ಪ್ರಯಾಣಿಕರೇ ಗಮನಿಸಿ : ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲಿನ ಸಮಯ ಬದಲಾವಣೆ
ಶಿವಮೊಗ್ಗ : ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲಿನ ಸಮಯ ಬದಲಾವಣೆಯಾಗಿದೆ.
ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುತ್ತಿದ್ದ ಜನಶತಾಬ್ದಿ ರೈಲು ಜನವರಿ. 31 ರಿಂದ ಬೆಳಗ್ಗೆ 5.15 ಕ್ಕೆ ಹೊರಡುತ್ತದೆ.
ಮತ್ತು ಯಶವಂತಪುರ ಬದಲಿಗೆ ಮೆಜೆಸ್ಟಿಕ್ ತಲುಪುತ್ತದೆ ಎಂದು ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿರುವ ರಾಘವೇಂದ್ರ, ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಜನಶತಾಬ್ದಿ ರೈಲು ಇನ್ಮುಂದೆ ಬೆಳಗ್ಗೆ 5.30ರ ಬದಲಿಗೆ ಬೆಳಗ್ಗೆ 5.15ಕ್ಕೆ ಹೊರಡಲಿದೆ.
ಸಂಜೆ 5.15 ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರಲಿದೆ. ಜನ ಶತಾಬ್ದಿ ರೈಲು ಸಮಯದ ಬದಲಾವಣೆಯೊಂದಿಗೆ ಶಿವಮೊಗ್ಗದಿಂದ ಮೆಜೆಸ್ಟಿಕ್ ಗೆ ತಲುಪಲಿದೆ ಎಂದು ತಿಳಿಸಿದರು.
ಅಲ್ಲದೆ ಈ ಮೊದಲು ಯಶವಂತಪುರದಲ್ಲಿ ನಿಲ್ಲುತ್ತಿದ್ದ ರೈಲು ಇಂದಿನಿಂದ ಮೆಜೆಸ್ಟಿಕ್ ತಲುಪಲಿದೆ.
ಹಾಗೇ ಸಂಜೆ ಪುನಃ ಮೆಜೆಸ್ಟಿಕ್ ನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಸಂಸದ ರಾಘವೇಂದ್ರ ಅವರು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel