ಹಾವೇರಿ: ಖದೀಮರು ಶಾಲೆಗಳ ಮೇಲೆಯೇ ಕಣ್ಣು ಹಾಕಿರುವ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ರಾಣೆಬೆನ್ನೂರಿನ ತಾಲೂಕಿನ ಗ್ರಾಮೀಣ ಬಾಗದಲ್ಲಿ ಈ ಘಟನೆ ನಡೆದಿದೆ. ಒಂದೇ ತಿಂಗಳಲ್ಲಿ ಏಳು ಶಾಲೆಗಳಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಏಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅಡುಗೆ ಕೋಣೆಗಳಲ್ಲಿನ ಸಾಮಾಗ್ರಿಗಳನ್ನು ಖದೀಮರು ಎಗರಿಸಿ ಪರಾರಿಯಾಗದ್ದಾರೆ.
ತಾಲೂಕಿನ ಹರನಗಿರಿ, ಮೈದೂರ, ಮಾಕನೂರ ಪ್ರೌಢಶಾಲೆ, ಕೋಟಿಹಾಳ, ಗಂಗಾಪುರ ಪ್ರಾಥಮಿಕ ಶಾಲೆಗಳಲ್ಲಿನ ಅಕ್ಕಿ, ಬೇಳೆ, ಎಣ್ಣೆ, ಹಾಲಿನ ಪೌಡರ್ ಚೀಲಗಳು ಕಳ್ಳತನವಾಗಿವೆ. ಈ ಕುರಿತು ರಾಣೆಬೆನ್ನೂರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.