ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಹಕ್ಕಿ ಡಿಕ್ಕಿ – ತುರ್ತು ಭೂಸ್ಪರ್ಷ…
ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಪಕ್ಷಿ ಡಿಕ್ಕಿ ಹೊಡೆದ ಪರಿಣಾಮ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. 1550 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಚಾಪರ್ಗೆ ಪಕ್ಷಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಪೈಲಟ್ ನ ಜಾಣತನದಿಂದ ಭಾರೀ ಅನಾಹುತ ತಪ್ಪಿದೆ.
ಚಾಪರ್ ಗೆ ಹಕ್ಕಿ ಬಡಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಹೆಲಿಕಾಪ್ಟರ್ ಅನ್ನು ಮತ್ತೆ ಪೊಲೀಸ್ ಲೈನ್ ಮೈದಾನದಲ್ಲಿ ಇಳಿಸಿದ್ದಾರೆ. ಇದರಿಂದಾಗಿ ಸಿಎಂ ಯೋಗಿ ಆದಿತ್ಯನಾಥ್ ಪೊಲೀಸ್ ಲೈನ್ ಮೈದಾನದಿಂದ ಸರ್ಕ್ಯೂಟ್ ಹೌಸ್ಗೆ ಹಿಂತಿರುಗಬೇಕಾಯಿತು. ಇದಾದ ಬಳಿಕ ರಸ್ತೆ ಮಾರ್ಗವಾಗಿ ಸರ್ಕ್ಯೂಟ್ ಹೌಸ್ ನಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿಎಂ ಆಗಮಿಸಿದರು. 11 ಗಂಟೆಗೆ ಅವರು ರಾಜ್ಯದ ವಿಮಾನದಲ್ಲಿ ಲಕ್ನೋಗೆ ತೆರಳಿದರು.
Mid-air trouble for Yogi Adityanath. His #helicopter had to make an emergency landing after a bird hit the plane in Varanasi. #Varanasi #Yogi #YogiAdityanath #BIRDHIT pic.twitter.com/fIvJgI7qjh
— Payal Mohindra (@payal_mohindra) June 26, 2022
ಸಿಎಂ ಯೋಗಿ ಆದಿತ್ಯನಾಥ್ ಅವರು ಬೆಳಗ್ಗೆ 9 ಗಂಟೆಗೆ ಸರ್ಕ್ಯೂಟ್ ಹೌಸ್ ನಿಂದ ಪೊಲೀಸ್ ಲೈನ್ ಮೈದಾನಕ್ಕೆ ಲಖನೌಗೆ ತೆರಳಿದರು. ಹೆಲಿಕಾಪ್ಟರ್ ಇಲ್ಲಿಂದ ಹೊರಟ ಸುಮಾರು 10 ನಿಮಿಷಗಳ ನಂತರ ಮತ್ತೆ ಪೊಲೀಸ್ ಮೈದಾನಕ್ಕೆ ಇಳಿಯಿತು ಎಂದು ಡಿಎಂ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ. ಇದರಿಂದಾಗಿ ಪೊಲೀಸ್ ಮತ್ತು ಆಡಳಿತ ಸಿಬ್ಬಂದಿ ಕೆಲಕಾಲ ವಿಚಲಿತರಾಗಿದ್ದರು. ಸಿಎಂ ಕೆಳಗಿಳಿದಾಗ ಪಿಸೌರ್ ಸೇತುವೆ ಬಳಿ 1550 ಅಡಿ ಎತ್ತರದಲ್ಲಿ ಆಕಾಶದಲ್ಲಿ ಹೆಲಿಕಾಪ್ಟರ್ ಗೆ ಹಕ್ಕಿ ಡಿಕ್ಕಿ ಹೊಡೆದಿರುವುದು ಕಂಡು ಬಂದಿದೆ.








