ಇದು ಬಾಝ್ಬಾಲ್ ಅಲ್ಲ ಅಪ್ಪಟ ಟೆಸ್ಟ್ ಕ್ರಿಕೆಟ್ ಕಣ್ರೋ ಎಂದ ಟೀಮ್ ಇಂಡಿಯಾ..!
ಜಸ್ಟ್ ಊಹಿಸಿಕೊಳ್ಳಿ..ಇನ್ನಿಂಗ್ಸ್ ಹಿನ್ನಡೆಯಿಂದ ಪಾರಾಗುವುದಕ್ಕೆ ಟೀಮ್ ಇಂಡಿಯಾಗೆ 15 ಓವರ್ ಗಳಲ್ಲಿ 15- 20 ರನ್ ಬೇಕಾಗಿತ್ತು ಅಂದು ಕೊಳ್ಳೋಣ.. ಆಗ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಜಡ್ಡು ಬಳಿ ಬಂದು ಮ್ಯಾಚ್ ಅನ್ನು ಡ್ರಾ ಮಾಡಿಕೊಳ್ಳೋಣ ಅಂತ ಹೇಳ್ತಾ ಇದ್ನಾ…?
ಚಾನ್ಸೆ ಇಲ್ಲ.. ಕನಸಿನಲ್ಲೂ ಈ ಮಾತು ಸ್ಟೋಕ್ಸ್ ಬಾಯಿಂದ ಬರ್ತಾ ಇರಲಿಲ್ಲ.. ಯಾಕಂದ್ರೆ baazball ಅನ್ನೋ ಅಮಲಿನಿಂದ ಸ್ಟೋಕ್ಸ್ ಹೊರ ಬರ್ತಿರಲಿಲ್ಲ. ಅದಕ್ಕೆ ಅನ್ನೋದು time ಯಾವತ್ತು ಒಂದೇ ರೀತಿ ಇರಲ್ಲ ಅಂತ..!
ಅಷ್ಟಕ್ಕೂ ಜಡ್ಡು – ಸುಂದರ್ ಶತಕ ದಾಖಲಿಸಲು ಇಷ್ಟ ಪಟ್ಟಿರುವುದರಲ್ಲಿ ತಪ್ಪೇನಿದೆ..? ಪಂದ್ಯ ಡ್ರಾ ಆಗುತ್ತೆ.. ಸುಮ್ಮನೆ ಯಾಕೆ ಸುಸ್ತು ಮಾಡಿಕೊಳ್ಳುವುದು.. ಆಟ ವನ್ನು ಮುಗಿಸೋಣ ಅಂತ ಹೇಳುವುದರಲ್ಲಿ ಯಾವ ನ್ಯಾಯ ಇದೆ..? ಇದೇ ಪರಿಸ್ಥಿತಿ ಯಲ್ಲಿ ಇಂಗ್ಲೆಂಡ್ ಬ್ಯಾಟರ್ ಗಳು ಇರುತ್ತಿದ್ರೆ ಬಿಡ್ತಾ ಇದ್ರಾ..?
ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ದಾಖಲಿಸುವುದು ತಮಾಷೆಯ ಸಂಗತಿ ಅಲ್ಲ. ತಾಳ್ಮೆ ಏಕಾಗ್ರತೆಯ ತಂಡದ ಪರಿಸ್ಥಿತಿ ಯನ್ನು ಅರಿತುಕೊಂಡು ಆಡ್ಬೇಕು. ಅದು ಅಲ್ಲದೆ ಜಡ್ಡು ಮತ್ತು ಸುಂದರ್ 5ನೇ ವಿಕೆಟ್ ಗೆ ಪೇರಿಸಿದ್ದ ರನ್ ಬರೋಬ್ಬರಿ ಅಜೇಯ 203 ರನ್ ಗಳು. ಇನ್ನೇನು ಸೋಲು ಖಚಿತ ಎಂದು ಅಂದು ಕೊಂಡವರನ್ನು ಅಚ್ಚರಿ ಗೊಳಿಸಿದ್ದ ಮಹೋನ್ನತ್ತ ಇನ್ನಿಂಗ್ಸ್ ಅನ್ನು ಸುಂದರ್ ಮತ್ತು ಜಡೇಜಾ ಆಡಿದ್ದರು. ಆಲ್ಮೋಸ್ಟ್ 56 ಓವರ್ ಆಡುವುದು ಅಂದ್ರೆ ಸುಮ್ನೇನಾ..? ಅದು ಸಹ ಅಂತಹ ಒತ್ತಡದಲ್ಲೂ ನೆಲಕಚ್ಚಿ ಆಡಿದ ಪರಿ ಬಹಳ ದಿನಗಳ ಕಾಲ ನೆನಪಿನಲ್ಲಿ ಕಾಡುತ್ತಿರುತ್ತದೆ.
ಡುಕೆಟ್, ಹ್ಯಾರಿ ಬ್ರೂಕ್ ಎಸೆತಗಳಿಗೆ ರನ್ ಹೊಡೆದು ನೀನು ಶತಕ ದಾಖಲಿಸಬೇಕಾ ಅನ್ನೋ ಬೆನ್ ಸ್ಟೋಕ್ಸ್ ನ ಕುಹಕ ಪ್ರಶ್ನೆಗೆ ರವೀಂದ್ರ ಜಡೇಜಾ ನೀಡಿದ ಉತ್ತರ ಕೂಡ ಅಷ್ಟೇ ಮಜವಾಗಿತ್ತು. ನಿನಗೆ ಏನ್ ಅನ್ಸುತ್ತೆ ಅದನ್ನು ಮಾಡು.. ಹೋಗಾ… ಅಂತ ಟಿಪಿಕಲ್ ಜಡ್ಡು ಸ್ಟೈಲ್ ನಲ್ಲೆ ಉತ್ತರ ಕೊಟ್ಟು ಶತಕದ ಸಂಭ್ರಮವನ್ನು ಗಡದ್ದಾಗಿಯೇ ಆಚರಿಸಿಕೊಂಡ್ರು.
ಅಲ್ಲಾ… ಕ್ರಿಸ್ ವಕ್ಸ್.. ಜೋಫ್ರಾ ಅರ್ಚರ್. ಲ, ಬ್ರೈಡ ನ್ ಕಾರ್ಸ್, ಬೆನ್ ಸ್ಟೋಕ್ಸ್. ರೂಟ್. ಲಿಯಂ dawson ನಂತಹ ಬೌಲರ್ ಗಳಿಗೆ ಸುಸ್ತು ಮಾಡಿ ನೀರು ಕುಡಿಸಿ ದವರಿಗೆ ಡುಕೆಟ್. ಹ್ಯಾರಿ ಬ್ರೂಕ್ ಯಾವ ಲೆಕ್ಕ ಅಲ್ವಾ..?
ನೆನಪಿಡಿ baaz ball yella ಟೈಂನಲ್ಲೂ work ಆಗಲ್ಲ… ಅದರಲ್ಲೂ ಟೆಸ್ಟ್ ಮ್ಯಾಚ್ ನಲ್ಲಿ ಆ ತಂತ್ರ ಯಶಸ್ವಿ ಆಗಲು ಟೆಸ್ಟ್ ಕ್ರಿಕೆಟ್ ನ ಶಾಸ್ತ್ರೀಯ ಆಟವನ್ನು ಕರಗತ ಮಾಡಿಕೊಳ್ಳಬೇಕು.
ಬಹುಷಃ ನಾಲ್ಕನೇ ಟೆಸ್ಟ್ ಪಂದ್ಯ ಒಂದು ಪರಿಪೂರ್ಣ ಟೆಸ್ಟ್ ಪಂದ್ಯವನ್ನು ನೋಡಿದ ಅನುಭವ ಆಯಿತ್ತು. ದಾಖಲೆ ಬರೆದ ಜೋಯ್ ರೂಟ್ ನ ಸೆಂಚುರಿ.. ಸ್ಟೋಕ್ಸ್ ಆಕರ್ಷಕ ಶತಕ.. ಟೀಮ್ ಇಂಡಿಯಾ ಪರ ಶತಕ ವಂಚಿತ ರಾಹುಲ್ ದಿಟ್ಟ ಹೋರಾಟ.. ನಾಯಕನ ಜವಾಬ್ದಾರಿ ಅರಿತುಕೊಂಡು ಶತಕ ದಾಖಲಿಸಿದ ಗಿಲ್ ಬ್ಯಾಟಿಂಗ್ ವ್ಯೆಖರಿ.. ಸುಂದರ್… ಜಡೇಜನ ಜಬರ್ದಸ್ತ್ ಆಟವನ್ನು ನೋಡಿದಾಗ ಟೆಸ್ಟ್ ಕ್ರಿಕೆಟ್ ನ ಅಸ್ಮಿತೆ ಇನ್ನೂ ಇದೆ ಎಂದು ಅನ್ಸುತ್ತೆ.
ಇನ್ನೊಂದೆಡೆ ರಿಷಬ್ ಪಂತ್ ನ ವಿರೋಚಿತ ಆಟ ಟೀಮ್ ಇಂಡಿಯಾ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು ಅನ್ನೋದರಲ್ಲಿ ಸಂದೇಹವೇ ಇಲ್ಲ.. ಕಾಲಿಗೆ ಪೆಟ್ಟು ಬಿದ್ರೂ ತಂಡಕ್ಕಾಗಿ ನೋವನ್ನು ಮರೆತು ಆಡಿದ ರೀತಿಗೆ ಸಲಾಂ ಅನ್ನಲೇ ಬೇಕು.
ಸನತ್ ರೈ








