ಗದಗ: ಎರಡು ವಾರಗಳ ಹಿಂದಷ್ಟೇ ಉತ್ತರ ಕರ್ನಾಟಕದ ಅದರಲ್ಲೂ ಗದಗ ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಮಳೆರಾಯ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಜಲ್ಲಿಗೇರಿ ತಾಂಡಾ ಸಂಪೂರ್ಣ ಮುಳುಗಿ ಹೋಗಿದೆ.
ಮಳೆಯ ಅಬ್ಬರಕ್ಕೆ ಜಲ್ಲಿಗೇರಿ ತಾಂಡ ಕೆರೆಯಂತಾಗಿದ್ದು, ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮಕ್ಕಳು, ಮಹಿಳೆಯರು ವೃದ್ಧರು ರಾತ್ರಿ ಇಡೀ ಪರದಾಟ ನಡೆಸಿದ್ದಾರೆ. ತಾಂಡಾ ಸುತ್ತಮುತ್ತಲಿನ ಜಮೀನುಗಳಿಗೂ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣ ಬೆಳೆ ನಾಶವಾಗಿದೆ.
ಕೋಟೆನಾಡು ಚಿತ್ರದುರ್ಗದಲ್ಲಿ ಅಬ್ಬರಿಸಿದ ವರುಣ; ಕೋಡಿ ಬಿದ್ದ ಮಲ್ಲಾಪುರ ಕೆರೆ pic.twitter.com/cGgiDXaLv3
— Saakshatv-videos (@Saakshatv_video) September 9, 2020