ವರದಕ್ಷಿಣೆಗಾಗಿ ಮಹಿಳೆಯ ಕೊಲೆ – ಪತಿಯ ಮನೆ ಮುಂದೆ ಅಂತ್ಯಕ್ರಿಯೆ ನಡೆಸಿ ಪ್ರತಿಭಟನೆ
ಹೊಸಕೋಟೆ, ಸೆಪ್ಟೆಂಬರ್16: ಹೊಸಕೋಟೆ ತಾಲೂಕಿನ ನಡವತ್ತಿ ಗ್ರಾಮದಲ್ಲಿ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ಆಕೆಯ ಪತಿಯ ಮನೆ ಮುಂದೆಯೇ ನಡೆಸಿರುವ ಘಟನೆ ವರದಿಯಾಗಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಮಹಿಳೆಯ ಕುಟುಂಬದವರು ಆಕೆಯ ಅಂತ್ಯಕ್ರಿಯೆಯನ್ನು ಆಕೆಯ ಪತಿಯ ಮನೆ ಮುಂದೆ ನಡೆಸಿ ಪ್ರತಿಭಟಿಸಿದ್ದಾರೆ.
ಹೊಸಕೋಟೆ ತಾಲೂಕಿನ ನಡವತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಫೆಬ್ರವರಿಯಲ್ಲಿ ಭಾವನಾ (19) ರನ್ನು ಗಜೇಂದ್ರ ಎಂಬಾತ ವಿವಾಹವಾಗಿದ್ದ. ಆದರೆ ಕಳೆದ ಭಾನುವಾರ ಹೊಸಕೋಟೆ ತಾಲೂಕಿನ ನಡವತ್ತಿ ಗ್ರಾಮದ ರೈಲ್ವೆ ಹಳಿಯ ಮೇಲೆ ಭಾವನಾ ಅವರ ಶವ ಪತ್ತೆಯಾಗಿತ್ತು.
ಭಾವನಾ ಕುಟುಂಬದವರು ಭಾವನಾರನ್ನು ವರದಕ್ಷಿಣೆಗಾಗಿ ಆಕೆಯ ಪತಿ ಗಜೇಂದ್ರ ಮತ್ತು ಆತನ ಮನೆಯವರು ಕಿರುಕುಳ ನೀಡಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಭಾವನಾ ಅವರ ಅಂತ್ಯಕ್ರಿಯೆಯನ್ನು ಪತಿ ಗಜೇಂದ್ರನ ಮನೆಯ ಮುಂದೆಯೇ ನಡೆಸಿ ಆಕೆಯ ಕುಟುಂಬದವರು ಪ್ರತಿಭಟಸಿದ್ದಾರೆ.