ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಕೋವಿಡ್ ನಿಂದ ನೇರ ಸಂಕಷ್ಟಕ್ಕೊಳಗಾದ ಟ್ರಾವೆಲ್ಸ್ ಉದ್ಯಮಕ್ಕೆ ಸದ್ಯ ಉಳಿದಿರುವ ಏಕೈಕ ಭರವಸೆ ಸರ್ಕಾರ ಮಾತ್ರ:

admin by admin
August 30, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಕೋವಿಡ್ ನಿಂದ ನೇರ ಸಂಕಷ್ಟಕ್ಕೊಳಗಾದ ಟ್ರಾವೆಲ್ಸ್ ಉದ್ಯಮಕ್ಕೆ ಸದ್ಯ ಉಳಿದಿರುವ ಏಕೈಕ ಭರವಸೆ ಸರ್ಕಾರ ಮಾತ್ರ:

ಮಾರಕ ಕೋವಿಡ್ ಸಂಕಷ್ಟದಿಂದಾಗಿ ಇಡೀ ಜಗತ್ತೇ ಮತ್ತೆ ಶೂನ್ಯಾವಸ್ಥೆಗೆ ಬಂದು ನಿಂತಿದೆ. ಈಗೀಗ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ತಮ್ಮ ಉದ್ದಿಮೆ ಮತ್ತು ವ್ಯವಹಾರವನ್ನು ಸುಧಾರಿಸಲು ಹೊಸ ಹೊಸ ಯೋಜನೆ, ಮಾರ್ಗಸೂಚಿ, ಸಹಾಯಧನ ಇತ್ಯಾಧಿ ಪ್ರೋತ್ಸಾಹಕ್ಕೆ ಮುಂದಾಗಿವೆ. ಆದರೆ ನಮ್ಮ ಭಾರತದಲ್ಲಿ ಕೇಂದ್ರದಲ್ಲಿರುವ ಮತ್ತು ರಾಜ್ಯಗಳ ಆಳುವ ಸರ್ಕಾರಗಳ ಕುಂಭಕರ್ಣ ನಿದ್ರೆ ಮಾತ್ರ ಇನ್ನೂ ಮುಗಿದಿಲ್ಲ. ತಂತ್ರಜ್ಞಾನ, ಆಟೋಮೊಬೈಲ್, ಉತ್ಪಾದನಾ ಕ್ಷೇತ್ರ, ಕೃಷಿ, ಸಾರಿಗೆ, ಪ್ರವಾಸೋದ್ಯಮ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಹಿಂದೆಂದೂ ಕಂಡು ಕೇಳದ ಹಿನ್ನೆಡೆ ಉಂಟಾಗಿದ್ದರೂ ಸರ್ಕಾರಗಳು ಮಾತ್ರ ದಿವ್ಯ ಮೌನವನ್ನು ಧಾರಣೆ ಮಾಡಿ ಕುಳಿತಿವೆ. ಅದರಲ್ಲೂ ಟ್ರಾನ್ಸ್ ಪೋರ್ಟ್ ಸೇವಾ ಕ್ಷೇತ್ರ ಅತ್ಯಂತ ಹೀನಾಯ ಹಂತ ತಲುಪಿದ್ದು, ಟ್ರಾವೆಲ್ಸ್ ನಡೆಸುವ ಬಹುತೇಕ ಮಾಲೀಕರ ಗೋಳು ಹೇಳತೀರದ್ದಾಗಿದೆ. ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿದ್ದ ಟ್ರಾವೆಲ್ಸ್ ಉದ್ಯಮ ಈಗ ಪೈಸೆ ಪೈಸೆಗೂ ಪರದಾಡುವ ಸ್ಥಿತಿ ತಲುಪಿದೆ.

Related posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

April 15, 2026
ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

April 15, 2026

ಸಿಲಿಕಾನ್ ಸಿಟಿ, ಐಟಿ ಕ್ಯಾಪಿಟಲ್ ಬೆಂಗಳೂರಿನ ಹತ್ತು ಹಲವು ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕರು ಭವಿಷ್ಯದ ದಾರಿ ಕಾಣದೆ ಮುಂದೇನು ಎಂದು ಚಿಂತಿಸುತ್ತಾ ತಲೆಯ ಮೇಲೆ ಕೈ ಹೊತ್ತು ಕೂತಿದ್ದಾರೆ. ಐಟಿ ಸಂಸ್ಥೆಗಳ ಜೊತೆಗೆ ಕರಾರು ಮಾಡಿಕೊಂಡು ಹೊಸ ವಾಹನಗಳನ್ನು ಖರೀದಿಸಿ ಅಲ್ಲಿನ ಸೇವೆಗೆ ನಿಯುಕ್ತಿಗೊಳಿಸಲಾಗಿತ್ತು. ಕೋವಿಡ್ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರದ ದಿನಗಳಲ್ಲಿ ರಾಜ್ಯದ ಎಲ್ಲಾ ಐಟಿ-ಬಿಟಿ ಸಂಸ್ಥೆಗಳೂ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಿದವು. ಐಟಿ ಟೆಕ್ಕಿಗಳ ಪಿಕ್ ಅಪ್ ಎಂಡ್ ಡ್ರಾಪ್ ಮೇಲೆ ಅವಲಂಭಿತವಾಗಿದ್ದ ಟ್ರಾವೆಲ್ಸ್ ಎಂಡ್ ಟ್ರಾನ್ಸ್ ಪೋರ್ಟ್ ಉದ್ಯಮಕ್ಕೆ ಬಿದ್ದ ಮೊದಲ ಹೊಡೆತವಿದು. 3 ತಿಂಗಳು ಎಲ್ಲಾ ಸರಿಯಾಗುತ್ತದೆ, ಮೊದಲಿನಂತೆಯೇ ವ್ಯವಹಾರ ಸುಧಾರಿಸುತ್ತದೆ ಎಂದುಕೊಂಡಿದ್ದ ಮಾಲೀಕರಿಗೆ ಆನಂತರ ಸರಣಿ ಸಂಕಷ್ಟಗಳು ಶುರುವಾದವು. ಬ್ಯಾಂಕಿನಲ್ಲಿ ವಾಹನಕ್ಕಾಗಿ ಪಡೆದ ಸಾಲಕ್ಕೆ ಮೋರ್ಟೋರಿಯಂ ಏನೋ ಸಿಕ್ಕಿತು. ಆದರೆ ಕೆಲಸವೇ ಇಲ್ಲದೇ ತಿಂಗಳ ಇಎಂಐ ಪಾವತಿಯಿಂದಷ್ಟೇ ಪರಿಹಾರ ಸಿಕ್ಕತೇ ವಿನಃ ಬ್ಯಾಂಕುಗಳ ಬಡ್ಡಿದರದಿಂದಲ್ಲ. ಕೇವಲ ಸರ್ಕಾರದ ಮೇಲೆ ಮಾತ್ರ ಭರವಸೆ ಇಟ್ಟುಕೊಳ್ಳಬೇಕಿದೆ ಟ್ರಾವಲ್ಸ್ ಉದ್ಯಮ.

ಇದೇ ವೇಳೆ ಐಟಿ ಸಂಸ್ಥೆಗಳು ಡಿಸೆಂಬರ್ ತನಕ ಅಂದರೆ ಈ ವರ್ಷ ಪೂರ್ತಿ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಮುಂದುವರೆಸಿತು. ಈಗ ಐಟಿ ಸಂಸ್ಥೆಗಳಿಗೆ ಬಾಡಿಗೆ ತೆರಳುತ್ತಿದ್ದ ಟ್ರಾವೆಲ್ಸ್ ಸಂಸ್ಥೆಯ ವಾಹನಗಳು ನಿಂತಲ್ಲಿಯೇ ತುಕ್ಕು ಹಿಡಿಯುತ್ತಿವೆ. ಅತ್ತ ಬ್ಯಾಂಕಿನ ಮೋರ್ಟೋರಿಯಂ ಅವಧಿಯೂ ಮುಗಿದಿದ್ದು ಇಎಂಐ ಪಾವತಿಸಲು ಬ್ಯಾಂಕುಗಳಿಂದ ನಿತ್ಯ ಕರೆಗಳು ಬರುತ್ತಿವೆ. ತಿಂಗಳಿಗೆ 5 ಕೋಟಿ ವ್ಯವಹಾರ ನಡೆಸುತ್ತಿದ್ದ ಟ್ರಾವೆಲ್ಸ್ ಸಂಸ್ಥೆಗಳು 5 ಲಕ್ಷದ ವಹಿವಾಟು ನಡೆಸಲೂ ಪರದಾಡುತ್ತಿವೆ. ಕೆಲವು ಮಾಲೀಕರು ತಮ್ಮ ಸಂಸ್ಥೆಯ ಚಾಲಕರನ್ನು ಮನೆಗೆ ಕಳಿಸಿದ್ದರೇ, ಇನ್ನೂ ಕೆಲವು ಮಾಲೀಕರು ಸಾಲ ಸೋಲ ಮಾಡಿ ಸಂಸ್ಥೆಯನ್ನು ನಡೆಸಲು ಹೆಣಗಾಡುತ್ತಿದ್ದಾರೆ. ಹೊಸ ಸಾಲ ನೀಡಲು ಬ್ಯಾಂಕುಗಳೂ ಹಿಂದೇಟು ಹಾಕುತ್ತಿವೆ. ಇತ್ತ ಕರಾರಿನ ಪ್ರಕಾರ ಹಣ ಬಿಡುಗಡೆ ಮಾಡಲು ಐಟಿ ಸಂಸ್ಥೆಗಳು ಸಿದ್ಧವಿಲ್ಲ. ಹೀಗಾಗಿ ಟ್ರಾವೆಲ್ಸ್ ಮಾಲೀಕರು ಅತ್ತ ಬಾಣಲಿ ಇತ್ತ ಬೆಂಕಿ ಎನ್ನುವ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಕೆಲಸಗಾರರಿಗೆ ಸಂಬಳವನ್ನೂ ಕೊಟ್ಟು, ವಾಹನಗಳ ನಿರ್ವಹಣೆ ನೋಡಿಕೊಂಡು, ಚಾಲಕರ ಸಂಕಷ್ಟವನ್ನೂ ಗಮನದಲ್ಲಿಟ್ಟುಕೊಂಡು ಉದ್ಯಮ ನಡೆಸುವುದು ಸದ್ಯಕ್ಕಂತೂ ಅಸಾಧ್ಯವಾಗಿ ತೋರುತ್ತಿದೆ.

ಚೇತರಿಕೆ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ ಟ್ರಾವೆಲ್ಸ್ ವಹಿವಾಟು:

ಸದ್ಯ ಮಾಲೀಕರಷ್ಟೇ ಸಂಕಷ್ಟ ಚಾಲಕರದ್ದೂ ಹೌದು. ಬೆಂಗಳೂರಿನ ಬಹುತೇಕ ಕ್ಷೇತ್ರಗಳ ಸಾರಿಗೆ ಸಂಚಾರಕ್ಕಾಗಿ ನಿಯೋಜನೆಗೊಂಡ ವಾಹನಗಳು ಚಾಲನೆ ನಿಲ್ಲಿಸಿ ತಿಂಗಳುಗಳೇ ಕಳೆದಿವೆ. ಬಹುತೇಕ ಸೇವಾ ವಲಯದ ಉದ್ಯಮಗಳು ತಮ್ಮ ಸಿಬ್ಬಂದಿಗಳಿಂದ ಮನೆಯಿಂದಲೇ ಕೆಲಸ ಮಾಡಿಸಿಕೊಳ್ಳುತ್ತಿದೆ. ಶಾಲೆ ಕಾಲೇಜುಗಳು ಬಂದ್ ಆಗಿವೆ. ಪ್ರವಾಸೋದ್ಯಮ ಚೇತರಿಸಿಕೊಳ್ಳಲಾರದಷ್ಟು ಹಿಂದೆ ಸರಿದಿದೆ. ತೀರ್ಥ ಕ್ಷೇತ್ರಗಳ ದೇಗುಲ ಮಠ ಮಾನ್ಯಗಳು ಅರ್ಧ ಬಾಗಿಲು ತೆಗೆದಿವೆ. ಹೀಗಾಗಿ ಈ ಎಲ್ಲ ಕಡೆ ಓಡಾಡುತ್ತಿದ್ದ ಟ್ರಾವೆಲ್ಸ್ ಉದ್ಯಮ ಪಾತಳಕ್ಕೆ ಕುಸಿದಿದೆ. ಮಾಲೀಕರಿಗೆ ವ್ಯವಹಾರ ವಹಿವಾಟುಗಳಿಲ್ಲ, ಚಾಲಕರಿಗೆ ಉದ್ಯೋಗವಿಲ್ಲ. ಸರಿಸುಮಾರು 14 ವರ್ಷಗಳಿಂದ ಟ್ರಾವೆಲ್ಸ್ ಉದ್ಯಮ ನಡೆಸುತ್ತಿರುವ ಶ್ರೀನಾಥ್ ತರಹದ ಉದ್ಯಮಿಗಳಿಗೇ ಈ ಪರಿ ಆರ್ಥಿಕ ಮುಗ್ಗಟ್ಟು ಎದುರಾದರೆ ಉಳಿದ ಸಣ್ಣ ಪುಟ್ಟ ಟ್ರಾವೆಲ್ಸ್ ಸಂಸ್ಥೆಗಳ ಗತಿಯೇನು ಎನ್ನುವುದು ಇಲ್ಲಿ ಉದ್ಭವಿಸುವ ಪ್ರಶ್ನೆ.

ಅಮೇರಿಕಾ, ಕೆನಡಾ, ಇಂಗ್ಲೆಂಡ್ ಮುಂತಾದ ಕಡೆ ಕ್ಷೀಣವಾಗಿರುವ ಉದ್ಯಮವನ್ನು ಮೇಲೆತ್ತಲು ಹತ್ತಾರು ಪ್ರೋತ್ಸಾಕರ ಯೋಜನೆಗಳನ್ನು ರೂಪಿಸಲಾಗುತ್ತದೆ. ಆದರೆ ಭಾರತದಲ್ಲಿ ಒಂದು ಉದ್ಯಮ ಕಣ್ಣುಮುಚ್ಚುತ್ತಿದ್ದರೂ ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತವೆ ಇಲ್ಲಿನ ಸರ್ಕಾರಗಳು. ಟ್ರಾವೆಲ್ಸ್ ಉದ್ಯಮದಿಂದಲೂ ದೇಶದ ಜಿಡಿಪಿಗೆ ಲಾಭವಾಗಿದೆ. ಟ್ರಾವೆಲ್ಸ್ ಮಾಲೀಕರು ಸಹ ಕ್ರಮವಾಗಿ ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿಸುತ್ತಲೇ ಬಂದಿದ್ದಾರೆ. 20 ಲಕ್ಷ ಕೋಟಿಯ ಆತ್ಮ ನಿರ್ಭರ್ ಭಾರತದ ಪ್ಯಾಕೇಜ್ ನಲ್ಲಿ, ಟ್ರಾವೆಲ್ಸ್ ನಂತಹ ಮಧ್ಯಮ ಮಟ್ಟದ, ನಿರಂತರ ನಡೆಯಬಹುದಾದ ಉದ್ಯಮಗಳ ಚೇತರಿಕೆ ನೀಡಬೇಕಿತ್ತು. ಆದರೆ ಕಾರ್ಪೋರೇಟ್ ವಲಯದ ಸಿರಿವಂತ ಕುಳಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ಸಣ್ಣ ಪುಟ್ಟ ಟ್ರಾವೆಲ್ಸ್ ನಂತ ಉದ್ಯಮಗಳು ಕಣ್ಣಿಗೆ ಬೀಳದಿರುವುದು ದುರಂತವೇ ಸರಿ.

ಸದ್ಯ ಕ್ಷೀಣವಾಗಿ ಕೊನೆಯ ಉಸಿರು ಎಳೆಯುತ್ತಿರುವ ಟ್ರಾವೆಲ್ಸ್ ಉದ್ಯಮವನ್ನು ಬದುಕಿಸಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಸರ್ಕಾರವೇ ಮುಂದೆ ನಿಂತು ಕರಾರಿನಂತೆ ಐಟಿ ಮಾಲಿಕರಿಂದ ಟ್ರಾವೆಲ್ಸ್ ಸಂಸ್ಥೆಗಳಿಗೆ ಬಾಡಿಗೆ ವಸೂಲಿ ಮಾಡಿಕೊಡಬೇಕಾಗಿದೆ. ಹೀಗಾದಲ್ಲಿ ಟ್ರಾವೆಲ್ಸ್ ಸಂಸ್ಥೆಗಳ ಕಿಂಚಿತ್ ಚೇತರಿಕೆ ಸಾಧ್ಯವಾಗುತ್ತದೆ. ಹೇಗಿದ್ದರೂ ಐಟಿ ಉದ್ಯಮ ನಿಂತಿಲ್ಲ ಅದರೆ ಮೇಲೆ ಅವಲಂಭಿತವಾದ ಟ್ರಾವೆಲ್ಸ್ ಏಕೆ ತೊಂದರೆ ಅನುಭವಿಸಬೇಕು ಎನ್ನುವುದು ಟ್ರಾವೆಲ್ಸ್ ಮಾಲೀಕರ ವಾದ. ಇನ್ನು ಬ್ಯಾಂಕುಗಳ ಮೋರ್ಟೋರಿಯಂ ಅವಧಿ ವಿಸ್ತರಣೆಯಾಗಬೇಕು ಹಾಗೂ ಈಗ ವಿಧಿಸುತ್ತಿರುವ ತಲೆ ತಿರುಗಿಸುವ ಬಡ್ಡಿ ಧರವನ್ನು ಕಡಿತಗೊಳಿಸಬೇಕು. ಜೊತೆಗೆ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಕ್ರಮಗಳನ್ನು ರೂಪಿಸಬೇಕು. ಧಾರ್ಮಿಕ ಪ್ರವಾಸೋದ್ಯಮ ಹಾಗೂ ತೀರ್ಥ ಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬೇಕು. ಹೀಗಾದಲ್ಲಿ ಮಾತ್ರ ಟ್ರಾವೆಲ್ಸ್ ಉದ್ಯಮ ಮತ್ತೆ ಕ್ರಮೇಣ ಎದ್ದು ನಿಲ್ಲುವ ಪ್ರಯತ್ನ ಮಾಡಲಿದೆ ಎನ್ನುವುದು ಟ್ರಾವೆಲ್ಸ್ ಸಂಸ್ಥೆಯ ಮಾಲೀಕರ ಅಭಿಪ್ರಾಯ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಲಿ ಎನ್ನುವುದು ನಮ್ಮ ಸದಾಶಯವೂ ಹೌದು.

-ವಿಶ್ವಾಸ್ ಭಾರದ್ವಾಜ್, (ವಿಭಾ)

Tags: #travel industryBusinessCoronaCOVID-19govt of indiaindiakarnataka
ShareTweetSendShare
Join us on:

Related Posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

by Shwetha
April 15, 2026
0

ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade)...

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

by Shwetha
April 15, 2026
0

ಸಂವಿಧಾನ ಶಿಲ್ಪಿ B. R. ಅಂಬೇಡ್ಕರ್ ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ...

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

by Shwetha
April 15, 2026
0

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ವೇಳೆ ನಡೆದಿದ್ದ ಆಂತರಿಕ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ....

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

by Shwetha
April 15, 2026
0

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಭಾರಿ ಸಂಚಲನ ಮೂಡಿದೆ. ಇಷ್ಟು ದಿನ ಭಕ್ತರ ಪಾಲಿಗೆ ಮಾರ್ಗದರ್ಶಕರಾಗಿದ್ದ ವಚನಾನಂದ ಶ್ರೀಗಳ ಅಸಲಿ ಮುಖವಾಡ ಕಳಚಿದೆ ಎಂದು...

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

by Shwetha
April 15, 2026
0

ದೆಹಲಿ ಅಬಕಾರಿ ನೀತಿ ಹಗರಣದ ವಿಚಾರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ನ್ಯಾಯಾಧೀಶರ ಎದುರೇ ನೇರ ಸವಾಲು ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈಕೋರ್ಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram