ADVERTISEMENT
Monday, June 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಅನ್‌ಸೋಲ್ಡ್‌ ಟು ಅನ್‌ಸಂಗ್‌ ಹೀರೋ..!

Unsold to Unsung Hero..!

Shwetha by Shwetha
June 5, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಅದೃಷ್ಟ ಕೆಲವೊಂದು ಬಾರಿ ಬೆನ್ನ ಹಿಂದಿದ್ರೂ ಗೊತ್ತಾಗಲ್ಲ… ಹಾಗೇ ರಜತ್ ಪಟೀದಾರ್ ಕೂಡ ಕನಸಿನಲ್ಲೂ ಆರ್‌ಸಿಬಿಯ ನಾಯಕನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಅಷ್ಟೇ ಯಾಕೆ, ಕ್ಯಾಪ್ಟನ್ ಆಗಿ ಐಪಿಎಲ್ ಟ್ರೋಪಿ ಎತ್ತಿ ಹಿಡಿಯುತ್ತೇನೆ ಎಂಬ ಭ್ರಮೆಯಲ್ಲೂ ಇರಲಿಲ್ಲ. ಯಾಕಂದ್ರೆ ಕಳೆದ ನಾಲ್ಕು ವರ್ಷಗಳಲ್ಲಿ ರಜತ್‍ಗೆ ಆಗಿದ್ದು ಎಲ್ಲವೂ ಅನಿರೀಕ್ಷಿತ.. ಆಕಸ್ಮಿಕ.. ಆಶ್ಚರ್ಯ..ಅನುಭೂತಿ..!

ಹಾಗೇ ನೋಡಿದ್ರೆ ರಜತ್ ಪಟೀದಾರ್ ಆರ್‌ಸಿಬಿಗೆ ಎಂಟ್ರಿಯಾಗಿದ್ದೇ ಅನಿರೀಕ್ಷಿತ. 2021ರಲ್ಲಿ 20 ಲಕ್ಷ ಮೂಲ ಬೆಲೆಗೆ ಆರ್‌ಸಿಬಿಯ ಡಗೌಟ್ ಸೇರಿಕೊಂಡಿದ್ರು ರಜತ್‌. ಮೊದಲ ಸೀಸನ್‍ನಲ್ಲಿ 4 ಪಂದ್ಯಗಳಲ್ಲಿ 71 ರನ್ ಪೇರಿಸಿದ್ದಷ್ಟೇ. ಆದ್ರೆ ಆರ್‌ಸಿಬಿ ಮುಂದಿನ ಸೀಸನ್‍ಗೆ ಪಟೀದಾರ್‌ನ ರಿಟೇನ್ ಮಾಡಲು ಮನಸ್ಸು ಮಾಡಲಿಲ್ಲ. ಆದ್ರೂ ಹರಾಜಿನಲ್ಲಿ ಖರೀದಿ ಮಾಡುವ ಭರವಸೆ ನೀಡಿತ್ತು. ಆದ್ರೆ ಹರಾಜಿನಲ್ಲಿ ರಜತ್‌ನ ಖರೀದಿ ಮಾಡದೇ ಮಾತಿಗೆ ತಪ್ಪಿತ್ತು. ಈ ಬಿಡ್ಡಿಂಗ್‌ನಲ್ಲಿ ರಜತ್ ಪಟೀದಾರ್ ಹೆಸರಿನ ಮೇಲೆ ಅನ್‍ಸೋಲ್ಡ್ ಸೀಲ್ ಕೂಡ ಬಿತ್ತು.

Related posts

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಸಚಿವ ಮಧು ಬಂಗಾರಪ್ಪ ಅವರ ಕನಸು ನನಸು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಶಾಲೆ ಜುಲೈನಲ್ಲಿ ಪ್ರಾರಂಭ!

June 16, 2025
ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

June 16, 2025

ಇದು ರಜತ್ ಪಟೀದಾರ್‌ ಮನಸ್ಸನ್ನು ಘಾಸಿಗೊಳಿಸಿತ್ತು. ಇನ್ಯಾವತ್ತೂ ಆರ್‌ಸಿಬಿ ಪರ ಆಡಬಾರದು ಎಂಬ ಕಠಿಣ ನಿಲುವನ್ನು ಮನಸ್ಸಿನಲ್ಲೇ ತೆಗೆದುಕೊಂಡಿದ್ದ ಪಟೀದಾರ್‌. ಐಪಿಎಲ್ ಟೂರ್ನಿಯಲ್ಲಿ ಆಡುವ ಅವಕಾಶ ಕೈ ತಪ್ಪಿರುವ ನಿರಾಸೆಯ ನಡುವೆಯೇ ಮದುವೆಯಾಗಲು ರೆಡಿಯಾಗಿದ್ದ. ಅಷ್ಟರಲ್ಲೇ ಆಕಸ್ಮಿಕವಾಗಿ ಆರ್‌ಸಿಬಿ ಮ್ಯಾನೇಜ್‍ಮೆಂಟ್‍ನಿಂದ ಕರೆ ಬಂತು. ಲುನ್ವಿತ್ ಸಿಸೋಡಿಯಾ ಗಾಯಗೊಂಡಿದ್ದಾನೆ, ಆತನ ಸ್ಥಾನಕ್ಕೆ ನಿನ್ನನ್ನು ಆಯ್ಕೆ ಮಾಡಿದ್ದೇವೆ ಎಂದು ಆರ್‌ಸಿಬಿ ಮ್ಯಾನೇಜ್‍ಮೆಂಟ್ ಹೇಳಿದಾಗ ರಜತ್ ಹಿಂದೆ ಮುಂದೆ ನೋಡದೇ ಸರಿ ಅಂದುಬಿಟ್ಟ. ಅಷ್ಟೇ ಅಲ್ಲ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ.

ಯಾಕಂದ್ರೆ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡದಲ್ಲಿರುವುದೇ ದೊಡ್ಡ ವಿಷಯ. ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೆ ಆರ್‌ಸಿಬಿ ಪರ ಆಡಬೇಕು ಎಂಬ ತುಡಿತವಿರುತ್ತದೆ. ಹೀಗಾಗಿಯೇ ಈ ಅವಕಾಶವನ್ನು ರಜತ್ ಸರಿಯಾಗಿಯೇ ಬಳಸಿಕೊಂಡ. ಲಕ್ನೋ ವಿರುದ್ಧ ಸ್ಫೋಟಕ ಶತಕ ಸಿಡಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡ. ಆಡಿರುವ 8 ಪಂದ್ಯಗಳಲ್ಲಿ 333 ರನ್ ದಾಖಲಿಸಿದ್ದ. ಆದ್ರೆ ದುರಾದೃಷ್ಟವೆಂದ್ರೆ 2023ರ ಐಪಿಎಲ್‍ನಲ್ಲಿ ಗಾಯದ ಕಾರಣ ಟೂರ್ನಿಯಿಂದಲೇ ದೂರ ಉಳಿದುಕೊಳ್ಳಬೇಕಾಯ್ತು.

ಬಳಿಕ 2024ರ ಸೀಸನ್‌ಗೆ ಎಂಟ್ರಿ ಕೊಟ್ಟ ಪಟೀದಾರ್‌ 15 ಪಂದ್ಯಗಳಲ್ಲಿ ಐದು ಅರ್ಧಶತಕಗಳ ಸಹಾಯದಿಂದ 395 ರನ್ ಗಳಿಸಿ ಆರ್‌ಸಿಬಿ ತಂಡದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಂಡ. ವಿಶೇಷ ಅಂದ್ರೆ 2021 ರಿಂದ 2024 ರವರಗೆ ಪ್ರತಿ ಸೀಸನ್‍ನಲ್ಲಿ ಪಟೀದಾರ್ ಪಡೆದುಕೊಂಡ ಸಂಭಾವನೆ ಕೇವಲ 20 ಲಕ್ಷ ರೂಪಾಯಿ ಅಷ್ಟೇ..!
ಆದ್ರೆ 2025ರಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಪಟೀದಾರ್‌ಗೆ 11 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಮುಂದೆ ಆರ್‌ಸಿಬಿ ನಾಯಕನನ್ನಾಗಿ ಘೋಷಣೆ ಮಾಡಿದಾಗ ಆಶ್ಚರ್ಯಚಕಿತರಾಗಿದ್ದರು. ಆದ್ರೆ ಆರ್‌ಸಿಬಿ ಮ್ಯಾನೇಜ್‍ಮೆಂಟ್‍ಗೆ ಈ ಹುಡುಗನ ಸಾಮರ್ಥ್ಯದ ಬಗ್ಗೆ ಭರವಸೆಯನ್ನಿಟ್ಟುಕೊಂಡಿತ್ತು. ಕೋಚ್‌ ಆಂಡಿ ಫ್ಲವರ್ ಮತ್ತು ಮೆಂಟರ್‌ ದಿನೇಶ್ ಕಾರ್ತಿಕ್, ರಜತ್‍ಗೆ ಮಾರ್ಗದರ್ಶನ ನೀಡಿದ್ರು. ಇದರ ಪರಿಣಾಮ ರಜತ್‌ ಕೂಲ್ ಆಗಿಯೇ ತಂಡವನ್ನು ಮುನ್ನಡೆಸಿಕೊಂಡು ಹೋದ. ಸೋಲು, ಗೆಲುವಿನ ಮೆಟ್ಟಿಲು ಹತ್ತಿಕೊಂಡು ಹೋಗುವಾಗ ನಾನಾ ಟೀಕೆಗಳು ಎದುರಾಗಿದ್ದವು. ಯಾಕಂದ್ರೆ ರಜತ್ ಪಟೀದಾರ್ ಮುನ್ನಡೆಸುತ್ತಿರುವುದು ವಿಶ್ವ ಕ್ರಿಕೆಟ್‍ನ ಕೋಟ್ಯಂತರ ಅಭಿಮಾನಿಗಳ ಉಸಿರಾಗಿರುವ ತಂಡವನ್ನು. ಹೀಗಾಗಿ ರಜತ್‍ನ ಪ್ರತಿ ಹೆಜ್ಜೆಯನ್ನಿಡುವಾಗಲೂ ಎಚ್ಚರಿಕೆಯಿಂದಿರಬೇಕಿತ್ತು.

ಅದರಲ್ಲೂ 18 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಬೇಕಾಗಿತ್ತು. ಜೊತೆಗೆ ವಿರಾಟ್‍ಗೋಸ್ಕರ ಈ ಬಾರಿ ಕಪ್ ಗೆಲ್ಲಲೇಬೇಕು ಎಂಬ ಹಠ ಇಡೀ ಆರ್‌ಸಿಬಿ ತಂಡದಲ್ಲಿತ್ತು. ಕಳೆದ 17 ವರ್ಷಗಳಿಂದ ಗೆಲುವಿನ ಗೋಪುರಕ್ಕೆ ಐಪಿಎಲ್ ಟ್ರೋಫಿಯ ಮುಕುಟವನ್ನಿಡಲು ಹೆಣಗಾಡುತ್ತಿತ್ತು. ಸುಮಾರು 14 ವರ್ಷ ಫೌಂಡೇಶನ್‌, ಗೋಡೆ ಕಟ್ಟುವ ಹಂತದಲ್ಲಿ ಕುಸಿದು ಬೀಳುತ್ತಿತ್ತು. ಇನ್ನು ಮೂರು ಬಾರಿ ಗೋಪುರಕ್ಕೆ ಮುಕುಟವನ್ನಿಡಲು ಹೋದಾಗ ಜಾರಿಬೀಳಬೇಕಾಯ್ತು.

ಆದ್ರೆ ಈ ಬಾರಿ ಹಾಗಾಗಲಿಲ್ಲ. ಗೋಡೆ ಕಟ್ಟುವ ಹಂತದಲ್ಲಿ ಜಾರಿಬಿದ್ರೂ ಅದನ್ನು ಸರಿಪಡಿಸಿಕೊಂಡ ಆರ್‌ಸಿಬಿಯ ಮೇಸ್ತ್ರಿ ರಜತ್ ಪಟೀದಾರ್, ಆರ್‌ಸಿಬಿಯ ಗೆಲುವಿನ ಗೋಪುರದಲ್ಲಿ ಐಪಿಎಲ್ ಟ್ರೋಫಿಯ ಮುಕುಟ ಇದ್ದೇ ಇರುತ್ತೆ ಎಂಬ ವಿಶ್ವಾಸದಲ್ಲಿದ್ದರು. ಗೋಪುರ ಕಟ್ಟುವ ವೇಳೆ ಅಂದ್ರೆ ಕ್ವಾಲಿಫೈಯರ್ ಮತ್ತು ಫೈನಲ್‍ನಲ್ಲಿ ಲಯಬದ್ಧವಾಗಿ ಆಡಿ ಕೊನೆಗೂ ಆರ್‌ಸಿಬಿಯ ಗೆಲುವಿನ ಗೋಪುರದಲ್ಲಿ ಐಪಿಎಲ್ ಟ್ರೋಫಿ ಹೊಳೆಯುವಂತೆ ಮಾಡಿದ್ದು ರಜತ್ ಪಟೀದಾರ್. ಅಂದು ಅನ್‌ಸೋಲ್ಡ್ ಪ್ಲೇಯರ್.. ಇಂದು ಅನ್‍ಸಂಗ್ ಹೀರೋ..! ಇದು ದಿವ್ಯಾನುಭೂತಿ ಅಲ್ಲದೆ ಮತ್ತೇನು..?

ಸನತ್‌ ರೈ

ShareTweetSendShare
Join us on:

Related Posts

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಸಚಿವ ಮಧು ಬಂಗಾರಪ್ಪ ಅವರ ಕನಸು ನನಸು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಶಾಲೆ ಜುಲೈನಲ್ಲಿ ಪ್ರಾರಂಭ!

by Shwetha
June 16, 2025
0

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಶಾಲೆ ಸ್ಥಾಪನೆಯ ಕನಸು ಇದೀಗ ನನಸಾಗುವತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ,...

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

by Shwetha
June 16, 2025
0

ಬೆಂಗಳೂರು, ಕರ್ನಾಟಕ: ಇಸ್ರೇಲ್ ಮತ್ತು ಇರಾನ್ ನಡುವೆ ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಕರ್ನಾಟಕದ 19 ಸದಸ್ಯರ ನಿಯೋಗವೊಂದು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದೆ. ಈ ನಿಯೋಗದಲ್ಲಿ ಕಾಂಗ್ರೆಸ್, ಬಿಜೆಪಿ...

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಬಿಹಾರ: ಲಾಲು ಕಾಲಿನ ಬಳಿ ಅಂಬೇಡ್ಕರ್ ಫೋಟೋ; ಬಿಜೆಪಿ ಆರೋಪ, ತೇಜಸ್ವಿ ತಿರುಗೇಟು!

by Shwetha
June 16, 2025
0

ಪಟ್ನಾ, ಬಿಹಾರ: ಬಿಹಾರ ರಾಜಕಾರಣದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದ್ದು, ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕಾಲಿನ ಬಳಿ ಸಂವಿಧಾನ ಶಿಲ್ಪಿ...

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೇಮಕಾತಿ 2025

by Shwetha
June 16, 2025
0

LIC HFL Recruitment 2025 : ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ....

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಮಶ್ರೂಮ್ ಫ್ರೈಡ್ ರೈಸ್ ಮತ್ತು ಗ್ರೇವಿ ರೆಸಿಪಿ

by Shwetha
June 16, 2025
0

ಮಶ್ರೂಮ್ ಫ್ರೈಡ್ ರೈಸ್ ಮತ್ತು ಮಶ್ರೂಮ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು ಮತ್ತು ವಿಧಾನಗಳನ್ನು ಇಲ್ಲಿ ನೀಡಲಾಗಿದೆ: 1. ಮಶ್ರೂಮ್ ಫ್ರೈಡ್ ರೈಸ್ (Mushroom Fried Rice)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram