ಕೋವಿಡ್-19 ಮುಂದಿನ ವರ್ಷವೂ ಮುಂದುವರಿಯುವ ಸೂಚನೆಗಳಿವೆ- ಡಾ. ರಣದೀಪ್ ಗುಲೇರಿಯಾ
ಹೊಸದಿಲ್ಲಿ, ಸೆಪ್ಟೆಂಬರ್06: ಪ್ರಸ್ತುತ ಪ್ರವೃತ್ತಿಯ ಪ್ರಕಾರ, ಕೊರೋನಾ ವೈರಸ್ ಮುಂದಿನ ವರ್ಷವೂ ಮುಂದುವರಿಯುವ ಸೂಚನೆಗಳಿವೆ ಎಂದು ದೆಹಲಿಯ ಏಮ್ಸ್ (AIIMS) ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ. ಅವರು ಕೇಂದ್ರ ಸರ್ಕಾರ ಸ್ಥಾಪಿಸಿರುವ ಕೋವಿಡ್-19 ವಿಶೇಷ ಕಾರ್ಯಪಡೆಯ ಪ್ರಮುಖ ಸದಸ್ಯರಾಗಿದ್ದಾರೆ. ವೈರಸ್ ಸಂಪೂರ್ಣವಾಗಿ ನಿರ್ಮೂಲನೆಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಇದು ದೇಶದ ಸಣ್ಣ ನಗರಗಳು ಮತ್ತು ಹಳ್ಳಿಗಳಿಗೆ ಹರಡುತ್ತಿದೆ ಮತ್ತು ಹೆಚ್ಚಿನ ಜನಸಂಖ್ಯೆಯು ಅದರ ಹರಡುವಿಕೆಗೆ ಒಂದು ಅಂಶವಾಗಿದೆ ಎಂದು ಹೇಳಿದರು. ಕೊರೋನಾ ಪ್ರಕರಣಗಳ ಉಲ್ಬಣಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು ಕೊರೋನಾ ಪರೀಕ್ಷೆ ಹೆಚ್ಚಾಗಿದೆ ಮತ್ತು ಜನರು ನಿಯಮಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಗುಲೇರಿಯಾ ಆತಂಕ ವ್ಯಕ್ತಪಡಿಸಿದರು.
ಮೂರು ಪ್ರಮುಖ ರೀತಿಯ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ದೇಶದಲ್ಲಿ ಎಲ್ಲವೂ ಸರಿಯಾಗಿ ನಡೆದರೆ, ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಲಭ್ಯವಾಗುತ್ತವೆ.ರಷ್ಯಾದಲ್ಲಿ ಲಸಿಕೆ ಪ್ರಯೋಗಗಳು ಅಲ್ಪ ಸಂಖ್ಯೆಯ ಸ್ವಯಂಸೇವಕರ ಮೇಲೆ ಮಾತ್ರ ನಡೆಯುತ್ತಿವೆ ಎಂದು ಅವರು ಹೇಳಿದರು