ರಂಭಾಪುರಿ ಶ್ರೀಗಳ ನಡೆಗೆ ಕಾಶಿ ಜಗದ್ಗುರುಗಳ ಬೇಸರ
ಬಳ್ಳಾರಿ : ಪಂಚ ಪೀಠಗಳ ವಿಚಾರದಲ್ಲಿ ರಂಭಾಪುರಿ ಶ್ರೀಗಳು ಸರ್ವಾಧಿಕಾರಿಗಳಾಗಿದ್ದಾರಾ..? ಒಕ್ಕೂಟ ವ್ಯವಸ್ಥೆಯನ್ನು ರಂಭಾಪುರಿ ಶ್ರೀಗಳು ಹಾಳು ಮಾಡುತ್ತಿದ್ದಾರೆಂದು ಕಾಶಿ ಜಗದ್ಗುರುಗಳು ಆರೋಪ ಮಾಡುತ್ತಿರೋದೇಕೆ..?
ಉಜ್ಜೈನಿ ಶ್ರೀ ಪೀಠಕ್ಕೆ ಹೊಸ ಸ್ವಾಮೀಜಿಗಳ ನೇಮಕ ಎಂಬ ರಂಭಾಪುರಿ ಶ್ರೀ ಗಳ ಹೇಳಿಕೆ ಪರಸ್ಪರ ಸ್ವಾಮೀಜಿಗಳು ಆರೋಪ- ಪ್ರತ್ಯಾರೋಪ ಕಾರಣವಾಗಿದೆ.
`ಹೊಸ ಸ್ವಾಮೀಜಿಗಳ ನೇಮಕ’ ರಂಭಾಪುರಿ ಶ್ರೀಗಳ ಹೇಳಿಕೆ ಕಾಶಿ ಜಗದ್ಗುರುಗಳು ಬೇಸರ ಹೊರಹಾಕಿದ್ದಾರೆ. ಪ್ರತಿಯೊಂದು ವಿಚಾರದಲ್ಲಿ ರಂಭಾಪುರಿ ಶ್ರೀ ಗಳು ಈ ರೀತಿ ಮಾಡೋದು ಸರಿಯಲ್ಲ.
ಈ ಹಿಂದೆ ನಡೆದ ಘಟನೆಗಳು ಸಹ ನಾವು ಮರೆತಿಲ್ಲಾ. ರಂಭಾಪುರಿ ಶ್ರೀ ಗಳು ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಾರೆ, ಇದು ಸರಿಯಾದದಲ್ಲ.
ಉಜ್ಜೈನಿ ಪೀಠದ ವಿಚಾರದಲ್ಲಿ ಶ್ರೀ ಗಳ ಬದಲಾವಣೆ ಎಂದು ಹೇಳಿ ಗೊಂದಲ ಮೂಡಿಸುವುದು ಸರಿಯಲ್ಲಾ ಎಂದು ಕಾಶಿ ಜಗದ್ಗುರುಗಳು ಪ್ರತಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಕಳೆದ 25 ವರ್ಷಗಳಿಂದ ರಂಭಾಪುರಿ ಜಗದ್ಗುರುಗಳ ಸರ್ವಾಧಿಕಾರಿ ಮನೋಭಾವನೆಯನ್ನು ಸಹಿಸುತ್ತಲೇ ಬಂದಿದ್ದೇವೆ. ಅವರಿಗೆ ಪ್ರತಿಯಾಗಿ ಒಂದು ಶಬ್ದವನ್ನು ಸಹ ನಾವು ಮಾತನಾಡಿಲ್ಲ.
ಒಕ್ಕೂಟದ ವ್ಯವಸ್ಥೆಯನ್ನು ಹಾಳು ಮಾಡುವಲ್ಲಿ ಅವರೇ ಮುಂಚೂಣಿಯಲ್ಲಿರುವುದು ಸೂರ್ಯಪ್ರಕಾಶದಷ್ಟು ಸತ್ಯ.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಬಿ.ಸಿ.ಪಾಟೀಲ್ ಮನವಿ
ಪಂಚಪೀಠಗಳ ಪರಮಾಚಾರ್ಯರು ತಮ್ಮ ಉತ್ತರಾಧಿಕಾರಿಯನ್ನು ಚುನಾಯಿಸುವಲ್ಲಿ ಸ್ವತಂತ್ರರು ಎಂಬ ನಿಯಮವು ಮಾನವ ಧರ್ಮ ಸಂಸ್ಥೆಯ ನಡಾವಳಿ ಪುಸ್ತಕದಲ್ಲಿ ಬರೆದಿದೆ.
ಇದು ತಿಳಿದಿದ್ದರೂ ಸಹ ವಿನಾಕಾರಣ ಶ್ರೀಶೈಲ ಪೀಠದ ಪಟ್ಟಾಭಿಷೇಕದ ಸಂದರ್ಭದಲ್ಲಿ ವಿಧಿವತ್ತಾಗಿ ಆಮಂತ್ರಣವಿದ್ದರೂ ಸಹ ಆ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.
ಸಾಲದೆಂಬಂತೆ ನ್ಯಾಯಾಲಯದ ಮೂಲಕ ಅದಕ್ಕೆ ತಡೆಯಾಜ್ಞೆ ತರಲು ನ್ಯಾಯಾಲಯಕ್ಕೆ ಪತ್ರವನ್ನು ಸಹ ನೀಡಿದರು. ಈ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವಲ್ಲಿ ಅವರೇ ಮೊದಲ ಹೆಜ್ಜೆಯನ್ನಿಟ್ಟರು.
ಅದೇ ಪ್ರಕಾರ ಉಜ್ಜಯಿನಿ ಮಹಾಪೀಠದ ಲಿಂಗೈಕ್ಯ ಮರುಳಸಿದ್ದ ಜಗದ್ಗುರುಗಳು ಬರೆದಿಟ್ಟ ಮೃತ್ಯುಪತ್ರದ ಬಗ್ಗೆಯೂ ವಿನಾಕಾರಣ ವಿವಾದವನ್ನು ಸೃಷ್ಟಿಸಿ ವಿಘಟನೆಯ ಎರಡನೇ ಹೆಜ್ಜೆಯಿಟ್ಟು ಮುಂದೆ ಸಾಗಿದರು.
ಎಲ್ಲ ರೀತಿಯ ವಿಘ್ನವನ್ನು ಮಾಡಿ ಕೊನೆಗೆ ಪಟ್ಟಾಭಿಷೇಕವು ನಿರ್ವಿಘ್ನವಾಗಿ ನಡೆಯುವುದೆಂದು ತಿಳಿದು ಬಂದಾಗ ಪಟ್ಟಾಭಿಷೇಕದಲ್ಲಿ ಪಾಲ್ಗೊಂಡು, ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತಮ್ಮ ಅಮೃತ ಹಸ್ತಗಳಿಂದ ಕಿರೀಟವನ್ನು ಧರಿಸಿ ನೂತನ ನಾಮಕರಣ ಮಾಡಿದ್ದರು.
ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ
ಆಗ ಇಡೀ ಸಮಾಜ ರಂಭಾಪುರಿ ಜಗದ್ಗುರುಗಳ ಈ ನಡೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿತ್ತು.
ಈ ಘಟನೆ ನಡೆದು 9 ವರ್ಷಗಳ ನಂತರ ಈಗ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಲೋಚನ ಶಿವಾಚಾರ್ಯರು ಉಜ್ಜಯಿನಿ ಪೀಠದ ಜಗದ್ಗುರುಗಳೆಂಬ ಕೇದಾರ ಜಗದ್ಗುರುಗಳ ಘೋಷಣೆಯಲ್ಲಿ ಪಾಲ್ಗೊಂಡು ಅವರಿಗೆ ಸಮಾನವಾದ ಆಸನವನ್ನು ನೀಡುವ ಮೂಲಕ ತಮ್ಮ ದ್ವಂದ್ವ ನಿಲುವನ್ನು ಎತ್ತಿಹಿಡಿದಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ವಿಘಟನಕಾರಿ ಹೆಜ್ಜೆಯಲ್ಲವೇ..?
ಶ್ರೀ ಕೇದಾರ ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಶ್ರೀ ಜಗದ್ಗುರು ಪಂಚಾಚಾರ್ಯ ಮಾನವಧರ್ಮ ಸಂಸ್ಥೆಯ ಅಧ್ಯಕ್ಷರೆಂದು ಎಲ್ಲ ಕಡೆ ಮನಬಂದಂತೆ ನಡೆಯುತ್ತಿದ್ದಾರೆ.
ಆದರೆ ಸಂಸ್ಥೆಯ ಸಂವಿಧಾನದಲ್ಲಿ ಅಧ್ಯಕ್ಷರಾದವರಿಗೆ ಇನ್ನೊಂದು ಪೀಠದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ಯಾವ ಅಧಿಕಾರವನ್ನು ಕೊಟ್ಟಿಲ್ಲ.
ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಸಂಪತ್ ರಾಜ್ ಗೆ ಆಶ್ರಯ ನೀಡಿದ್ದವ ಅಂದರ್
ಇದು ರಂಭಾಪುರಿ ಜಗದ್ಗುರುಗಳಿಗೆ ತಿಳಿದಿದ್ದರೂ ಸಹ ಕೇದಾರ ಜಗದ್ಗುರುಗಳು ಮಾಡುವ ಅನಧಿಕಾರಿ ಕಾರ್ಯಗಳಿಗೆ ಬೆನ್ನೆಲುಬಾಗಿ ಒಕ್ಕೂಟದ ವ್ಯವಸ್ಥೆಯನ್ನು ಹಾಳು ಮಾಡಲು ಅವರನ್ನೂ ಸಹ ತಮ್ಮೊಂದಿಗೆ ಕರೆದುಕೊಂಡಿರುವದು ನಮಗಷ್ಟೇ ಅಲ್ಲ ಸಮಾಜಕ್ಕೂ ಕೂಡಾ ಸಾಕಷ್ಟು ನೋವು ಉಂಟುಮಾಡಿದೆ ಎಂದು ಕಾಶಿ ಜಗದ್ಗುರುಗಳು ಬೇಸರ ಹೊರಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











