‘ಚಪ್ಪಲಿಯಲ್ಲಿ ಹೊಡೆದಿದ್ದು ನಿಜವೇ ಆದ್ರೆ ಜಗ್ಗೇಶ್ ರಾಯರ ಮೇಲೆ ಆಣೆ ಮಾಡಲಿ’ : ವಿಜಯಲಕ್ಷ್ಮಿ
ಒoದು ಕಾಲದಲ್ಲಿ ಸ್ಯಾಮಡಲ್ ವುಡ್ ನಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ನಂತರ ಬೇರೆ ಬಾಷೆ ಸಿನಿಮಾಗಳಲ್ಲೂ ನಟಿಸಿ ಸಿನಿಮಾ ಜಗತ್ತಿನಿಂದಲೇ ಮರೆಯಾಗಿದ್ದ ವಿಜಯಲಕ್ಷ್ಮಿ ಇತ್ತೀಚೆಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಲೇ ಇದ್ದಾರೆ.. ತೀರಾ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು.. ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ್ದರು. ಹೀಗೆ ಇಂತಹ ವಿಚಾರಗಳಿಮದಲೇ ಸುದ್ದಿಯಲ್ಲಿರೋ ವಿಜಯಲಕ್ಷ್ಮಿ ನವರಸ ನಾಯಕ ಜಗ್ಗೇಶ್ ವಿರುದ್ಧ ಈಗ ಹರಿಹಾಯ್ದಿದ್ದಾರೆ.
ಮೊದಲಿಗೆ ನಟ ಸೃಜನ್ ಲೋಕೇಶ್ ಗೆ ಯಾಮಾರಿಸಿದ್ದಕ್ಕೆ ಬೀದಿಗೆ ಬಂದೆ ಎಂಬ ನೆಟ್ಟಿಗರ ಕಮೆಂಟ್ ಗಳಿಗೆ ಉತ್ತರಿಸಿದ್ದ ನಟಿ , ನಾನು ಸೃಜನ್ಗೆ ಯಾಮಾರಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ಧಾರೆ. ಇದೇ ವಿಚಾರವಾಗಿ ಮಾತನಾಡುತ್ತಾ ಜಗ್ಗೇಶ್ ರನ್ನ ಮಧ್ಯ ಎಳೆದುತಂದಿರುವ ವಿಜಯಲಕ್ಷ್ಮಿ ನನ್ನ ಜೀವನದಲ್ಲಿ ಮೊದಲ ದೊಡ್ಡ ವಿವಾದ ಮಾಡಿದ್ದು ಜಗ್ಗೇಶ್. ನಾನು ಚಪ್ಪಲಿಯಲ್ಲಿ ಹೊಡೆದೆ ಎಂದು ದೊಡ್ಡ ವಿವಾದ ಮಾಡಿದರು. ಹಲವು ಯೂನಿಯನ್ ಗಳನ್ನ ಕರೆಸಿ ನನ್ನನ್ನು ಕರೆಸಿ ಕ್ಷಮಾಪಣೆ ಕೋರುವಂತೆ ಮಾಡಿದರು. ನಾನು ಏಕೆ ಕ್ಷಮಾಪಣೆ ಕೇಳುತ್ತಿದ್ದೀನಿ ಎಂಬುದು ಸಹ ನನಗೆ ಆಗ ಗೊತ್ತಿರಲಿಲ್ಲ. ಆ ವಿವಾದ ಆದಾಗ ನನ್ನನ್ನು ಕಾಪಾಡಿದ್ದು ಪಾರ್ವತಮ್ಮ ರಾಜ್ ಕುಮಾರ್ ಅವರು. ಅವರೇ ನನಗೆ ಆ ವಿವಾದದಿಂದ ಮುಕ್ತಿ ಕೊಡಿಸಿದರು. ಈಗ ಪಾರ್ವತಮ್ಮನವರ ಜಾಗದಲ್ಲಿ ಶಿವಣ್ಣ ಇದ್ದಾರೆ ಎಂದಿದ್ದಾರೆ .
ಇನ್ನೂ ಇದೇ ವೇಳೆ ಜಗ್ಗೇಶ್ ಅವರು ಪ್ರತಿ ಟ್ವೀಟ್ ಗೆ ರಾಯರನ್ನು ನೆನಪಿಸಿಕೊಳ್ಳುತ್ತಾರೆ. ಹಾಗಿದ್ದರೆ ಈಗಲೂ ಅವರು ಆಣೆ ಮಾಡಿ ಹೇಳಲಿ ನಾನು ಚಪ್ಪಲಿಯಲ್ಲಿ ಹೊಡೆದಿದ್ದೆ ಎಂದು. ಅವರು ಹೇಳುವುದಿಲ್ಲ ಕಾರಣ ಅದೊಂದು ಸುಳ್ಳು. ಆ ಸಮಯದಲ್ಲಿ ನನಗಿದ್ದ ಜನಪ್ರಿಯತೆ ಕಡಿಮೆ ಮಾಡಲು, ನನ್ನ ಕರಿಯರ್ ಹಾಳು ಮಾಡಲು ಅವರು ಹಾಗೆ ಮಾಡಿದ್ದರು. ಆದರೆ ಅಮ್ಮ ಪಾರ್ವತಮ್ಮ ನನ್ನನ್ನು ಕಾಪಾಡಿದರು ಎಂದಿದ್ದಾರೆ.
ಯಾರೂ ಕೂಡ ಮನೆಯ ಬಳಿ ಬರಬೇಡಿ : ಶಿವಣ್ಣ ಮನವಿ
ಜುಲೈ 16ಕ್ಕೆ ರಿಲೀಸ್ ಆಗಲ್ಲ ‘KGF 2’ : ಪ್ರಶಾಂತ್ ನೀಲ್ ಹೇಳಿದ್ದೇನು..?
ಮೊಹಮ್ಮದ್ ಯೂಸೂಪ್ ಖಾನ್ ನಿಂದ ದಿಲೀಪ್ ಕುಮಾರ್ ಆಗಿ ಬದಲಾಗಿದ್ದು ಯಾಕೆ..? ನಡೆದು ಬಂದ ಹಾದಿ