ಗರ್ಲ್ ಫ್ರೆಂಡ್ ಜೊತೆ ಕಾರಿನಲ್ಲಿ ಹೋಗ್ತಿದ್ದ ಪತಿ : ನಡುರಸ್ತೆಯಲ್ಲೇ ಕಾರ್ ಮೇಲೆ ಹತ್ತಿ ಚಪ್ಪಳಿಯಲ್ಲಿ ಹೊಡೆದ ಪತ್ನಿ – VIDEO VIRAl
ಗಂಡ ಹೆಂಡತಿ ನುಡುವಿನ ಜಗಳ 4 ಗೋಡೆಗಳ ಮಧ್ಯ ಇದ್ರೆ ಚಂದ ಅಂತ ಹೇಳ್ತಾರೆ.. ಆದ್ರೆ ಇದೇ ಜಗಳ ಕೆಲವೊಮ್ಮೆ ಬೀದಿ ರಂಪಾಟಕ್ಕೂ ತಿರುಗಿರುವಂತಹ ಪ್ರಕರಣಗಳನ್ನ ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಪತ್ನಿ ತನ್ನ ಗಂಡನಿಗೆ ವಾಹನಗಳು ಜನರು ತುಂಬಿದ್ದ ನಡುರಸ್ತೆಯಲ್ಲಿ ಟ್ರಾಫಿಕ್ ನಲ್ಲೇ ಗಂಡನಿಗೆ ಚಪ್ಪಳಿಯಿಂದ ಬಾರಿಸಿರುವ ಘಟನೆ ನಡೆದಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಹೌದು.. ಮುಂಬೈನಲ್ಲಿ ಈ ಘಟನೆ ನಡೆದಿದೆ.. ತನ್ನ ಪತಿ ಆತನ ಗರ್ಲ್ ಫ್ರೆಂಡ್ ಜೊತೆಗೆ ಕಾರ್ ನಲ್ಲಿ ಹೋಗುತ್ತಿದ್ದಾಗಲೇ ಆತನನ್ನ ಹಿಂಬಾಲಿಸಿ ಟ್ರಾಫಿಕ್ ನಲ್ಲಿಯೇ ಆತನ ಕಾರನ್ನ ಅಡ್ಡ ಹಾಕಿರುವ ಪತ್ನಿ ಗಂಡ ಹಾಗೂ ಆತನ ಗರ್ಲ್ ಫ್ರೆಂಡ್ ಗೆ ಕೆಳಗಿಳಿಯುವಂತೆ ನಡು ರಸ್ತೆಯಲ್ಲೇ ಕಿರುಚಾಡಿದ್ದಾಳೆ.
ಇತ್ತ ನಡುರಸ್ತೆಯಲ್ಲೇ ನಿಲ್ಲಿಸಿದ್ದ ಕಾರನ್ನ ಪಕ್ಕಕ್ಕೆ ನಿಲ್ಲಿಸುವಂತೆ ಟ್ರಾಫಿಕ್ ಪೊಲೀಸರು ಮಹಿಳೆಗೆ ತಿಳಿಸಿದ್ಧಾರೆ. ಆದ್ರೆ ಆಕೆ ಪೊಲೀಸರ ಬಮಾತಿಗೆ ತಲೆ ಕೆಡಿಸಿಕೊಳ್ಳದೇ ಗಂಡ ಹಾಗೂ ಆತನ ಗರ್ಲ್ ಫ್ರೆಂಡ್ ವಿರುದ್ಧ ಕಿರುಚಾಡಿದ್ದಾಲೆ.. ಆದರೆ ಎಷ್ಟೊತ್ತಾದರೂ ಇಬ್ಬರೂ ಆಚೆ ಬರದಾಗ ಆಕೆ ಸೀದಾ ಕಾರಿನ ಮೇಲೆಯೇ ಹತ್ತಿದ್ದಾಳೆ. ಗ್ಲಾಸ್ ಮೇಲಿಂದಲೇ ತನ್ನ ಪತಿಯ ಪ್ರಿಯತಮೆಗೆ ಚಪ್ಪಳಿಯಿಂದ ಹೊಡೆಯಲಾರಂಭಿಸಿದ್ದಾಳೆ. ಇದಾದ ನಂತರ ಆಕೆಯ ಗಂಡ ಕಾರಿನಿಂದ ಬಂದು ಆಕೆಯೊಂದಿಗೆ ಮಾತನಾಡೋ ಪ್ರಯತ್ನ ಮಾಡಿದ್ದಾನೆ.. ಆದ್ರೆ ಆಕೆ ಆತನನ್ನೂ ಕಾಲಿನಲ್ಲಿ ಜಾಡಿಸಿ ಒದ್ದಿದ್ದಾಳೆ.
ಬಳಿಕ ಡ್ರೈವಿಂಗ್ ಸೀಟ್ ನಲ್ಲಿ ಕುಳಿತು ಪತಿಯ ಪ್ರೇಯಸಿಯೇ ಕಾರು ಡ್ರೈವ್ ಮಾಡಲು ಆರಂಭಿಸಿದ್ದಾಳೆ.. ಆಕೆಯನ್ನ ತಡೆದ ಮಹಿಳೆ ಹಲ್ಲೆ ಕಾರಿನ ಸೈಡ್ ಗ್ಲಾಸ್ ನಿಂದಲೇ ಹಲ್ಲೆ ನಡೆಸಲಾರಂಭಿಸಿದ್ದಾಳೆ.. ಈ ಘಟನೆಯಿಂದಾಗಿ ನಡುರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.. ಬಳಿಕ ಪೊಲೀಸರು ಈ ರದ್ದಾಂತ ನಡೆಸಿದ ಮಹಿಳೆಗೆ ದಂಡ ವಿಧಿಸಿದ್ದಾರೆ.. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
Fight between husband and wife in Mumbai caused traffic jam 🤔🤔 pic.twitter.com/OVCkVrLFGB
— Shikha Mishra 🇮🇳 (@shikhamishra191) July 13, 2020
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.