ಆಪರೇಷನ್ ಸಿಂಧೂರ… ಈ ರಣಬೇಟೆ..ಪಾಕಿಸ್ತಾನದ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಮಾಡ್ಬಿಟ್ಟಿದೆ.. ತಮ್ಮದು ಕೆಚ್ಚೆದೆ.. ಕೆಚ್ಚೆದೆ ಅಂತಿದ್ದವರ ಗುಂಡಿಗೆ ಗಢಗಢನೇ ಅಲ್ಲಾಡಿ ಹೋಗಿದೆ… ಹೃದಯ ಒಂದ್ಸಾರಿ.. ಬಲಕ್ಕೆ ಓಡಿ ಬಂದು ಮತ್ತೇ ಎಡಕ್ಕೆ ಹೋಗಿ ಜೋರಾಗಿ ಹೊಡೆದುಕೊಳ್ತಿದೆ. ಭಾರತೀಯ ಸೇನಾ ಆರ್ಭಟಕ್ಕೆ ಕಣ್ಣುಗಳು ಇಂಗಿ ಹೋಗದೇ ಇರೋದೊಂದು ಬಾಕಿ ಅಷ್ಟೇ..ಅಂಥಹ ಪರಿಸ್ಥಿತಿಯಲ್ಲಿ ಈ ಸುಡು ಬಿಸಿಲ ಬೇಸಿಗೆ ಧಗೆಯಲ್ಲೂ ರಗ್ಗು ಹೊದ್ದುಕೊಂಡು ನಡುಗುತ್ತಿದೆ. ಆದ್ರೂ ಒಣಜಂಭದ ಮಾತುಗಳು ಮಾತ್ರ ಅಲ್ಲಿನ ನಾಯಕರ ನಾಲಿಗೆಯಲ್ಲಿ ನಾಟ್ಯವಾಡ್ತಿದೆ.. ಪ್ರಧಾನಿ.. ರಕ್ಷಣಾ ಸಚಿವ ಸೇರಿದಂತೆ.. ಎಲ್ರೂ ಉಗುಳು ನುಂಗಿಕೊಂಡೇ ಹೇಳಿಕೆಗಳನ್ನ ಕೊಡ್ತಿದ್ದಾರೆ.. ಹಾಗೇ ಮಾಡಿ ಬಿಡ್ತೀವಿ.. ಹೀಗೆ ಮಾಡಿ ಬಿಡ್ತೀವಿ ಅಂತ ಖಾಲಿ ಡಬ್ಬದಲ್ಲಿರೋ ಕಲ್ಲುಗಳು ಮಾತಾಡಿದಂತೆ ಮಾತಾಡ್ತಿದ್ದಾರೆ..ಇದರ ನಡುವೆ ಇದೇ ಪಾಪಿಸ್ತಾನ ಇನ್ನಷ್ಟು ಪಾತಾಳಕ್ಕೆ ಹೋಗೋ ಮತ್ತೊಂದು ವಿಚಾರ ಸ್ಫೋಟವಾಗಿದೆ.. ಅದೇ ಅದರ ಭವಿಷ್ಯದ ಕಥೆ..
ಪಾಕಿಸ್ತಾನದ ಹಣೆಬರಹ ಕೆಟ್ಟೋಗಿ.. ಹಣೆಯಲ್ಲಿದ್ದ ಒಂದಷ್ಟು ಒಳ್ಳೆಯ ಗೆರೆಗಳಿಗೆ ಗರ ಬಡಿದು ಅನೇಕ ವರ್ಷಗಳೇ ಕಳೆದು ಹೋಗಿದೆ. ಕೇವಲ ಉಗ್ರರ ಉದರ ತುಂಬಿಸಿಕೊಂಡು.. ಭಯೋತ್ಪಾದಕರಿಂದ ಭಯದ ಬೀಜ ಬಿತ್ತಿಸಿ ಬೆಳೆ ತೆಗೆದ ಈ ದೇಶ ಈಗ ಅದನ್ನೇ ಉಣ್ಣೋ ಕೆಟ್ಟ ಸ್ಥಿತಿಗೆ ಬಂದು ನಿಂತಿದೆ. ಅದೇನೋ ಹೇಳ್ತಾರಲ್ಲಾ ಮಾಡಿದುಣ್ಣೋ ಮಾರಾಯ ಅಂತ ಹಾಗೇ ಇರ್ಲಿ.. ಈಗ ಇದರ ಮುಂದಿನ ಭವಿಷ್ಯ ಏನಾಗುತ್ತೆ.. ಇದರ ಗ್ರಹಗತಿಗಳು ಹೇಗಿವೆ ಅನ್ನೋದನ್ನ ಸ್ವಲ್ವ ನೋಡೋಣ..
ಕೆಟ್ಟ ಕಾಲ ರೀ.. ನಿಜಕ್ಕೂ ಪಾಕಿಸ್ತಾನಕ್ಕೆ ಈಗ ಅತ್ಯಂತ ಕೆಟ್ಟ ಕಾಲ.. ಹೇಳ್ಬೇಕು ಅಂದ್ರೆ ಜ್ಯೋತಿಷ್ಯದ ಪ್ರಕಾರ. ಈ ದೇಶ ಅವನತಿಯ ಕಲ್ಲನ್ನ ತಲೆ ಮೇಲೆ ಹೊತ್ಕೊಂಡು ಕೂತಿದೆ.. ಅದು ಯಾವಾಗ ಬೇಕಿದ್ರೂ ತಲೆಯನ್ನ ಛಿದ್ರ ಮಾಡಿ ಬಿಡ್ಬಹುದು. ನೋಡಿ ಒಂದು ವಿಚಾರ ಏನು ಗೊತ್ತಾ.. ಈ ದೇಶದ ಟೈಮ್ ಮಂಗಳವಾರದಿಂದ್ಲೇ ಶುರುವಾಗಿದೆಯಂತೆ. ಭಾರತ ಅದರ ಮೇಲೆ ಮುಗಿ ಬೀಳ್ತಲ್ಲಾ.. ಆಗ್ಲೇ ಇದಕ್ಕೆ ಕೆಟ್ಟ ಟೈಮ್ ಹೆಗಲೇರಿ.. ಕಿವಿಗೆ ಕಡ್ಡಿ ಹಾಕಿ ತಿರುವೋಕೆ ಶುರುವಾಗಿದೆಯಂತೆ. ಅದು ಹೇಗೆ ಅಂದ್ರೆ…ಮೀನ ರಾಶಿಯಲ್ಲಿ ಶನಿ..ಶುಕ್ರ. ರಾಹು ಗ್ರಹವಿತ್ತು. ಇನ್ನು ಬುಧಗ್ರಹ ಮುಂಜಾನೆ 5-33ಕ್ಕೆ ಮೇಷ ರಾಶಿಯನ್ನ ಪ್ರವೇಶ ಮಾಡ್ತು. ಸದ್ಯ ಪಾಕಿಸ್ತಾನದ ಜಾತಕ ಹೇಗಿದೆ ಗೊತ್ತಾ..? ಶುಕ್ರನ ಅಂತರದಶ ಹಾಗೇ ಚಂದ್ರನ ಮಹಾದಶ ನಡೀತಾ ಇದೆ.. ಇದೇ ನೋಡಿ ಪಾಕಿಸ್ತಾನ ಬೆನ್ನನ್ನ ಗುದ್ದಿ.. ಗುದ್ದಿ.. ಗೂನು ಮಾಡ್ತಿರೋದು..
ಇಷ್ಟು ದಿನ ತಾನು ಆಡಿದ್ದೇ ಆಟ.. ಕುಣಿದಿದ್ದೇ ಕುಣಿತ ಅನ್ನವಂತೆ ಪಾಕಿಸ್ತಾನ ಆಡ್ತಿತ್ತು. ಆದ್ರೆ ಮುಂದೆ ಹಾಗಿಲ್ಲ..ಯಾಕೆಂದ್ರೆ ಜ್ಯೋತಿಷ್ಯದ ಪ್ರಕಾರ ಶುಕ್ರನು ಮಾರಕ ಸ್ಥಾನದಲ್ಲಿ ಕುರ್ಚಿ ಹಾಕೊಂಡು ಕೂತಿದ್ದು. ಪಾಕಿಸ್ತಾನವನ್ನ ನಾಶ ಮಾಡಿಯೇ ಮೇಲೇಳೋದು ಅಂತಿದೆಯಂತೆ. ಇದ್ರಿಂದ ಪಾಕಿಸ್ತಾನ ಮುಂದಿನ ದಿನದಲ್ಲಿ ಮತ್ತಷ್ಟು ಒದ್ದಾಡಲಿದೆಯಂತೆ. ಕಷ್ಟಗಳು ಇದರ ಕಾಲು ಹಿಡಿದು ಎತ್ತಿ ಬಡಿಯಲಿದೆಯಂತೆ.. ದೇಶದಲ್ಲಿ ಇನ್ನಷ್ಟು ದಾರಿದ್ರ್ಯ ತಾಂಡವ ಆಡಲಿದೆಯಂತೆ. ಭಿಕ್ಷೆ ತಟ್ಟೆಗೆ ಯಾವ ದೇಶವೂ ಕಾಸು ಹಾಕಲು ಮುಂದೆ ಬರೋದಿಲ್ವಂತೆ.. ಸೇನೆಯಲ್ಲೂ ಬಿಕ್ಕಟ್ಟು ಸೃಷ್ಟಿಯಾಗಬಹುದು.. ನಿಮಗೆ ಗೊತ್ತಿರಬಹುದು ಈ ರಾಷ್ಟ್ರದಲ್ಲಿ ಸೇನೆಯೇ ಪ್ರಬಲ.. ಸೇನೆಯ ಮುಖ್ಯಸ್ಥನೇ ಪ್ರಧಾನಿಯನ್ನ ಕುರ್ಚಿಯಿಂದ ಎಳೆದು ಕೂರಿಸಿ ತಾನು ಕೂತ್ಕೊಂಡ್ರೂ ಅಚ್ಚರಿ ಏನಿಲ್ಲ..
ಇನ್ನು ಈ ದೇಶದ ಕುತ್ತಿಗೆಗೆ ಅಂಗ್- ಭಾಂಗ್ ಯೋಗ ಸುತ್ತಿಕೊಂಡು ಉಸಿರನ್ನ ಮತ್ತಷ್ಟು ಬಿಗಿ ಮಾಡಲಿದೆ ಅಂತಾರೆ ಜ್ಯೋತಿಷಿಗಳು.. ಮೇ 14ರ ಬಳಿಕ ಮಿಥುನ ರಾಶಿಗೆ ಗುರು ಪ್ರವೇಶ ಮಾಡ್ತಾನೆ.. ಇದ್ರಿಂದ ಪಾಕಿಸ್ತಾನ ಇಬ್ಭಾಗವಾಗಹುದು.. ಇಲ್ಲ ಮೂರು ಭಾಗವಾದ್ರೂ ಆಗ್ಬಹುದಂತೆ. ಇದೇ ಸಮಯದಲ್ಲಿ ಮಂಗಳನ ಅಂತದದಶ ಹಾಗೂ ಮಂಗಳನ ಮಹಾದಶದಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂತರ ಮತ್ತಷ್ಟ ಹೆಚ್ಚಾಗಲಿದೆ.. ಪಾಕಿಸ್ತಾನದ ಮಣ್ಣು ಕೆಂಪಾಗಲಿದೆಯಂತೆ.
ಹಾಗಾದ್ರೆ ಭಾರತದ ಜಾತಕ ಏನು ಹೇಳುತ್ತೆ?
ವೃಷಭ ಲಗ್ನದಲ್ಲಿ ಭಾರತವಿದ್ದು, ನಮ್ಮ ದೇಶದ ಜಾತಕದಲ್ಲಿ ಸೂರ್ಯನ ಅಂತರದಶಾ ನಡೆಯುತ್ತಿದೆ. ಸೂರ್ಯನು ಜಾತಕದಲ್ಲಿ ನಾಲ್ಕನೇ ಮನೆಯ ಅಧಿಪತಿಯಾಗಿದ್ದಾನೆ. ಇದರೊಂದಿಗೆ, ಚಂದ್ರನ ಸ್ಥಿತಿಯಲ್ಲಿ ಸೂರ್ಯನ ಅಂತರದಶವು ಭಾರತದ ಜಾತಕದಲ್ಲಿದೆ. ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ 2025 ರಲ್ಲಿ ಭಾರತದ ಖ್ಯಾತಿ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಇದು ಭಾರತಕ್ಕೆ ಸುವರ್ಣ ಸಮಯವಾಗಿರುತ್ತಂತೆ…
ಹಾಗಾದ್ರೆ ಈ ಜ್ಯೋತಿಷ್ಯ ಸತ್ಯನಾ..? ಇದು ವಾಸ್ತವಕ್ಕೆ ಎಷ್ಟು ಹತ್ತಿರವಾಗಿದೆ ಅನ್ನೋ ಪ್ರಶ್ನೆ ಕೂಡ ನಮ್ಮಲ್ಲಿ ಮೂಡುತ್ತೆ… ಮೊದಲು ಪಾಕಿಸ್ತಾನದ ಭವಿಷ್ಯಕ್ಕೆ ಬರೋಣ.. ಅಂಗ್ ಭಂಗ್ ಯೋಗದಿಂದ ಪಾಕಿಸ್ತಾನ ಇಬ್ಭಾಗ ಆಗುತ್ತೆ ಅಂತಾ ಜ್ಯೋತಿಷಿಗಳು ಹೇಳ್ತಾ ಇದ್ದಾರೆ.. ಹಾಗ್ ನೋಡಿದ್ರೆ ಈ ಭವಿಷ್ಯ ನಿಜ ಆಗಿದ್ರೂ ಆಗ್ಬೋದು.. ಯಾಕಂದ್ರೆ ಸದ್ಯ ಪಾಕಿಸ್ತಾನದಲ್ಲಿ ಆಂತರಿಕ ಸಂಘರ್ಷ ಏರ್ಪಟ್ಟಿದೆ.. ಪ್ರತ್ಯಕ್ಷ ಬಲೂಚಿ ಸ್ಥಾನಕ್ಕಾಗಿ ಬಲೂಚ್ ಲಿಬರೇಶನ್ ಆರ್ಮಿಯ ಹೋರಾಟ ತೀವ್ರಗೊಂಡಿದೆ.. ಪಾಕ್ ಸೇನೆಯನ್ನ ಬಲೂಚಿಸ್ತಾನ್ ಬಂಡುಕೋರರು ಪದೇ ಪದೇ ಕಾಡ್ತಾ ಇದ್ದಾರೆ.. ಇವರನ್ನ ನಿಭಾಯಿಸೋದು ಕಷ್ಟ ಆಗಿದೆ.. ಹೀಗಾಗಿ ಅತಿ ಶೀಘ್ರದಲ್ಲಿ ಪ್ರತ್ಯಕ್ಷ ಬಲೂಚಿಸ್ತಾನ್ ಏರ್ಪಟ್ಟರೂ ಅಚ್ಚರಿ ಇಲ್ಲ… ಒಂದು ವೇಳೆ ಬಲೂಚಿಸ್ತಾನ್ ಪ್ರತ್ಯಕ್ಷ ಗೊಂಡರೆ ಪಾಕ್ ಇಬ್ಭಾಗ ಆಗುತ್ತೆ..ಪಾಕ್ ನ ಶೇಕಡಾ 40 ರಷ್ಟು ಭೂಮಿ ಬಲೂಚಿ ಸ್ತಾನ್ ಪಾಲಾಗುತ್ತೆ..