ಆಸ್ತಿಗಾಗಿ ಮಹಿಳೆಯೊಬ್ಬರು ಸಹೋದರನ ಮಾತು ಕೇಳಿ ತನ್ನ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಸವದತ್ತಿ ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದಿದೆ. ಉಪ್ಪಿಟ್ಟು ತಿಂದ ನಿಂಗಪ್ಪಾ ಹಮಾನಿ (35) ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಎಕರೆ ಭೂಮಿಗಾಗಿ ಸಹೋದರನ ಮಾತು ಕೇಳಿ ಸಾವಕ್ಕ ಹಮಾನಿ (32) ತನ್ನ ಪತಿಗೆ ಉಪ್ಪಿನಲ್ಲಿ ವಿಷ ಹಾಕಿದ್ದಾಳೆ.
ಪತಿಗೆ ವಿಷ ಬೆರೆಸಿದ ನಂತರ ಅನುಮಾನ ಬರಬಾರದೆಂದು ವಿಷ ಬೆರೆಸಿದ್ದ ಉಪ್ಪಿಟ್ಟನ್ನು ಸಾವಕ್ಕ ಹಮಾನಿ ತಿಪ್ಪೆಗೆಸದಿದ್ದಾಳೆ. ಆದರೆ, ಎರಡು ಮೂಕ ಪ್ರಾಣಿಗಳಾದ ಬೆಕ್ಕು ಮತ್ತು ನಾಯಿ ಉಪ್ಪಿಟ್ಟು ಸೇವಿಸಿ ಸಾವನ್ನಪ್ಪಿವೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪತ್ನಿ ಹಾಗೂ ಅವಳ ಸೋಹದರನನ್ನು ಪೊಲೀಸರು ಬಂಧಿಸಿದ್ದಾರೆ.