ಬಟ್ಟೆ ತೊಳೆಯಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲು
ಬಾಗಲಕೋಟೆ : ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಇಬ್ಬರು ಮಹಿಳೆಯರು ನೀರುಪಾಲಾದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಲಲಿತಾ ಕತ್ತಿ(೩೭), ಅನುಪಮಾ ದೊಡ್ಡಮನಿ(೨೦)ಮೃತರಾಗಿದ್ದು, ಕೆರೆಯಲ್ಲಿ ಮೊದಲು ೧೨ ವರ್ಷದ ವಿನಾಯಕ ದೊಡಮನಿ ಎಂಬ ಬಾಲಕನನ್ನ ರಕ್ಷಣೆ ಮಾಡಲು, ಮೊದಲು ಅಕ್ಕ ಅನುಪಮಾ ಹಾಗೂ ಇನ್ನೋರ್ವ ಮಹಿಳೆ ಲಲಿತಾ ಕೆರೆಯಲ್ಲಿ ಬಿದ್ದಿದ್ದಾರೆ.
ನಂತ್ರ ಅವ್ರನ್ನ ರಕ್ಷಣೆ ಮಾಡಲು ಇಬ್ಬರು ಮಹಿಳೆಯ ಕೆರೆಯಲ್ಲಿ ಬೀಳ್ತಾರೆ. ಒಟ್ಟು ಇಬ್ಬರು ಗಂಡು ಹಾಗೂ ಐವರು ಮಹಿಳೆಯರು ಕೆರೆಯಲ್ಲಿ ಬಿದ್ದಿದ್ದಾರೆ.
ನಂತ್ರ ಕೆರೆಯಲ್ಲಿ ಬಿದ್ದವರ ಬಾಯಿ ಶಬ್ದಕ್ಕೆ ಓಡಿ ಬಂದ ರೈತರು ಕೆರೆಯಲ್ಲಿ ಬಿದ್ದ ಇಬ್ಬರು ಗಂಡು ಹಾಗೂ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಐವರ ರಕ್ಷಣೆ ಮಾಡಲಾಗಿದೆ.
ಮೃತ ಮಹಿಳೆಯರು ಒಂದೇ ಕುಟುಂಬಕ್ಕೆ ಸೇರಿದವರಿದ್ದಾರೆ. ಸ್ಥಳೀಯ ರೈತರು ಹಾಗೂ ಮೀನುಗಾರರ ಸಹಾಯದಿಂದ ಐವರ ರಕ್ಷಣೆ ಮಾಡಲಾಗಿದೆ.
ಸ್ಥಳಕ್ಕೆ ಗುಳೇದಗುಡ್ಡ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸ್ಥಳೀಯರ, ಮೀನುಗಾರರ ಸಮಯಪ್ರಜ್ಞೆಯಿಂದ ಐವರು ಬದುಕುಳಿದಿದ್ದಾರೆ. ರಕ್ಷಣೆಯಾದವರನ್ನ ಗುಳೇದಗುಡ್ಡ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ