ಪ್ರಭಾಸ್ ಗೂ ಮುನ್ನ ‘ರಾಖಿ ಭಾಯ್’ ಮುಂದೆ ‘ಸಲಾರ್’ ಆಫರ್ ಇಟ್ಟಿದ್ರಾ ಪ್ರಶಾಂತ್ ನೀಲ್..!
ಸಲಾರ್… ಒನ್ ಆಫ್ ದ ಹೈಲೀ ಎಕ್ಸ್ ಪೆಕ್ಟೆಡ್ ಸಿನಿಮಾ. ಅದ್ಯಾವಾಗ ಬಾಹಬುಲಿ ಪ್ರಬಾಸ್ ಜೊತೆಗೆ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಸಿನಿಮಾ ಮಾಡ್ತಿರೋದಾಗಿ ಟೈಟಲ್ ಘೋಷಣೆ ಮಾಡಿದ್ರೋ ಆಗಿನಿಂದಲೂ ಸಿನಿಮಾದ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಮೊದಲ ಬಾರಿಗೆ ಪ್ರಬಾಸ್ ಕನ್ನಡಕ್ಕೆ ಡೆಬ್ಯೂಟ್ ಮಾಡ್ತಿರೋದು ಖುಷಿ ವಿಚಾರವೇ ಆದ್ರೂ ಈ ಸಿನಿಮಾದಲ್ಲಿ ಹೆಚ್ಚು ಕನ್ನಡದ ನಟರನ್ನ ಹಾಕಿಕೊಳ್ಳಬೇಕೆಂಬ ಡಿಮ್ಯಾಂಡ್ ಕೂಡ ಇದೆ. ಅಷ್ಟೇ ಅಲ್ದೇ ನಮ್ಮ ಕನ್ನಡದಲ್ಲಿ ಹಿಟ್ ಹೀರೋಗಳು ಇರೋವಾಗ ಯಾಕೆ ಬೇರೆ ಬಾಷೆ ನಟರನ್ನ ಕರೆ ತರಬೇಕೆಂಬ ಪ್ರಶ್ನೆಯೂ ಇದೆ. ಆದ್ರೂ ಭಾರತದ ಬಿಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಪ್ರಬಾಸ್ ಅಭಿನಯದ ಸಲಾರ್ ಗೆ ಹೆಚ್ಚು ಸಪೋಟರ್ಸ್ ಇದ್ದಾರೆ.
ಆದ್ರೆ ಇದೀಗ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ನೊಡಿದ್ರೆ ಸಲಾರ್ ಕಥೆಯನ್ನ ಮೊದಲಿಗೆ ಪ್ರಸಾಂತ್ ನೀಲ್ ಅವರು ನಮ್ಮ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಮಾತುಕತೆ ನಡೆಸಿದ್ರಂತೆ. ಹೌದು ಯಶ್ ಜೊತೆಗೆ ಕೆಜಿಎಫ್ ಹಾಗೂ ಸಲಾರ್ 2 ಸ್ಕ್ರಿಪ್ಟ್ ಗಳ ಬಗ್ಗೆ ಚರ್ಚಿಸಿದ್ದರಂತೆ. ಆದ್ರೆ ರಾಖಿ ಭಾಯ್ ಕೆಜಿಎಫ್ ಅನ್ನೇ ಚೂಸ್ ಮಾಡಿದ್ರಂತೆ. ಹೀಗಾಗಿಯೇ ಪ್ರಶಾಂತ್ ನೀಲ್ ಅವರು ತಮ್ಮ ಸ್ಕ್ರಿಪ್ಟ್ ನ ಪ್ರಭಾಸ್ ತಕ್ಕಂತೆ ಚೇಂಜ್ ಮಾಡಿ ಬಳಿಕ ಅವರಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಎಂದೇ ಹೇಳಲಾಗ್ತಿದೆ.
ಒಟ್ಟಾರೆ ಸಲಾರ್ ಬದಲಿಗೆ ರಾಖಿ ಭಾಯ್ ಕೆಜಿಎಫ್ ಚೂಸ್ ಮಾಡಿ ಸರಿಯಾದ ನಿರ್ಧಾರವೇ ಕೈಗೊಂಡಿದ್ದಾರೆ ಎನ್ನಬಹುದು. ಯಾಕಂದ್ರೆ ಈ ಸಿನಿಮಾ ಯಶ್ ಅವರ ಖದರ್ ಅನ್ನೇ ಬದಲಾಯಿಸಿ ಸ್ಯಾಂಡಲ್ ವುಡ್ ಕಡೆ ಇಡೀ ಭಾರತೀಯ ಸಿನಿಮಾರಂಗವೇ ತಿರುಗಿನೋಡುವoತೆ ಮಾಡಿದೆ. ಸಾಗದರದಾಚೆಗೆ ಯಶ್ ಗುಣಗಾನ ಜೋರಾಗಿದೆ. ಪರ ಭಾಷೆಗಳಲ್ಲಿ ರಾಖಿ ಭಾಯ್ ಅಬ್ಬರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಪರ ಬಾಷಾಭಿಮಾನಿಗಳು ರಾಖಿ ಭಾಯ್ ಗೆ ಜೈಕಾರ ಹಾಕುವಂತಾಗಿದೆ.