ಬೆಂಗಳೂರು : ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅನುಪಮಾ ಶೆಣೈ ಅವರು ಸ್ಯಾಂಡಲ್ ವುಡ್ ನ ಬುದ್ಧವಂತ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ. ಇದು ಟ್ವಿಟ್ಟರ್ ನಲ್ಲಿ ಬಹು ದೊಡ್ಡ ಟ್ವೀಟ್ ವಾರ್ ಗೆ ಕಾರಣವಾಗಿದೆ. ಅನುಪಮಾ ಅವರ ವಿರುದ್ಧ ಉಪ್ಪಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
ಅಂದಹಾಗೆ ಈ ವಾರ್ ಶುರುವಾಗಲು ಕಾರಣ ಜುಲೈ 6 ರಂದು ಅನುಪಮಾ ಅವರು ಮಾಡಿದ ಟ್ವೀಟ್..
ಅಂದಿನ ಈ ಟ್ವೀಟ್ ಅನುಪಮಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿ, ‘ಫೇಸ್ ಬುಕ್ ನಲ್ಲಿ ಈ ಚಿತ್ರ ನೋಡೋಕ್ಕೆ ಸಿಕ್ಕಿತು. ಈ ರೀತಿಯಾಗಿ ಹರಡುತ್ತಿರುವುದು ಕೊರೊನಾ, ಪ್ರಜಾಕೀಯ ಅಲ್ಲ’ ಎಂದು ವ್ಯಂಗ್ಯವಾಡಿದ್ದರು.
ಇದನ್ನು ಕಂಡ ಉಪ್ಪಿ ಅಭಿಮಾನಿಗಳು ಪ್ರಜಾಕೀಯ ಹರಡಿದರೆ ನಿಮಗೇನು ತೊಂದರೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅನಪಮಾ ಅವರು, ಕೊರೊನಾಗೂ ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ? ಕೊರೊನಾ ಬರದಂತೆ ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳಬೇಕು. ಪ್ರಜಾಕೀಯ ಸಭ್ಯತೆ, ಒಳ್ಳೆಯತನದ ಮಾಸ್ಕ್ (ಮುಖವಾಡ) ಧರಿಸಿಕೊಂಡು ನಮ್ಮ ಹತ್ತಿರ ಬರುತ್ತಿದೆ. ಎರಡೂ ಅಪಾಯ. ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದಿರಿ ಎಂದಿದ್ದರು.
ಅಲ್ಲದೆ ‘ಕೊರೊನಾ ಹೇಗೆ ಚೀನಾದ ಲ್ಯಾಬ್ ಗಳಲ್ಲಿ ಇತ್ತೋ ಹಾಗೇ ಪ್ರಜಾಕೀಯ ಸಹ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇದೆ. ಸಮುದಾಯಕ್ಕೆ ಹರಡುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿ ಸರಕಾರಕ್ಕೆ ಹೇಗೆ ಕರೊನಾ ತಡೆಗಟ್ಟಲು ಸಾಧ್ಯವಾಗಿಲ್ಲವೋ ಅದೇ ರೀತಿ ಪ್ರಜಾಕೀಯ ಎಂಬ ವೈರಸ್ ಅನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ’ ಎಂದು ಅಭಿಮಾನಿಗಳ ಟೀಕೆಗೆ ಉತ್ತರಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ಅನುಪಮಾ ಅವರು ಉಪೇಂದ್ರರ ಸಿನೆಮಾಗಳೇ ಅವರ ಬಂಡವಾಳವನ್ನು ತಿಳಿಸುತ್ತದೆ. ‘ಓಂ’ ಅಂತ ಶಾಂತಿ ಮಂತ್ರದ ಹೆಸರಿಟ್ರು, ಚಿತ್ರದಲ್ಲಿದ್ದಿದ್ದು ಬರೀ ಹಿಂಸೆ. A’ ಅಂತ ಹೆಸರಿಟ್ರು, ಪಡ್ಡೆ ಹುಡುಗರೆಲ್ಲ ಬ್ಲೂಫಿಲ್ಮ್ ಗೆ ಕಾದು ಕೊನೆಗೆ ‘ಏನಿಲ್ಲ ಏನಿಲ್ಲ’ ಅನ್ನುವಂತಾಯಿತು. ಅದೇ ರೀತಿ ‘ಪ್ರಜಾಕೀಯ’. ಅದಕ್ಕಿಂತ ದೊಡ್ಡ ಮೋಸ ಮತ್ತೊಂದಿರೋದಿಲ್ಲ ಕಾದುನೋಡಿ ಎಂದು ಕಿಚಾಯಿಸಿದರು.
ಇದರಿಂದ ಮತಷ್ಟು ಕೆರಳಿದ ಉಪ್ಪಿ ಅಭಿಮಾನಿಗಳು, ಅನುಪಮ ತರಾಟೆಗೆ ತೆಗೆದುಕೊಂಡು ಪ್ರಶ್ನೆಗಳ ಸುರಿಮಳೆಗೈದರು.
ಪಬ್-ಜಿ ಮತ್ತು ಪ್ರಜಾಕೀಯ ಎರಡೂ ಜಾಲತಾಣದಲ್ಲಿ ನಡೆಯುತ್ತಿರುವ ಜನಪ್ರಿಯ ಆಟಗಳು. ಎರಡರಿಂದಲೂ ಯುವಜನತೆಯ ಟೈಮ್ ವೇಸ್ಟ್. ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬುರುಡೆ ಬಿಡೋದನ್ನು ರಾಜಕೀಯವಾಗಿ ಕಾಂತ್ರಿ ಅಂತ ಭಾವಿಸೋದೂ ಪಬ್-ಜಿಯಲ್ಲಿ ಆಡಿದ್ದೇ ನಿಜವಾದ ಯುದ್ಧ ಅಂತ ಭಾವಿಸೋದು ಎರಡೂ ಒಂದೆ ಎಂದು ಅಭಿಮಾನಿಗಳ ವಿರುದ್ಧ ಅನುಪಮಾ ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಯಾಗಿ ಉಪ್ಪಿ ಅಭಿಮಾನಿಗಳು ನೀವು ನಟನೆ ಮಾಡಿಲ್ಲ ನಿಜ. ನೀವು ಪೋಲಿಸ್ ಅಧಿಕಾರಿ ಆಗಿದ್ದಾಗ ಜನಕ್ಕೆ ಏನು ಮಾಡಿಲ್ಲ ಅಂತ ಸ್ಪಷ್ಟವಾಗಿ ಗೊತ್ತು. ಏಕೆಂದರೆ ಜನರು ಕೆಲಸ ನಿಮ್ಮಿಂದ ಆಗೇ ಇಲ್ಲಾ. ಆದರೆ ಉಪ್ಪಿ ಅದನ್ನ ಮಾಡಿದ್ದಾರೆ. ನೀವೊಬ್ಬರು ಪೋಲಿಸ್ ಅಧಿಕಾರಿಯಾಗಿದ್ದಾಗ ನಿಮ್ಮ ನಡೆಯ ಬಗ್ಗೆ ಗೌರವ ಇತ್ತು. ಆದರೆ, ಪ್ರಜಾಕೀಯ ಅಂತ ಒಳ್ಳೆಯ ವಿಚಾರ ಇರುವ ಪಕ್ಷದ ಬಗ್ಗೆ ಮಾತಾಡ್ತಿರಾ ಅಂದ್ರೆ, ನಿಮ್ಮ ರಾಜಕೀಯ ಕೊಳಕು ಮನಸ್ಥಿತಿ ಏನೂ ಅಂತ ತೋರಿಸ್ತಿದೆ ಎನ್ನುತ್ತಾ ಹೀಗೆ ಅನೇಕ ಉಪ್ಪಿ ಅಭಿಮಾನಿಗಳು ಅನುಪಮಾ ವಿರುದ್ಧ ಸಾಲು ಸಾಲಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಉಪ್ಪಿ ಅಭಿಮಾನಿಗಳ ಈ ಟ್ವೀಟ್ ಗಳಿಗೆ ಉತ್ತರಿಸುತ್ತಾ ಅನುಪಮಾ ಅವರು, ಉಪೇಂದ್ರ ಅವರನ್ನು ನಿಜವಾದ ಹೆಂಗ್ ಪುಂಗ್ ಲೀ ಎಂದು ಕರೆದಿದ್ದಾರೆ.
ತಮ್ಮ ಟ್ವೀಟ್ ನಲ್ಲಿ, “ನಿಜವಾಗಿಯೂ #ಹೆಂಗ್_ಪುಂಗ್_ಲೀ ಅಂತ ಕರೆಯಬೇಕಾಗಿರೋದು ಚಕ್ರವರ್ತಿ ಸೂಲಿಬೆಲೆಯವರನ್ನಲ್ಲ, ಉಪೇಂದ್ರ ಅವರನ್ನು!!”
“ಚಕ್ರವರ್ತಿ ಸೂಲಿಬೆಲೆಯವರು ಏನೇ ಮಾತಾಡಿದ್ರೂ ತರ್ಕಬದ್ಧವಾಗಿ ಮಾತಾಡ್ತಾರೆ. ಉಪೇಂದ್ರ ಹೇಳುವ ಮಾತುಗಳಲ್ಲಿ ತರ್ಕವೂ ಇಲ್ಲ, ಬದ್ಧತೆಯೂ ಇಲ್ಲ! ರಿಯಲ್ ಸ್ಟಾರ್ ಅಲ್ಲ, #ರಿಯಲ್_ಹೆಂಗ್_ಪುಂಗ್_ಲೀ!”
“ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಬುರುಡೆ ಬಿಡೋದನ್ನು ರಾಜಕೀಯವಾಗಿ ಕಾಂತ್ರಿ ಅಂತ ಭಾವಿಸೋದೂ ಪಬ್-ಜಿಯಲ್ಲಿ ಆಡಿದ್ದೇ ನಿಜವಾದ ಯುದ್ಧ ಅಂತ ಭಾವಿಸೋದು ಎರಡೂ ಒಂದೆ!”
“ನಾನು ಹೇಳ್ತಾ ಇರೋದನ್ನು ಕಲ್ಲಿನಲ್ಲಿ ಕೆತ್ತಿ ಇಡಿ. ಪ್ರಜಾಕೀಯ ಪಕ್ಷವಾಗಿ ಏನಾದ್ರು ಬೆಳೆದ್ರೆ ಅದಕ್ಕಿಂತ ಕೊಳಕು ರಾಜಕೀಯ ಮಾಡುವ ಪಕ್ಷ ಮತ್ತೊಂದಿರೋದಿಲ್ಲ, ನೆನಪಿಡಿ!!” ಎಂದು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ ಅನುಪಮಾ.








