ಕೃಷಿ ಕಾಯ್ದೆ ವಿರೊಧಿಸಿ ರೈತ ಹೋರಾಟ – ಒಂದು ವರ್ಷ ಪೂರ್ಣ
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನ ಹಿಂತೆಗೆದುಕೊಳ್ಳಬೇಕು ಎಂದು ರೈತ ಹೋರಾಟ ವನ್ನ ಆರಂಭಿಸಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ರೈತ ಪರ ಹೋರಾಟಗಾರರು ಈ ವಿಷಯದಲ್ಲಿ ಭಾಗಶಃ ಯಶಸ್ಸನ್ನು ಸಹ ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ರೈತರ ಮಹಾ ಪಂಚಾಯತ್ ನಡೆಯಲಿದೆ.
ಕಳೆದ ವರ್ಷ ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ ಸೆಪ್ಟಂಬರ್ 17 ರಂದು ಕೃಷಿ ಕಾಯ್ದೆಗಳನ್ನ ತಂದಿತ್ತು. ಇದನ್ನ ವಿರೋಧಿಸಿ ರೈತ ಹೋರಾಟಗಾರರು 2020 ನವೆಂಬರ್ 26 ರಿಂದ ಬೃಹತ್ ಹೋರಾಟವನ್ನ ಪ್ರಾರಂಭಿಸಿದ್ದರು.
ಕಳೆದ ನವೆಂಬರ್ 19 ರಂದು ರಾಷ್ಟ್ರವನ್ನ ಉದ್ದೇಶಿಸಿ ಮಾತನಾಡಿದ ಮೋದಿ ಮೂರು ಕೃಷಿ ಕಾಯ್ದೆಗಳನ್ನ ವಾಪಸ್ ಪಡೆದುಕೊಳ್ಳುವುದಾಗಿ ಘೋಷಸಿದ್ದರು. ರೈತರನ್ನ ಹಿತದೃಷ್ಟಿಯಲ್ಲಿ ಇರಿಸಿಕೊಂಡೆ ನಾವು ಕಾಯ್ದೆಗಳನ್ನ ಜಾರಿಗೆ ತಂದಿದ್ದೆವು. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಿದೆ ಎಂದು ಮೋದಿ ತಿಳಿಸಿದ್ದರು.