆಚ್ಚು ಪ್ರಸರಣವುಳ್ಳ ಪತ್ರಿಕೆಯೂ ಹೌದು. ಒಂದು ಮೂಲದ ಮಾಹಿತಿಯ ಪ್ರಕಾರ ಇದರ ಸರ್ಕ್ಯುಲೇಷನ್‌ 3.146 ಮಿಲಿಯನ್. ವಾರ್ತಾ ದಿನಪತ್ರಿಕೆಗಳು, ನಿಯತಕಾಲಿಕೆಗಳು ಪ್ರಟಕವಾಗುವ ಆಫ್‌ಸೆಟ್‌ ಪ್ರಿಂಟಿಂಗ್‌ ಪ್ರೆಸ್‌ನಿಂದ ರೋಟೋಗ್ರೇವುರ್‌ ಪ್ರಿಂಟಿಂಗ್‌, ಫ್ಲೆಕ್ಸೋಗ್ರಫಿ, ಡಿಜಿಟಲ್‌ ಪ್ರಿಂಟಿಂಗ್‌, ಸ್ಕ್ರೀನ್‌ ಪ್ರಿಂಟಿಂಗ್‌ ಹಾಗೂ ೩ಡಿ ಪ್ರಿಂಟಿಂಗ್‌ ತಂತ್ರಜ್ಞಾನದ ವರೆಗೆ ನಮ್ಮ ಮುದ್ರಣ ಮಾಧ್ಯಮದ ಟೆಕ್ನಾಲಜಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇವತ್ತು ನಾವು ದಿನಪತ್ರಿಕೆಗಳನ್ನು ಓದುತ್ತೇವೆ, ಜೊತೆಗೆ ಟ್ಯಾಬ್ಲಾಯ್ಡ್‌ಗಳಿವೆ, ಮ್ಯಾಗ್ಜಿನ್‌ಗಳಿವೆ. ಇವೆಲ್ಲವನ್ನೂ ಇ-ಬುಕ್‌ ಅಥವಾ ಪಿಡಿಎಫ್‌ ಸ್ವರೂಪದಲ್ಲಿ ಓದುವುದು ಅನಿವಾರ್ಯವಾದರೆ ಅದಕ್ಕಿಂತ ಪ್ರಯಾಸದ ವಿಚಾರ ಮತ್ತೊಂದಿಲ್ಲ. ಮುದ್ರಣಮಾಧ್ಯಮ ನಿಜಕ್ಕೂ ಸಾಯುವುದು ಆಗ ಮಾತ್ರ. ಯಾವತ್ತು ನಮ್ಮ ದೇಶದ ಮುದ್ರಣ ಯಂತ್ರಗಳು ಪತ್ರಿಕೆಯನ್ನು ಪ್ರಿಂಟ್‌ ಮಾಡುವುದನ್ನು ನಿಲ್ಲಿಸುತ್ತವೆಯೋ ಅವತ್ತೇ ನಮ್ಮ ಓದುವ ಸಂಸ್ಕೃತಿಯೂ ನಾಶವಾಗುತ್ತದೆ ನೆನಪಿಡಿ.

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Tags: marjala manthanaPrinting press
ShareTweetSendShare
Join us on:

Related Posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram