ಗಂಡ – ಹೆಂಡತಿ ಜಗಳ : 20 ದಿನಗಳ ಕಂದಮ್ಮ ಬಲಿ hyderabad saaksha tv
ಹೈದರಾಬಾದ್ : ದಂಪತಿಗಳ ನಡುವಿನ ಜಗಳವು ಪುಟ್ಟ ಮಗುವಿನ ಜೀವ ತೆಗೆದುಕೊಂಡಿರುವ ಘಟನೆ ಹೈದರಾಬಾದ್ ನ ಸೈದಾಬಾದ್ ನಲ್ಲಿ ನಡೆದಿದೆ.
ಸೈದಾಬಾದ್ ನ ಪೂಸಲ ಬಸ್ತಿ ನಿವಾಸಿಗಳಾದ ಪಿ. ರಾಜೇಶ್ ಮತ್ತು ಜಾಹ್ನಿವಿ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.
ಈ ದಂಪತಿ ನಡುಗೆ ಶುರುವಾದ ಸಣ್ಣ ಜಗಳ ಮಗುವನ್ನು ಬಲಿ ಪಡೆದುಕೊಂಡಿದೆ.
ಸದ್ಯ ಮಗುವಿನ ಪೋಷಕರಾದ ರಾಜೇಶ್ ಅಲಿಯಾಸ್ ರಾಜು ಮತ್ತು ಜಾಹ್ನವಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ ಮತ್ತು ಜಾಹ್ನವಿ ದಂಪತಿಗೆ ಇತ್ತೀಚೆಗೆ ಗಂಡು ಮಗು ಜನಸಿತ್ತು. ಮಗುವಿಗೆ ಹಾಲು ಕುಡಿಸುವ ವಿಚಾರದಲ್ಲಿ ದಂಪತಿ ಮಧ್ಯೆ ಜಗಳ ಶುರುವಾಗಿದೆ.
ಈ ವೇಳೆ ಮಗುವನ್ನು ಎತ್ತಿಕೊಂಡು ಗಂಡ ಕೈಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಾ ಓಡಾಡಿದ್ದಾಳೆ.
ಸ್ವಲ್ಪ ಸಮಯದ ನಂತ್ರ ಮಗು ಪ್ರಜ್ಞೆ ತಪ್ಪಿರೋದನ್ನ ಗಮನಿಸಿರುವ ದಂಪತಿ,ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ.