ಸಿಎಂ ಬದಲಾದ್ರೆ ವೀರಶೈವ ಲಿಂಗಾಯತರಿಗೆ ನಾಯಕತ್ವ ಸಿಗಲಿ : ಕೊಳದ ಮಠ ಶ್ರೀ
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಆಗೋದಾದ್ರೆ ವೀರಶೈವ ಲಿಂಗಾಯತರಿಗೆ ನಾಯಕತ್ವ ಸಿಗಬೇಕು, ಇಲ್ಲವಾದರೆ ನಮ್ಮ ಮಠಗಳಿಂದ ಹೋರಾಟ ನಡೆಸಲಾಗುವುದು ಎಂದು ಕೊಳದ ಮಠದ ಡಾ. ಶಾಂತವೀರ ಮಹಾಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ಸಿಎಂ ಬಿಎಸ್ ವೈ ಬದಲಾವಣೆ ವಿಚಾರ ಊಹಾಪೋಹ ಕೇಳಿ ಬರ್ತಿದೆ. ರಾಜಕೀಯ ಅನ್ನೋದು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಧೀಮಂತ ನಾಯಕ ಯಡಿಯೂರಪ್ಪನವರನ್ನ ನಾಯಕತ್ವದ ಬದಲಾವಣೆ ವಿಚಾರ ಕೇಳಿ ಬರ್ತಿದೆ. ಸಮುದಾಯವನ್ನು ಕಡೆಗೆಣಿಡುವ ಕೆಲಸ ಆಗಬಾರದು. ನಾಯಕತ್ವ ಬದಲಾವಣೆ ಮಾಡೋದೆ ಆದ್ರೆ ಬೊಮ್ಮಾಯಿ, ಯತ್ನಾಳ್, ಅರವಿಂದ್ ಬೆಲ್ಲದ್ ಅವರಿಗೆ ಅವಕಾಶ ಸಿಗಬೇಕು ಎಂದರು.
ಮುಂದುವರೆದು ನಮ್ಮ ಸಮುದಾಯ ಬಿಟ್ಟು ಬೇರೆಯವರಿಗೆ ನಾಯಕತ್ವ ಕೊಟ್ಟರೆ ಮಠಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತವೆ. ವೀರಶೈವ ಲಿಂಗಾಯತರಿಗೆ ನಾಯಕತ್ವ ಸಿಗಬೇಕು, ಇಲ್ಲವಾದರೆ ನಮ್ಮ ಮಠಗಳಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಈ ವಿಚಾರವಾಗಿ ರಾಜ್ಯದ ಮುನ್ನೂರಕ್ಕು ಹೆಚ್ಚು ಸಾಧು ಸಂತರಿಂದ ಪ್ರಧಾನಿಗಳನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.