Thursday, June 8, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಂಜಾಬ್ ಯುವ ಕ್ರಿಕೆಟಿಗರಿಗೆ ಮೆಂಟರ್ ಆಗಿರುವ ಯುವರಾಜ್ ಸಿಂಗ್  ಹೇಳಿದ್ದೇನು ?

admin by admin
July 31, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಪಂಜಾಬ್ ಯುವ ಕ್ರಿಕೆಟಿಗರಿಗೆ ಮೆಂಟರ್ ಆಗಿರುವ ಯುವರಾಜ್ ಸಿಂಗ್  ಹೇಳಿದ್ದೇನು ?

ಯುವರಾಜ್ ಸಿಂಗ್ ಇಷ್ಟು ದಿನ ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿದ್ದರು. ಕೋವಿಡ್-19 ಮತ್ತು ಲಾಕ್ ಡೌನ್ ಟೈಮ್ ನಲ್ಲಿ ಸಹ ಆಟಗಾರರ ಜೊತೆ ಚಾಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ನಡುವೆ ಕೆಲವೊಂದು ವಿಚಾರಗಳಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗೂ ಗುರಿಯಾಗಿದ್ರು. ಇದೀಗ ಯುವರಾಜ್ ಸಿಂಗ್ ಮೈದಾನಕ್ಕೆ ಇಳಿದಿದ್ದಾರೆ.
ಚಂಡಿಗಢದಲ್ಲಿ ಪಂಜಾಬ್ ತಂಡದ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ. ಯುವ ಪ್ರತಿಭೆಗಳಾದ ಶುಭ್ಮನ್ ಗಿಲ್, ಅನ್ಮೊಲ್ ಪ್ರೀತ್ ಮತ್ತು ಅಭಿಷೇಕ್ ಶರ್ಮಾ ಅವರ ಜೊತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಪುನೀತ್ ಬಾಲಿ ಅವರ ಮನವಿಯಂತೆ ಪಂಜಾಬ್ ತಂಡದ 21 ದಿನಗಳ ತರಬೇತಿ ಶಿಬಿರಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾನು ಈ ಜವಾಬ್ದಾರಿಯನ್ನು ಆನಂದಿಸುತ್ತಿದ್ದೇನೆ. ನಾನು ಕ್ರಿಕೆಟ್ ಆಡುತ್ತಿರುವಾಗ ನನಗೂ ಅದ್ಭುತವಾದ ಮೆಂಟರ್‍ಗಳಿದ್ದರು. ಆಟಗಾರರಿಗೆ ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ನೀಡಿರುವ ಬಗ್ಗೆ ಯುವರಾಜ್ ಸಿಂಗ್ ಖುಷಿಪಟ್ಟಿದ್ದಾರೆ. ಯುವಿ ಕೆಲವು ದಿನಗಳ ಹಿಂದೆ ಮೊಹಾಲಿ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದರು.
ಕ್ರಿಕೆಟ್ ಮತ್ತು ಸ್ಕೇಟಿಂಗ್ ಕ್ರೀಡೆಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಇದೀಗ ನನ್ನ ಬಳಿ ಸಾಕಷ್ಟು ಸಮಯವಿದೆ. ಈ ನಡುವೆ ಗಾಲ್ಫ್ ಕೂಡ ಆಡುತ್ತಿದ್ದೇನೆ. ಗಾಲ್ಫ್ ಅಂಗಣದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಯುವರಾಜ್ ಸಿಂಗ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಆ ನಂತರ ಅವರು ಗ್ಲೋಬಲ್ ಟಿ-ಟ್ವೆಂಟಿ ಕೆನಡಾ ಟೂರ್ನಿ, ಯುಎಇನಲ್ಲಿ ಟಿ-ಟೆನ್ ಲೀಗ್‍ನಲ್ಲಿ ಆಡಿದ್ದರು. ಆದ್ರೆ ಈ ವರ್ಷ ಏನು ಪ್ಲಾನ್ ಮಾಡಿಕೊಂಡಿಲ್ಲ. ಅಂತಾರಾಷ್ಟ್ರೀಯ ಲೀಗ್ ಟೂರ್ನಿಯನ್ನು ಆಡಲು ಇಚ್ಚಿಸುತ್ತಿದ್ದೇನೆ. ಕೋವಿಡ್-19ನಿಂದ ಈ ಲೀಗ್ ಗಳು ಯಾವಾಗ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ ಎಂದು ಯುವಿ ತಿಳಿಸಿದ್ದಾರೆ.
ಇನ್ನು ಯುವ ಬ್ಯಾಟ್ಸ್ ಮೆನ್ ಶುಬ್ಮಾನ್ ಗಿಲ್ ಅವರ ಪ್ರತಿಭೆಯನ್ನು ಕೊಂಡಾಡಿದ ಯುವಿ, 20ರ ಹರೆಯದ ಗಿಲ್ ಗೆ ಉಜ್ಜಲವಾದ ಭವಿಷ್ಯವಿದೆ. ಆತ ಭಾರತ ತಂಡದಲ್ಲಿ ಸುದೀರ್ಘವಾಗಿ ಆಡುವ ಅವಕಾಶವಿದೆ. ಈ ನಡುವೆ ಮೈದಾನದಲ್ಲಿ ಗಿಲ್ ಅವರ ವರ್ತನೆಯ ಬಗ್ಗೆ ಟೀಕೆಗಳಿವೆ. ಆದ್ರೂ ಯುವರಾಜ್ ಸಿಂಗ್ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಗಿಲ್ ದೆಹಲಿ ವಿರುದ್ಧದ ರಣಜಿ ಪಂದ್ಯದ ವೇಳೆ ಅಂಪೈರ್ ಜೊತೆ ಮಾತಿನ ಸಮರ ನಡೆಸಿದ್ದರು ಎಂಬ ಆರೋಪವಿತ್ತು.

Related posts

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

WTC Final: 111 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್‌-ಹೆಡ್‌ ಜೋಡಿ!

June 8, 2023
WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

June 7, 2023

ಆ ಘಟನೆ ನಡೆದಾಗ ನಾನೂ ಮೈದಾನದಲ್ಲಿದ್ದೆ. ಗಿಲ್ ಯಾರನ್ನೂ ಕೂಡ ನಿಂದನೆ ಮಾಡಿಲ್ಲ. ಅಂಪೈರ್ ಅವರನ್ನು ಪ್ರಶ್ನೆ ಮಾಡಿದ್ದಾನೆ. ಕೆಲವೊಂದು ಬಾರಿ ಬ್ಯಾಟ್ಸ್ ಮೆನ್‍ಗಳು ಈ ರೀತಿ ಮಾಡುತ್ತಾರೆ. ಅವನು ಇನ್ನೂ ಚಿಕ್ಕವ. ರನ್ ಗಳಿಸುವ ಹಸಿವು ಇದೆ. ನಾನು ಕೂಡ ಕೆಲವೊಂದು ಬಾರಿ ಇದೇ ರೀತಿ ವರ್ತಿಸಿದ್ದೇನೆ. ಆತ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾನೆ. ಗಿಲ್ ವಿಶೇಷ ಪ್ರತಿಭೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಂತಹ ಸೌಲಭ್ಯಗಳನ್ನು ನೀಡಲು ಪಂಜಾಬ್ ಕ್ರಿಕೆಟ್ ಸಂಸ್ಥೆಯು ಯೋಜನೆ ರೂಪಿಸುತ್ತಿದೆ. ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ನೀಡಿದಾಗ ತಂಡದ ಗುಣಮಟ್ಟ ಕೂಡ ಸುಧಾರಣೆಯಾಗುತ್ತದೆ. ಹೀಗಾಗಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಪಂಜಾಬ್ ತಂಡ ರಣಜಿ ಟ್ರೋಫಿ ಗೆಲ್ಲಬಹುದು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Tags: Abhishek SharmaAnmolpreet SinghbcciChandigarhCricketgolfmohalipcaPunjabpunjab cricketPunjab Cricket AssociationPunjab cricketerspunjab ranaji teamShubman Gillsketingteam indiayuvraj singh
ShareTweetSendShare
Join us on:

Related Posts

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

WTC Final: 111 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್‌-ಹೆಡ್‌ ಜೋಡಿ!

by Honnappa Lakkammanavar
June 8, 2023
0

ಅನುಭವಿ ಬ್ಯಾಟರ್‌ ಸ್ಟೀವ್‌ ಸ್ಮಿತ್‌(95*) ಹಾಗೂ ಟ್ರಾವಿಸ್‌ ಹೆಡ್‌(146*) ಅವರ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಭಾರತ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ನ ಮೊದಲ ದಿನದಾಟದಲ್ಲಿ...

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ಮುನ್ನಡೆ

by Honnappa Lakkammanavar
June 7, 2023
0

ಟೀಂ ಇಂಡಿಯಾ ಬೌಲರ್‌ಗಳ ಆರಂಭಿಕ ಮೇಲುಗೈ ನಡುವೆಯೂ ಸ್ಟೀವ್‌ ಸ್ಮಿತ್‌(95*) ಹಾಗೂ ಟ್ರಾವಿಸ್‌ ಹೆಡ್‌(146*) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ ಪಂದ್ಯದಲ್ಲಿ...

AFG v SL: ಶ್ರೀಲಂಕಾ ಬೌಲಿಂಗ್‌ ದಾಳಿಗೆ ಆಫ್ಘಾನ್‌ ತತ್ತರ: ಅತಿಥೇಯರ ಮಡಿಲಿಗೆ ODI ಸರಣಿ

AFG v SL: ಶ್ರೀಲಂಕಾ ಬೌಲಿಂಗ್‌ ದಾಳಿಗೆ ಆಫ್ಘಾನ್‌ ತತ್ತರ: ಅತಿಥೇಯರ ಮಡಿಲಿಗೆ ODI ಸರಣಿ

by Honnappa Lakkammanavar
June 7, 2023
0

ದುಶ್ಮಂತ ಚಮೀರ(4/63) ಹಾಗೂ ವನಿಂದು ಹಸರಂಗ(3/7) ಅವರ ಆಕ್ರಮಣಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಪ್ರವಾಸಿ ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್‌ಗಳ ಭರ್ಜರಿ...

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

WTC Final: ಭಾರತದ ಬೌಲರ್‌ಗಳ ಬೆವರಿಳಿಸಿದ ಹೆಡ್‌: ಅದ್ಭುತ ಶತಕ ದಾಖಲಿಸಿ ಅಬ್ಬರ

by Honnappa Lakkammanavar
June 7, 2023
0

ಟೀಂ ಇಂಡಿಯಾದ ವೇಗದ ಬೌಲರ್‌ಗಳ ಪ್ರಾಬಲ್ಯದ ನಡುವೆಯೂ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಟ್ರಾವಿಸ್‌ ಹೆಡ್‌ ಭರ್ಜರಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಆಸರೆಯಾದರಲ್ಲದೆ, ಐಸಿಸಿ ವಿಶ್ವ ಟೆಸ್ಟ್‌...

WTC Final: ಒಡಿಶಾ ರೈಲು ದುರಂತ:  ಭಾರತ-ಆಸೀಸ್‌ ಆಟಗಾರರಿಂದ ಶ್ರದ್ಧಾಂಜಲಿ!

WTC Final: ಒಡಿಶಾ ರೈಲು ದುರಂತ: ಭಾರತ-ಆಸೀಸ್‌ ಆಟಗಾರರಿಂದ ಶ್ರದ್ಧಾಂಜಲಿ!

by Honnappa Lakkammanavar
June 7, 2023
0

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ ಪಂದ್ಯಕ್ಕೆ ಭರ್ಜರಿ ಆರಂಭ ಲಭಿಸಿದ್ದು, ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಹಲವು ವಿಶೇಷ ಸನ್ನಿವೇಶಗಳಿಗೆ ಸಾಕ್ಷಿಯಾಯಿತು....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕೊಲ್ಲಾಪುರದಲ್ಲಿ ಹಿಂಸಾರೂಪಕ್ಕೆ ತಾಳಿದ ಪ್ರತಿಭಟನೆ; ರಾಜ್ಯದಲ್ಲೂ ಅಲರ್ಟ್!

ಕೊಲ್ಲಾಪುರದಲ್ಲಿ ಹಿಂಸಾರೂಪಕ್ಕೆ ತಾಳಿದ ಪ್ರತಿಭಟನೆ; ರಾಜ್ಯದಲ್ಲೂ ಅಲರ್ಟ್!

June 8, 2023
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿದ ವ್ಯಕ್ತಿ

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆ ಕೊಲೆ ಮಾಡಿ, ಪೀಸ್ ಪೀಸ್ ಮಾಡಿದ ವ್ಯಕ್ತಿ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram