Tyavarekoppa | ರಕ್ತದ ಸೋಂಕಿನಿಂದ 11 ವರ್ಷದ ಸಿಂಹ ಸಾವು
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹದಾಮದಿಂದ ನೋವಿನ ಸಂಗತಿಯೊಂದು ಹೊರಬಿದ್ದಿದೆ.
ಲಯನ್ ಸಫಾರಿಯ ಸಿಂಹ ಯಶವಂತ ಸಾವನ್ನಪ್ಪಿದ್ದಾನೆ. 11 ವರ್ಷ ಯಶವಂತ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೋಟೋಸ್ವೊನ್ ಡೀಸೀಸ್ನಿಂದ ಬಳಲುತ್ತಿದ್ದ ಯಶವಂತ, ಪ್ಲೇಟ್ಲೆಟ್ಸ್ ಕೊರೆತೆಯಿಂದಾಗಿ ಸಾವನ್ನಪ್ಪಿದ್ದಾನೆ.
![Tyavarekoppa 11-year-old-lion-yashwanth-died saaksha tv](http://saakshatv.com/wp-content/uploads/2022/07/loin-259x300.jpg)
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಧಿಕಾರಿಗಳು 10 ತಿಂಗಳ ಹಿಂದಷ್ಟೆ ಬನ್ನೇರುಘಟ್ಟದಿಂದ ಯಶವಂತನನ್ನು ಕರೆತರಲಾಗಿತ್ತು.
ಆತನನ್ನು ಕಳೆದುಕೊಂಡಿರುವುದು ಸಿಂಹದಾಮಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಇನ್ನೂ ಯಶವಂತಗೂ ಮೊದಲೂ ಇತ್ತೀಚೆಗಷ್ಟೆ ಲಯನ್ಸಫಾರಿಯಲ್ಲಿ ಹುಲಿಯೊಂದು ಸಾವನ್ನಪ್ಪಿತ್ತು.
ಇದೀಗ ಯಶವಂತನ ಸಾವನ್ನಪ್ಪಿದ್ದಾನೆ. ಇನ್ನೂ ಯಶವಂತನ ಸಾವಿನಿಂದಾಗಿ ಸಿಂಹದಾಮದಲ್ಲಿ ಸಿಂಹಗಳ ಸಂಖ್ಯೆ ನಾಲ್ಕಕ್ಕೇ ಇಳಿದಿದೆ.