ಬಂಗಾಳದಲ್ಲಿ ಬಿಜೆಪಿ ಸೋಲಿಗೆ ‘ಜೈ ಶ್ರೀರಾಮ್’ ಬಳಕೆ ಕಾರಣ : ಕಪಿಲ್ ಸಿಬಲ್ kapil sibal
ನವದೆಹಲಿ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪ್ರಚಂಡ ಗೆಲುವು ಗೆಲುವು ಸಾಧಿಸಿದೆ.
ಆದ್ರೆ ದೀದಿ ಕೋಟೆಯನ್ನ ಛಿದ್ರಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದ ಬಿಜೆಪಿ ದೀದಿ ಸುನಾಮಿಯಲ್ಲಿ ಕೊಚ್ಚಿ ಹೋಗಿದೆ.
ಇದಕ್ಕೆ ಬಿಜೆಪಿ ದುರಂಹಕಾರ, ತೋಳ್ಬಲ, ಹಣ ಬಲವೇ ಕಾರಣ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ದೀದಿ ಗೆಲುವಿನ ಬಗ್ಗೆ ಟ್ವೀಟ್ ಮಾಡಿರುವ ಅವರು, ದುರಂಹಕಾರ, ತೋಳ್ಬಲ, ಹಣಬಲ ಮತ್ತು ಶ್ರೀರಾಮ ನನ್ನು
ರಾಜಕೀಯಕ್ಕೆ ಬಳಸಿದ್ದರಿಂದ ಬಿಜೆಪಿ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು.
ವಿಭಜನೆಯ ಸಿದ್ದಾಂತ ಮತ್ತು ಚುನಾವಣಾ ಆಯೋಗ ಬಳಕೆಯಿಂದಲೂ ಸಹ ಬಿಜೆಪಿ ಸೋಲು ಅನುಭವಿಸುವಂತಾಗಿದೆ.
ಅವೆಲ್ಲವನ್ನೂ ಮೆಟ್ಟಿ ನಿಂತು ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಕಪಿಲ್ ಸಿಬಲ್ ಬರೆದುಕೊಂಡಿದ್ದಾರೆ.