ಬೆಂಗಳೂರು: ನಾವು ಗಂಡಸರನ್ನ ನಂಬಲ್ಲ, ಹೆಣ್ಣು ಮಕ್ಕಳನ್ನು ಮಾತ್ರ ನಂಬುತ್ತೇವೆ. ಹೀಗಾಗಿ ಅವರಿಗೆ ಮಾತ್ರ ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಡಿಸಿಎ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಜಾರಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ನೀಡುತ್ತಿರುವ ಗೃಹ ಲಕ್ಷ್ಮೀ ಯೋಜನೆಯಿಂದಾಗಿ ಅವರು ಕುಟುಂಬ ನಡೆಸುತ್ತಿದ್ದಾರೆ. ಪುರುಷರಾಗಿದ್ದರೆ ಎಣ್ಣೆ ಹೊಡೆಯುತ್ತಿದ್ದರು. ಹೀಗಾಗಿ ನಾವು ಮಹಿಳೆಯರಿಗಾಗಿಯೇ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ತಮಿಳುನಾಡು ನೋಡಿ ಶಕ್ತಿ ಯೋಜನೆ ತಂದೆವು. 4 ಸಾವಿರ ಕೋಟಿ ಮಹಿಳೆಯರು ಈಗಾಗಲೇ ಈ ಯೋಜನೆಯಡಿ ಪ್ರಯಾಣ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಸೋಲು ಖಚಿತ. ಗೀತಾ ಶಿವರಾಜ್ ಕುಮಾರ್ ಅವರು ದಾಖಲೆಯ ಜಯ ಸಾಧಿಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ಐವರನ್ನ ನೇಮಿಸಿದ್ದೇವೆ. 50 ಸಾವಿರ ಸಂಬಳ ನೀಡುತ್ತೇವೆ. ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಯಾಗಲಿವೆ. ತಾಲೂಕು ಮಟ್ಟದಲ್ಲಿ ಸಮಿತಿ ರಚನೆಯಾಗಿದೆ. 15 ಸಾವಿರ ಸದಸ್ಯರನ್ನು ನೇಮಿಸಿದ್ದೇವೆ. ಆದರೆ, ಅವರೆಲ್ಲ ವಿಧಾನಸೌಧಕ್ಕೆ ಬರಬಹುದು. ಆದರೆ, ಕಾರ್ಡ್ ಮಿಸ್ಯೂಸ್ ಆಗಬಾರದು. ಕೆಟ್ಟ ಹೆಸರು ತಂದರೆ ವಜಾ ಮಾಡುತ್ತೇವೆ. ನೀವು ಜನರ ಸೇವೆ ಮಾಡಬೇಕು ಎಂದು ಹೇಳಿದ್ದಾರೆ.