ADVERTISEMENT
Sunday, June 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರಿಯಾದ ಇತಿಹಾಸ ಪುಸ್ತಕಗಳಲ್ಲಿವೆ ಅಯೋಧ್ಯೆ ಬಗ್ಗೆಗಿನ ಕಥೆ ಗಳು

admin by admin
August 4, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಕೊರಿಯಾದ ಇತಿಹಾಸ ಪುಸ್ತಕಗಳಲ್ಲಿವೆ ಅಯೋಧ್ಯೆ ಬಗ್ಗೆಗಿನ ಕಥೆ ಗಳು

ಅಯೋಧ್ಯೆ, ಅಗಸ್ಟ್4: ಕೊರಿಯನ್ನರು ತಮ್ಮ ಪೂರ್ವಜರಿಗೆ ಪವಿತ್ರ ನಗರವಾದ ಅಯೋಧ್ಯೆಯೊಂದಿಗೆ ಮಹತ್ವದ ಸಂಬಂಧವಿದೆ ಎಂದು ನಂಬುತ್ತಾರೆ.
ಕೊರಿಯಾದ ಹಲವಾರು ಕಥೆಗಳು ಸೂರಿರತ್ನ ಎಂಬ ಭಾರತೀಯ ರಾಜಕುಮಾರಿಯು ದಕ್ಷಿಣ ಕೊರಿಯಾದ ರಾಜ ಕಿಂಗ್ ಕಿಮ್ ಸು-ರೋ ಎಂಬಾತನನ್ನು ಮದುವೆಯಾಗಿದ್ದಳು ಎಂದು ಹೇಳುತ್ತದೆ. ಇದೀಗ ಭಾರತದ ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್-ಕಿಲ್ ಅವರು ಕೊರಿಯಾ ಮತ್ತು ಅಯೋಧ್ಯೆಯ‌ ಬಗ್ಗೆಗಿನ ‌ಇತಿಹಾಸದಲ್ಲಿ ಹುದುಗಿರುವ ಅತ್ಯಂತ ಆಳವಾದ ಸಂಬಂಧವನ್ನು ಹಂಚಿಕೊಂಡಿದ್ದಾರೆ.

Related posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

June 15, 2025
ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

June 15, 2025


ಕೊರಿಯಾದ ಹಳೆಯ ಏಷ್ಯಾದ ಇತಿಹಾಸ ಪುಸ್ತಕಗಳಲ್ಲಿ ಭಾರತೀಯ ರಾಜಕುಮಾರಿ ಸ್ಥಳೀಯ ಕೊರಿಯಾದ ರಾಜ ಕಿಮ್ ಸುರೋನನ್ನು ಮದುವೆಯಾದ ಕಥೆಗಳಿವೆ. ಈ ಮೊದಲು ಜನರು ಇದನ್ನು ಕೇವಲ ದಂತಕಥೆಯೆಂದು ಪರಿಗಣಿಸುತ್ತಿದ್ದರು. ಆದಾಗ್ಯೂ, ಪುರಾತತ್ತ್ವಜ್ಞರು ರಾಜರ ಸಮಾಧಿ ಬಳಿ ಅಯೋಧ್ಯೆಗೆ ಸೇರಿದ ಕಲಾಕೃತಿಗಳನ್ನು ಕಂಡುಹಿಡಿದರು ಎಂದು ರಾಯಭಾರಿ ಹೇಳಿದ್ದಾರೆ. ಕೊರಿಯನ್ನರು ಪ್ರಸ್ತುತ ಈ ದಂತಕಥೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಕೊರಿಯಾದಲ್ಲಿ ಚಾಲ್ತಿಯಲ್ಲಿರುವ ದಂತಕಥೆ

ದಂತಕಥೆಯ ಪ್ರಕಾರ, 2000 ವರ್ಷಗಳ ಹಿಂದೆ, ಸೂರರತ್ನ ಎಂಬ ಭಾರತೀಯ ರಾಜಕುಮಾರಿ, ದಕ್ಷಿಣ ಕೊರಿಯಾದ ರಾಜನಾದ ಗೀಮ್‌ಗ್ವಾನ್ ಗಯಾದ ಕಿಮ್ ಸು-ರೋ ಎಂಬಾತನನ್ನು ಮದುವೆಯಾಗುತ್ತಾಳೆ ಮತ್ತು ತನ್ನ ಹೆಸರನ್ನು ಹಿಯೋ ಹ್ವಾಂಗ್-ಒಕೆ ಎಂದು ಬದಲಾಯಿಸುತ್ತಾಳೆ. ನಂತರ ದಂಪತಿಗಳು ದಕ್ಷಿಣ ಕೊರಿಯಾದ ಪ್ರಸ್ತುತ ಗಿಮ್ಹೇ ಪ್ರದೇಶದಲ್ಲಿ ಕರಕ್ ರಾಜವಂಶವನ್ನು ಪ್ರಾರಂಭಿಸಿದರು. ಕೊರಿಯಾದ ಪುಸ್ತಕ ‘ಸಾಮ್ಗುಕ್ ಯೂಸಾ’ — ಪುಸ್ತಕದಲ್ಲಿ ಈ ಕಥೆಯ ಉಲ್ಲೇಖವಿದೆ. ರಾಜಕುಮಾರಿ ಪ್ರಶಂಸಿಸಿದ ‘ಆಯುಟಾ’ ಸಾಮ್ರಾಜ್ಯದ ಬಗ್ಗೆಯೂ ಒಂದು ಉಲ್ಲೇಖವಿದೆ.


ರಾಜ ದಂಪತಿಗಳು 150 ವರ್ಷಗಳ ಕಾಲ ಬದುಕಿದ್ದರು ಮತ್ತು ಅವರಿಗೆ 10 ಜನ ಗಂಡು ಮಕ್ಕಳಿದ್ದರು. ಭಾರತೀಯ ರಾಜಕುಮಾರಿಯ ಕಥೆ ದಂತಕಥೆ ಎಂದು ಹಲವರು ನಂಬಿದರೆ, ಕಿಮ್ ಬೈಂಗ್-ಮೊ ಆಯುಟಾ ಎಂಬ ಇತಿಹಾಸ ತಜ್ಞರು, ವಾಸ್ತವವಾಗಿ ಅದು ಅಯೋಧ್ಯೆ ಎಂದು ದೃಢ ಪಡಿಸಿದ್ದಾರೆ .
ಆದಾಗ್ಯೂ, ರಾಜಕುಮಾರಿಯ ಈ ಕಥೆ ನಿಜವೆಂದು ಸಾಬೀತುಪಡಿಸಲು ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಸಾಂಪ್ರದಾಯಿಕವಾಗಿ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮಕ್ಕಳು ತಮ್ಮ ತಂದೆಯ ಉಪನಾಮವನ್ನು ತೆಗೆದುಕೊಳ್ಳುತ್ತಾರೆ. ಕಿಮ್ ಎನ್ನುವುದು ಕೊರಿಯಾದಲ್ಲಿ ಬಹಳ ಸಾಮಾನ್ಯವಾದ‌ ತಂದೆಯ ಉಪನಾಮವಾಗಿದೆ.
ಆದರೆ ದಂತಕಥೆಯ ಪ್ರಕಾರ, ರಾಣಿ ಹಿಯೋ ಹ್ವಾಂಗ್-ಒಕೆ ತನ್ನ ಮಕ್ಕಳು ತನ್ನ ಉಪನಾಮವನ್ನು ಹೊಂದಿಲ್ಲ ಎಂದು ಅಸಮಾಧಾನಗೊಂಡಳು ಮತ್ತು ನಂತರ, ರಾಜನು ಅವರ ಇಬ್ಬರು ಗಂಡುಮಕ್ಕಳ ಹೆಸರಲ್ಲಿ ಹಿಯೋ ಉಪನಾಮ ಬಳಸಲು ಅನುಮತಿಸಿದನು.


2000 ರಲ್ಲಿ ಅಯೋಧ್ಯೆ ಮತ್ತು ಗಿಮ್ಹೆಯನ್ನು ಸಹೋದರಿ ನಗರಗಳಾಗಿ ಅಭಿವೃದ್ಧಿಪಡಿಸಲು ಮತ್ತು ರಾಣಿಯ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರತಿವರ್ಷ ರಾಣಿಯ ವಂಶವು ಅಯೋಧ್ಯೆಗೆ ತನ್ನ ತಾಯಿನಾಡಿನಲ್ಲಿ ರಾಜಕುಮಾರಿಗೆ ಗೌರವ ಸಲ್ಲಿಸಲು ಬರುತ್ತದೆ. ಎರಡು ವರ್ಷಗಳ ಹಿಂದೆ, ಕೊರಿಯಾದ ನಿಯೋಗವು ಸ್ಮಾರಕವನ್ನು ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕಿಮ್ ಜಂಗ್-ಸೂಕ್ ಅವರು 2018 ರಲ್ಲಿ ಅಯೋಧ್ಯೆಯ ಕ್ವೀನ್ ಹುಹ್ ಪಾರ್ಕ್‌ನಲ್ಲಿ ರಾಣಿ ಸ್ಮಾರಕವನ್ನು ಉದ್ಘಾಟಿಸಿದ್ದರು

Tags: AyodhyaKorianLatestRam Mandirramjanmabhoomisouth koria
ShareTweetSendShare
Join us on:

Related Posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

by Shwetha
June 15, 2025
0

ಚೋಕರ್ಸ್ ಅಲ್ಲ... ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..! ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

by Shwetha
June 15, 2025
0

ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

“ಮುಖ್ಯಮಂತ್ರಿಯಾಗಿ ಇರುವಾಗಲೇ ಸಮೀಕ್ಷೆ ಮುಗಿಸಿ!” – ಸಿದ್ದರಾಮಯ್ಯಗೆ ವಿಶ್ವನಾಥ್ ಪ್ರಶ್ನೆ

by Shwetha
June 15, 2025
0

ಬೆಂಗಳೂರು:ರಾಜ್ಯದಲ್ಲಿ ಜಾತಿಗಣತಿ ಮರುಸಮೀಕ್ಷೆ ನಡೆಸುವ ಪ್ರಸ್ತಾವನೆಯ ವಿರುದ್ಧ ಹಿರಿಯ ರಾಜಕೀಯ ನಾಯಕ ಹೆಚ್. ವಿಶ್ವನಾಥ್ ಗಂಭೀರ ಪ್ರಶ್ನೆ ಎಸೆದಿದ್ದಾರೆ. ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿರುವಾಗ,...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

by Shwetha
June 15, 2025
0

ಇಸ್ರೇಲ್-ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಎರಡು ಇಸ್ರೇಲಿ F-35 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ಈ ದಾಳಿಯು ಇಸ್ರೇಲ್ ಇರಾನ್ ಮೇಲೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಭಾರತೀಯ ಕರಾವಳಿ ರಕ್ಷಣಾ ಪಡೆ ನೇಮಕಾತಿ 2025

by Shwetha
June 15, 2025
0

ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard) ತನ್ನ 2025ನೇ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ನಾವಿಕ್ ಮತ್ತು ಯಂತ್ರಿಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ 630...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram