ADVERTISEMENT
Sunday, June 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ; ವಾತಾವರಣ ಹಿತಕರವಾಗಿಲ್ಲ ಎಲ್ಲಾ ಸರಿ…

admin by admin
May 13, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಆದ್ರೆ ಮೇ 3ರ ನಂತರವೂ ಲಾಕ್ ಡೌನ್ ಮುಂದುವರೆಸುವುದರ ಕುರಿತು ನನ್ನ ಸ್ಪಷ್ಟ ತಕರಾರು ಇದೆ. I dont support for this.

ರಾಜ್ಯಾದ್ಯಂತ, ದೇಶಾದ್ಯಂತ 144 ಸೆಕ್ಷನ್ ಇರಲಿ. ಸೋಶಿಯಲ್ ಡಿಸ್ಟೆನ್ಸಿಂಗ್ ಮತ್ತು ಮಾಸ್ಕ್ ಕಡ್ಡಾಯವಾಗಿ ಜಾರಿಯಲ್ಲಿರಲಿ, ಆದರೆ ಲಾಕ್ ಡೌನ್ ಮುಂದುವರೆಸುವ ನಿರ್ಧಾರ ಬೇಡ. ಮಧ್ಯಮ ವರ್ಗ ನಾಶವಾಗಿ ಹೋಗತ್ತೆ. ಕೆಳ ವರ್ಗದ ಜನ ತುತ್ತಿನ ಅನ್ನಕ್ಕೂ ಹಾಹಾಕಾರ ಎದುರಿಸಬೇಕಾಗತ್ತೆ. ಇದಕ್ಕಿಂತ ಕರೋನಾದಿಂದ ನರಳಿ ಸಾಯುವುದೇ ಉತ್ತಮ. ನೀವು ಕೊಡುವ ಉಚಿತ ರೇಷನ್ ಆಗಲಿ, ಹಾಲಾಗಲೀ ನಮ್ಮ ಈ ಭ್ರಷ್ಟ ವ್ಯವಸ್ಥೆಯಲ್ಲಿ ಬಡಜನರನ್ನು ಪೂರ್ತಿಯಾಗಿ ತಲುಪುವುದಿಲ್ಲ ಅನ್ನುವ ಸತ್ಯ ಒಪ್ಪಿಕೊಳ್ಳಿ.

Related posts

Victor Osimhen

ಕಸದ ರಾಶಿಯ ನಡುವೆ ಬೆಳೆದ ಹುಡುಗ ಇಂದು ಫುಟ್‍ಬಾಲ್ ಜಗತ್ತಿನ ಧ್ರುವತಾರೆ.. ಆದ್ರೂ ಫಿಫಾ ವಿಶ್ವಕಪ್ ಆಡುತ್ತಿಲ್ಲ ಯಾಕೆ..? ಇದೊಂದು ಸ್ಪೂರ್ತಿದಾಯಕ ಸ್ಟೋರಿ..!

June 20, 2026
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

June 20, 2026

ವಿಜ್ಞಾನ ಲೋಕದ ಪ್ರಕಾರ ಈ ವೈರಸ್ ಶಾಶ್ವತವಾಗಿಯಂತೂ ಸದ್ಯಕ್ಕೆ ನಾಶವಾಗಲ್ಲ, ಆದ್ರೆ ವೈರಸ್ ನಿಯಂತ್ರಣದ ಹೆಸರಲ್ಲಿ ನಾವೆಲ್ಲಾ ಖಂಡಿತಾ ನಾಶವಾಗ್ತೀವಿ. ನಮಗೆ ಅಮೇರಿಕಾ ಯೂರೋಪ್ ನ ರಾಷ್ಟ್ರಗಳಂತೆ ತಿಂಗಳಿಗೊಮ್ಮೆ ವೇತನ ಬರುವುದಿಲ್ಲ. ಅವತ್ತಿನ ಅನ್ನ ಅವತ್ತೇ ದುಡಿದು ಬದುಕುವ ಮೂರನೆ ಎರಡು ಭಾಗ ಜನಸಂಖ್ಯೆ ಇಲ್ಲಿ ಬದುಕುತ್ತಿದೆ. ಈಗಾಗಲೇ ಜನರಲ್ಲಿ ಸಣ್ಣಗೆ ಅರಿವು ಮೂಡುತ್ತಿದೆ. ಜನಜಾಗೃತಿ ಹೆಚ್ಚು ಮಾಡಲು ಯೋಚಿಸಿ. ಕೆಲವು ಉಪದ್ವ್ಯಾಪಿಗಳಿದ್ದಾರೆ ನಿಜ. ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ. ಕರೋನಾ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಒಂದಷ್ಟು ಹೆಚ್ಚಿನ ನಿಗಾ ಖಂಡಿತಾ ಬೇಕು. ಹಾಗಂತ ಇಡೀ ದೇಶದಲ್ಲಿ ಲಾಕ್ ಡೌನ್ ಮುಂದುವರೆಸೊದ್ರಲ್ಲಿ ಅರ್ಥವೇ ಇಲ್ಲ.

ಮಧ್ಯ ಪ್ರದೇಶದಲ್ಲಿರುವ ಭಾವ ಕಾಲ್ ಮಾಡಿದಾಗ ಹೇಳ್ತಿದ್ದರು ಅಲ್ಲಿ ಹೋಟೆಲ್ ಲಾಡ್ಜ್ ಗಳಲ್ಲಿ ಬಂಧಿಯಾಗಿರುವವರ ಬಳಿ ಹಣ ಮುಗಿದಿದೆ. ಮನೆಗೆ ಹೋಗಲು ಅನುಮತಿ ಇಲ್ಲ. ಇನ್ನೆಲ್ಲೋ ಅಡಿಕೆ ವ್ಯಾಪಾರಕ್ಕೆ ಹೋಗಿದ್ದ ಪುತ್ತೂರಿನ ವರ್ತಕರು ಮಹಾರಾಷ್ಟ್ರ ಗಡಿಯಲ್ಲಿ ಲಾಕ್ ಆಗಿದ್ದಾರೆ. ಕಾರ್ ನಲ್ಲೇ ಬಿಡಾರ ಹೂಡಿದ್ದಾರೆ. ಅವರ ಬಳಿಯೂ ಹಣ ಮುಗಿಯುತ್ತಾ ಬಂದಿದೆ. ವಲಸೆ ಕೂಲಿ ಕಾರ್ಮಿಕರು ಎಲ್ಲೆಲ್ಲೋ ಸಿಕ್ಕಿ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಅವರೆಲ್ಲಾ ತಮ್ಮ ಗೂಡು ಸೇರಿಕೊಳ್ಳಲು ಅವಕಾಶ ಮಾಡಿಕೊಡಿ.

ಸಾರಿಗೆ ವ್ಯವಸ್ಥೆ ಬೇಕಿದ್ದರೆ ಒಂದಷ್ಟು ದಿನ ಮುಂದೂಡಿ. ರೈಲುಗಳನ್ನು ಓಡಿಸಬೇಡಿ. ಇಂಟರ್ ನ್ಯಾಷನಲ್ ಫ್ಲೈಟ್ ಗಳನ್ನು ಬೇಕಿದ್ದರೆ ಇನ್ನೂ ಒಂದು ತಿಂಗಳು ತಡೆ ಹಿಡಿಯಿರಿ. ಕಟ್ಟುನಿಟ್ಟಿನ ಸೂಚನೆಗಳೊಂದಿಗೆ ಡೊಮೇಸ್ಟಿಕ್ ವಿಮಾನಗಳಿಗೆ ಅವಕಾಶ ಕೊಡಬಹುದು. ಅದರಲ್ಲೂ ಕಠಿಣ ನಿಯಮಗಳನ್ನೂ ಜಾರಿಗೆ ತನ್ನಿ. ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್ ಕಡ್ಡಾಯವಿರಲಿ. ಸೋಂಕಿತರನ್ನು ವಿಮಾನ ಹತ್ತಿಸಬೇಡಿ. ಹೊರಭಾಗದಿಂದ ಬರುವ ಯಾರಿಗೆ ಆದರೂ ಹೋಂ ಕ್ವಾರಂಟೈನ್ ಸ್ಟ್ರಿಕ್ಟ್ ಆಗಿ ಪಾಲಿಸಲು ಸೂಚನೆ ನೀಡಿ.

ರಾಜ್ಯಗಳ ಗಡಿ ಬಂದ್ ಮಾಡಿ ಆದ್ರೆ ಅಂತರ್ ರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡಿ. ಪೊಲೀಸ್ ಇಲಾಖೆಯ ಜೊತೆ ಸರ್ಕಾರದ ಬೇರೆ ಬೇರೆ ಇಲಾಖೆಯ ಖಾಲಿ ಕೂತಿರುವ ಸಿಬ್ಬಂದಿಗಳನ್ನೂ ಬಳಸಿಕೊಂಡು ನಿಯಮ ಜಾರಿಯಾಗುವಂತೆ ನೋಡಿಕೊಳ್ಳಿ. ನಿಮಗೆ ಲಾಕ್ ಡೌನ್ ಮುಂದುವರೆಸುವಂತೆ ವರದಿ ಯಾರಾದರೂ ಕೊಡಲಿ ಅವರಿಗೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲ ಎಂದೇ ಅರ್ಥ. ಡಬ್ಲ್ಯೂ ಹೆಚ್ ಓ ಅನ್ನೋ ನಿರ್ಲಜ್ಜ ಬೇಜವಬ್ದಾರಿ ಬಿಕನಾಸಿ ಸಂಸ್ಥೆಯ ಶಿಫಾರಸ್ಸಾಗಲೀ, ಬಿಬಿಸಿ ಅನ್ನುವ ಭಾರತದ ಬಡತನ ದರಿದ್ರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲು ಮಾಡಲು ಕಾಯುವ ಗ್ಲೋಬಲ್ ಸುದ್ದಿ ಮಾಧ್ಯಮದ ತಾಕೀತಿಗಾಗಲೀ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಭಾರತ ಇಂತಹ ನೂರು ವೈರಸ್ ದಾಳಿಗಳಿಂದ ಹೊರಬರುವ ಚೈತನ್ಯ ಜೀವಂತಿಕೆ ಹೊಂದಿದೆ.

ಮೇ 3 ಕ್ಕೆ ಇನ್ನೂ 11 ದಿನವಿದೆ. ಈಗಲಾದರೂ ಕೇವಲ 11 ದಿನಗಳ ಮಟ್ಟಿಗೆ ಕರ್ಫ್ಯೂ ಮಾಧರಿಯ ಕಂಪ್ಲೀಟ್ ಲಾಕ್ ಡೌನ್ ಜಾರಿ ಮಾಡಿ ನೋಡಿ. ಜನರ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿ ಸಾಕು. ಶೇ.80 ನಿಯಂತ್ರಣ ಬರದಿದ್ದರೆ ನೋಡಿ. ಆಮೇಲೆ ನಿಮಗೆ ಲಾಕ್ ಡೌನ್ ಮುಂದುವರೆಸುವ ಅಗತ್ಯವೇ ಬಾರದು. ನಿಯಮಗಳನ್ನು ಸರಿಯಾಗಿ ಜಾರಿ ಮಾಡದೇ ಜನರನ್ನು ಬಲಿ ಕೊಡಬೇಡಿ. ಕೃಷಿ ಮತ್ತು ಉತ್ಪಾದನಾ ವಲಯಗಳ ಕಾರ್ಮಿಕರಿಗೆ ದುಡಿಯಲು ಅವಕಾಶ ಕೊಡಿ. ಅಗತ್ಯ ಬಿದ್ದರೆ ಅಲ್ಲಿಯೂ ಕಠಿಣ ನಿಯಮ, ಸ್ಕ್ರೀನಿಂಗ್, ಕಡ್ಡಾಯ ತಪಾಸಣೆ ಇವೆಲ್ಲಾ ಇರಲಿ.

ದೇವಾಲಯ, ಮಸೀದಿ, ಚರ್ಚು, ಧಾರ್ಮಿಕ ಸಭೆ, ಸೆಮಿನಾರು, ಮದುವೆ ಮುಂಜಿ ಸಮಾರಂಭ, ಹೋಟೆಲ್, ಬಾರ್, ರೆಸಾರ್ಟ್, ಸಾರ್ವಜನಿಕ ಕಾರ್ಯಕ್ರಮ, ಇದ್ಯಾವುದೂ ಬೇಡ. ಆದ್ರೆ ದುಡಿಯುವ ಕೈಗಳನ್ನು ಮಾತ್ರ ಕಟ್ಟಿ ಹಾಕಬೇಡಿ. ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಮತ್ತು ಕೆಳವರ್ಗಗಳ ರೈತರು ಕಾರ್ಮಿಕರೇ ಭಾರತದ ಆತ್ಮ; ಇವರೇ ಬಹುಸಂಖ್ಯಾತರು. ಇವರು ನಾಶವಾದರೆ ಭಾರತವೇ ನಾಶವಾದಂತೆ.

#ಲಾಕ್ಡೌನ್ಮುಂದುವರೆಯೋದುಬೇಡ
#ಕಾನೂನುಬಿಗಿಮಾಡಿಸಾಕು
#ಮಧ್ಯಮವರ್ಗವನ್ನುಕೊಲ್ಲಬೇಡಿ

Tags: Vibha
ShareTweetSendShare
Join us on:

Related Posts

Victor Osimhen

ಕಸದ ರಾಶಿಯ ನಡುವೆ ಬೆಳೆದ ಹುಡುಗ ಇಂದು ಫುಟ್‍ಬಾಲ್ ಜಗತ್ತಿನ ಧ್ರುವತಾರೆ.. ಆದ್ರೂ ಫಿಫಾ ವಿಶ್ವಕಪ್ ಆಡುತ್ತಿಲ್ಲ ಯಾಕೆ..? ಇದೊಂದು ಸ್ಪೂರ್ತಿದಾಯಕ ಸ್ಟೋರಿ..!

by admin
June 20, 2026
0

ಅಂದು ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಒದ್ದಾಡಿಕೊಂಡಿದ್ದ. ವಾಸ ಮಾಡಲು ಸೂರಿಲ್ಲದೆ ಕತ್ತಲೆಯ ಕೋಣೆಯಲ್ಲಿ ಕಣ್ಣೀರು ಹಾಕುತ್ತಿದ್ದ. ಅಮ್ಮನ ನೆನಪು ಕಾಡಿದಾಗ ಜೋರಾಗಿ ಆಳುತ್ತಿದ್ದ. ಏಳು ಮಂದಿ ಮಕ್ಕಳನ್ನು...

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

by admin
June 20, 2026
0

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ ಭಾರತಕ್ಕೆ ಜಾಗತಿಕ ಹಣಕಾಸು ಮತ್ತು ಭದ್ರತಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದೊರೆತಿದ್ದು,...

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

by admin
June 20, 2026
0

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ...

SRA (Slum Rehabilitation Authority) ಯೋಜನೆಗೆ ಬೆದರಿಕೆ…ಕೋಟಿ ಕೋಟಿ ಲೂಟಿ..?

SRA (Slum Rehabilitation Authority) ಯೋಜನೆಗೆ ಬೆದರಿಕೆ…ಕೋಟಿ ಕೋಟಿ ಲೂಟಿ..?

by admin
June 20, 2026
0

SRA (Slum Rehabilitation Authority) ಯೋಜನೆಗೆ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ವಸೂಲಿ..? ಮುಂಬೈ Crime Branch ಭರ್ಜರಿ ಕಾರ್ಯಾಚರಣೆ ಮುಂಬೈ (Mumbai) ನಗರದಲ್ಲಿ ನಡೆಯುತ್ತಿರುವ ಮಹತ್ವದ...

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

by admin
June 20, 2026
0

ಜೂನ್ 21ರಿಂದ ಜುಲೈ 10ರವರೆಗೆ ವಾಹನ ಸವಾರರಿಗೆ ಸುವರ್ಣಾವಕಾಶ ರಾಜ್ಯದ ವಾಹನ ಸವಾರರಿಗೆ ಮತ್ತೊಮ್ಮೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳನ್ನು ಪಾವತಿಸಲು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram