ಗಂಧದ ತುಂಡು ಕದ್ದವರನ್ನು ಯಾದಗಿರಿ ಅರಣ್ಯ ಇಲಾಖೆ ಅಧಿಕಾರಿಗಳು ಶಿವಮೊಗ್ಗದಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ಕಳ್ಳತನ ಮಾಡಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ (sandalwood) ತುಂಡುಗಳನ್ನ ವಶಕ್ಕೆ ಪಡೆದು ಕಚೇರಿಯಲ್ಲಿ ಶೇಖರಿಸಿಡಲಾಗಿತ್ತು. 15 ದಿನಗಳ ನಂತರ ಕಚೇರಿಯಲ್ಲಿ ಶೇಖರಿಸಿಟ್ಟಿದ್ದ ತುಂಡುಗಳನ್ನು ಕಚೇರಿಯಿಂದಲೇ ದೋಚಿದ್ದರು. ಈ ಕರ್ತನಾಕ್ ಕಳ್ಳರನ್ನು ಬಂಧಿಸಿದ್ದಾರೆ.
ಕಚೇರಿಯಲ್ಲಿನ ತುಂಡುಗಳು ನಾಪತ್ತೆಯಾಗುತ್ತಿದ್ದಂತೆ ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸುಮಾರು 8 ಲಕ್ಷ ಮೌಲ್ಯದ 80 ಕೆ.ಜಿ ಶ್ರೀಗಂಧದ ತುಂಡುಗಳನ್ನ ಕಳ್ಳತನ ಮಾಡಿದ ಕಳ್ಳರ ಬಗ್ಗೆ ತನಿಖೆಯಲ್ಲಿ ಸತ್ಯಾಂಶ ಹೊರ ಬಿದ್ದಿದೆ. ಶಿವಮೊಗ್ಗದ ಜೈಲಿನಲ್ಲಿದ್ದ ಆರೋಪಿ ಅಜೀಜ್ ನಿಂದ ಯಾದಗಿರಿಯಲ್ಲಿ ನಡೆದಿದ್ದ ಶ್ರೀಗಂಧದ ತುಂಡುಗಳನ್ನ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಶಿವಮೊಗ್ಗದಲ್ಲಿಯೂ ಶ್ರೀಗಂಧದ ತುಂಡುಗಳನ್ನ ಕಳ್ಳತನ ಮಾಡಿದ ಕೇಸ್ ನಲ್ಲಿ ಅಂದರ್ ಆಗಿದ್ದಾನೆ. ಇದೆ ಅಜೀಜ್ ಮತ್ತು ಟೀಮ್ ಯಾದಗಿರಿಯಲ್ಲೂ ಕಳ್ಳತನ ಮಾಡಿದೆ ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ ಅಜೀಜ್ ನನ್ನು ಶಿವಮೊಗ್ಗ ಜೈಲಿನಲ್ಲಿಯೇ ಬಿಟ್ಟು, ಇನ್ನುಳಿದ ಮಲ್ಲೇಶಿ, ಬಸವರಾಜ್ ಹಾಗೂ ಬಾಬಾಜಾನ್ ನನ್ನು ಅರೆಸ್ಟ್ ಮಾಡಿದ್ದಾರೆ.