BANGALORE ಮೆಡಿಕಲ್ ಸ್ಟೋರ್ ಬಿಟ್ಟು ಬೆಂಗಳೂರು ಬಂದ್ : ರಸ್ತೆಗಿಳಿದ್ರೆ ಲಾಠಿ ಏಟು..!
ಬೆಂಗಳೂರು : ಕೊರೊನಾಗೆ ಬ್ರೇಕ್ ಹಾಕಲು ರಾಜ್ಯದಲ್ಲಿ ವೀಕೆಂಡ್ ಕಫ್ರ್ಯೂ ಜಾರಿ ಮಾಡಲಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನರು ಅನಗತ್ಯ ಓಡಾಟ ನಡೆಸದೇ ಕಫ್ರ್ಯೂವನ್ನ ಪಾಲನೆ ಮಾಡುತ್ತಿದ್ದಾರೆ.
ಇನ್ನು ಶುಕ್ರವಾರ ರಾತ್ರಿಯಿಂದಲೇ ನಗರದ ಮುಖ್ಯರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಜನ ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.
ಅಲ್ಲಲ್ಲಿ ಜನರು ಅನಗತ್ಯವಾಗಿ ಓಡಾಡಿದ್ದು, ಪೊಲೀಸರು ಲಾಠಿ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಕೊರೊನಾ ಮಾರ್ಗಸೂಚಿ ಪ್ರಕಾರ, ಇಂದು ಬೆಳಿಗ್ಗೆ 10ರ ನಂತರ ನಗರದ ಔಷಧ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಮಳಿಗೆಗಳು ಬಂದ್ ಆಗಿವೆ.
ಶನಿವಾರ ಹಾಗೂ ಭಾನುವಾರ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ದಿನಸಿ ಹಾಗೂ ಹಾಲಿನ ಅಂಗಡಿ ತೆರೆಯಲು ಅವಕಾಶವಿದೆ.