BIGGBOSS 8 – ಸಿಕ್ಕ ಅದೃಷ್ಟ ಕಾಲಲ್ಲಿ ಒದ್ದು ಶಮಂತ್ ಗೆ ವರ ಕೊಟ್ಟ ವೈಜಯಂತಿ – ಹಲವರಿಗೆ ಅನ್ಯಾಯ ಮಾಡಿದ್ದು ಸರಿನಾ..?
ಬಿಗ್ ಬಾಸ್ ಮನೆಗೆ 3ನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದ ವೈಜಯಂತಿ 3 ದಿನಕ್ಕೆ ಮನೆಯಿಂದ ಎಕ್ಸಿಟ್ ಆಗಿದ್ದಾರೆ. ನನಗೆ ಇಲ್ಲಿರೋದಕ್ಕೆ ನನಗೆ ಆಗ್ತಿಲ್ಲ ಎಂದು ಚಕ್ರವರ್ತಿ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಎಲಿಮಿನೇಷನ್ ವೇಳೆ ಶಮಂತ್ ಎಲಿಮಿನೇಟ್ ಆಗಿದ್ರೂ.. ಆದ್ರೆ ವೈಜಯಂತಿ ಆಡಿಗ ಖುದ್ದು ತಾವೇ ಮನೆಯಿಂದ ಹೊರ ಹೋಗುವುದಕ್ಕೆ ಬಯಸಿದ್ದರು. ಸುದೀಪ್ ಅವರು ಇಂತಹ ಅವಕಾಶ ಸಿಕ್ಕಿರುವುದೇ ಅಧರಷ್ಟ..
ಈ ಒಂದು ಅವಕಾಶಕ್ಕಾಗಿ ಅನೇಕರು ಕಾಯುತ್ತಿದ್ದರು. ಆದ್ರೆ ಅವರ ಅವಕಾಶ ನಿಮಗೆ ಸಿಕ್ಕಿತ್ತು. ಆದ್ರೆ ನೀವು ಈ ಇದನ್ನ ಬಿಟ್ಟುಕೊಟ್ಟು ಮೋಸ ಮಾಡಿಕೊಳ್ತಿದ್ದೀರಾ.. ಜೊತೆಗೆ ಅನೇಕರ ಅವಕಾಶಕ್ಕೂ ನೀವು ಅಡ್ಡಿ ಮಾಡಿದ್ದೀರಾ ಎಂದ್ರು. ಆದ್ರೂ ವೈಜಯಂತಿ ಮನೆಯಿಂದ ಸ್ವಿಚ್ಛೆಯಿಂದ ಆಚೆ ಹೋದ್ರು. ಈ ರೀತಿಯ ಎಲಿಮಿನೇಷನ್ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಮೊದಲು.. ಆದ್ರೆ ವೈಜಯಂತಿ ತಾವು ಅವಕಾಶ ಮಿಸ್ ಮಾಡಿಕೊಂಡು ಅನೇಕರ ಆಸೆಗೂ ಕಲ್ಲಾಗಿ ಅವರಿಗೂ ಅನ್ಯಾಯ ಮಾಡಿದ್ರು.. ಇದು ಎಷ್ಟು ಸರಿ ಅನ್ನೋದು ಬಿಗ್ ಬಾಸ್ ವೀಕ್ಷಕರ ಪ್ರಶ್ನೆಯೂ ಆಗಿದೆ.
ಇನ್ನೂ ವೈಜಯಂತಿ ಹೋಗಿದ್ದು, ಶಮಂತ್ ಗೌಡಗೆ ವರದಾನವಾಯ್ತು. ಶಮಂತ್ ಇನ್ನೂ ಒಂದು ವಾರ ಮನೆಯಲ್ಲಿ ಸೇಫ್ ಆಗುವಂತಾಯ್ತು. ಆದ್ರೂ ಕಿಚ್ಚ ಸುದೀಪ್ ಶಮಂತ್ ಗೆ ಶಾಕ್ ಕೊಟ್ಟಿದ್ರು. ಮುಂದಿನ ವಾರ ಎಲಿಮಿನೇಷನ್ ರೌಂಡ್ ಗೆ ಶಮಂತ್ ರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಆದ್ರೆ ವೈಜಯಂತಿ ಕೃಪೆಯಿಂದ ಶಮಂತ್ ಇನ್ನೂ ಒಂದು ವಾರದವರೆಗೂ ಮನೆಯಲ್ಲಿ ಸೇಫ್ ಆಗಿರಬಹುದು.