yashasvi jaiswal ಅದು 2013ನೇವರ್ಷ. ಅಪ್ಪ -ಅಮ್ಮನಿU Éಮಾತುಕೊಟ್ಟುಮನೆ ಬಿಟ್ಟಿದ್ದ ಆಹುಡುಗ. ಉತ್ತರಪ್ರದೇಶದಿಂದ ÀಮುಂಬೈU Éಬಂದಿಳಿದ ಆ ಹುಡುಗನ ವಯಸ್ಸು ಕೇವಲ 12. ಮುಂಬೈನ ರೈಲ್ವೆ ನಿಲ್ದಾಣದಲ್ಲಿ ತನ್ನ ಮೊಪದಲ ಹೆe É್ಜಇಟ್ಟಾU Àಆ ಹುಡುಗನಿಗೆ ಏನು ಮಾಡಬೇಕು ಅಂತ ಗೊತ್ತಾಗಿಲ್ಲ. ಗೊತ್ತು ಗುರಿ ಇಲ್ಲದ ಊರಿಗೆ ಬಂದಿಳಿದಿದ್ದ ಆ ಹುಡುಗನೂರಾರು ಕನಸುಗಳನ್ನುಕಟ್ಟಿಕೊಂಡಿದ್ದ. ಆದ್ರೆ ಜೇಬಿನಲಿ ್ಲಇದ್ದದ್ದು ಪುಡಿಗಾಸು ಅಷ್ಟೇ. ಹಸಿವನ್ನು ನೀಗಿಸಲು ಆತನಿಗೆ ಇದ್ದದ್ದು ಒಂದೇ ದಾರಿ ಅದು ನೀರು ಮಾತ್ರ.
ಮೊದಲೇ ರೈಲು ಪ್ರಯಾಣದಿಂದ ಸುಸ್ತಾಗಿದ ್ದಈ ಹುಡುಗ Àಆ ದಿನದ Àರಾತ್ರಿಯನ್ನು ಕಳೆದದ್ದು ಮುಂಬೈನ ರೈಲ್ವೆನಿಲ್ದಾಣದಲ್ಲಿ. ಅಪ್ಪ – ಅಮ್ಮ ಇದ್ರೂ ಅನಾಥವಾಗಿದ್ದ. ಹೆತ್ತವರ ಪ್ರೀತಿ ವಾತ್ಸಲ್ಯವನ್ನು ನೆನೆದು ಕಣ್ಣೀರು ಹಾಕಿದ್ದ. ರೈಲೆ ್ವಸ್ಟೇಷನ್ನಿಂದ ಹಿಡಿದು ಮುಂಬೈನ ಬೀದಿ ಬೀದಿಯಲ್ಲಿ ಅಲೆದಾಡಿದ. ಕೊನೆಗೂ ಆ ಹುಡುಗನಿಗೆ ಆಶ್ರಯನೀಡಿದು ್ದಮುಂಬೈನ ಆಜಾದಿ ಮೈದಾನ.
ಮುಂಬೈನ ಹೃದಯ ಭಾಗದಲ್ಲಿರುವ ಆಜಾದಿ ಮೈದಾನ ಸುಮಾರು 25 ಎಕರೆವಿಸ್ತಾರವಾಗಿದೆ. ಮೈದಾನಲ್ಲಿನೂರಾರು ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಮೊದಲ ಬಾರಿ ಆಜಾದಿ ಮೈದಾನವನ್ನು ನೋಡಿದಾಗ ಈ ಹುಡುಗನಿಗೆ ಭಯಕಾಡಿತ್ತು. ಅಷ್ಟರಲ್ಲೇ ತನ್ನ ಚಿಕ್ಕಪ್ಪನನ್ನು ಭೇಟಿಯಾದ.
ಈ ಹುಡುಗನ ಚಿಕ್ಕಪ್ಪ ಸ್ಥಳೀಯ ಮುಸ್ಲಿಂ ಯುನೈಟೆಡ್ ಕ್ಲಬ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕ್ಲಬ್ ಮಾಲೀಕನಲ್ಲಿ ಈ ಹುಡುಗನ ಕ್ರಿಕೆಟ್ ಆಸಕ್ತಿ ಮತ್ತು ಕನಸಿನ ಬಗ್ಗೆ ಮನವರಿಕೆ ಮಾಡಿದ್ದರು. ಅಲ್ಲ್ಲದೆ Éಮೈದಾನz Àಗ್ರ್ಯಾಂಡ್ಸ್ಮ್ಯಾನ್ಗಳು ವಾಸವಾಗಿದ್ದ ಟೆಂಟ್ ಹೌಸ್ನಲ್ಲಿ ಮಲಗಲು ಅವಕಾಶ ಕಲ್ಪಿಸಿದ್ರು.
ಅಲ್ಲಿಂದ ಶುರುವಾಯ್ತು ್ತಈ ಹುಡುಗನ ಕ್ರಿಕೆಟ್ ಜರ್ನಿ. ಕ್ರಿಕೆಟಿಗನಾಗಬೇಕು. ಟೀಮ್ ಇಂಡಿಯಾದ Àಜರ್ಸಿತೊಟ್ಟು ಮೈದಾನದಲಿ ್ಲ ಕಾಣಿಸಬೇಕು ಎಂಬ ಕನಸು ಕಾಣುತ್ತಿದ್ದ ಈ ಹುಡುಗನಲ್ಲಿ ಕ್ರಿಕೆಟ್ ಕಿಟ್ ಕೂಡ ಇರಲಿಲ್ಲ ಹೊಟ್ಟೆ ÉÉ್ಟತುಂಬಾ ಊಟ ಮಾಡಲು ದುಡ್ಡಿಲ್ಲದವನು ಕ್ರಿಕೆಟಿಗನಾಗುತ್ತಾನಾ ಅಂತ ಅಪಹಾಸ್ಯಮಾಡಿದವರ ಸಂಖ್ಯೆಯೂ ಕಮ್ಮಿ ಇರಲಿಲ್ಲ.ಆದ್ರೆ ್ರಹಠಕ್ಕೆ ಬಿದ್ದ ಈ ಹುಡುಗ ಡೈರಿ ಶಾಪ್ನಲ್ಲಿ ಕೆಲಸ ಮಾಡಲುಮುಂದಾದ. ಆದ್ರೆ ್ರಡೈರಿ ಅಂಗಡಿಯ ಎದುರು ಮಲಗಿದ್ದ ಆ ಹುಡುಗನನ್ನು ಡೈರಿಮಾಲೀಕ ಒದ್ದುಹೊರಹಾಕಿದ್ದ.
ನಂತರ ಹೊಟ್ಟೆಪಾಡಿಗಾಗಿ ಪಾನಿಪುರಿ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ. ಬೆಳಗ್ಗೆಯಿಂದ ಸಂಜೆಯ ತನನPಕ ಕ್ರಿಕೆಟ್ ಆಡುತ್ತಿದ್ದ ಈ ಹುಡುಗ ನೋಡನೋಡುತ್ತಲೇ ಅದ್ಭುತ ಕ್ರಿಕೆಟಿಗನಾಗಿ ಬೆಳೆದ. ತನಗಿಂತಹಿರಿಯg Àಜೊತೆ ಆಟವಾಡುತ್ತಾ ಸವಾಲು ಹಾಕಲು ಶುರುಮಾಡಿದ್ದ. ಪ್ರತಿವಾರ ನಡೆಯುತ್ತಿದ್ದ ಟೂರ್ನಿಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ. ಅಲ್ಲಿ ಸಿಗುತ್ತಿದ್ದ ನಗದು ಬಹುಮಾನವೇ ಈತನ ಹಸಿವನ್ನು ನೀಗಿಸುತ್ತಿತ್ತು.
ಹೀಗೆ ಒಂದು ದಿ£ Àಆಜಾದಿ ಮೈದಾನದಲ್ಲಿ ಆಡುತ್ತಿದ್ದ ಈ ಹುಡುಗನ ಬ್ಯಾಟಿಂಗ್ ಶೈಲಿಯನ್ನು ಸ್ಥಳೀಯ ಕೋಚ್ ಜ್ವಾಲಾ ಸಿಂಗ್ ಅವರ ಗಮನಕ್ಕೆ ಬಂತು. ಕೆಲವು ನಿಮಿಷಗಳ Àಕಾಲ ಆತ£ Àಬ್ಯಾಟಿಂಗ್ ಶೈಲಿಯನ್ನು ನೋಡುತ್ತಿದ್ದ ಜ್ವಾಲಾ ಸಿಂಗ್ ಹುಡುಗನನ್ನುತನ್ನತ್ತ ಕರೆದ್ರು.
ಮೊದಲನೋಟದಲ್ಲೇ ಆಹುಡುಗನ ಪ್ರತಿಭೆಯನ್ನುಜ್ವಾಲಾಸಿಂಗ್ ಗುರುತಿಸಿದ್ರು. ಆತನ ಕಣ್ಣಿನನಲ್ಲೇ ಕ್ರಿಕೆಟ್ ಪ್ರತಿಭೆ ಬೆಂಕಿಯಂತೆ ಪ್ರಜ್ವಲಿಸುತ್ತಿತ್ತು. ಈ ಹುಡುಗನಿಗೆ ಉಜ್ಜಲವಾದ ಕ್ರಿಕೆಟ್ ಭವಿಷ್ಯವಿದೆ ಅಂತ ಮನಸ್ಸಲ್ಲೇ ಅಂದುಕೊಂಡಿದ್ದರು ಜ್ವಾಲಾಸಿಂಗ್. ಆದ್ರೆ 12ರ ಹರೆಯದ ಆ ಬಾಲಕನ ಹಿನ್ನೆಲೆಯನ್ನು ಕೇಳಿದಾಗ ಅವರಕಣ್ಣಂಚಿನಲ್ಲಿ ನೀರುಬಂದಿತ್ತು.
ಸರಿ ಆಗಿದ್ದು ಆಗಲಿ ಅಂತ ಹೇಳಿ ಆ ಹುಡುಗನಿಗೆ ಆಶ್ರಯ ನೀಡಿದ್ರು. ಅಲ್ಲದೆ ತನ್ನ ಗರಡಿಯಲ್ಲೇ ಮಾರ್ಗದರ್ಶನ ಕೂಡ ನೀಡಿದ್ದರು. ಆದೆ ್ರಆ ಹುಡುಗ ಗಟ್ಟಿಮುಟ್ಟಾಗಿರಲಿಲ್ಲ. ಫಿಟ್ನೇಸ್ ಇರಲಿಲ್ಲ. ಫಿಟ್ ಆಂಡ್ ಫೈನ್ ಆಗಿರಲು ಮಾಡಬೇಕಿದ್ದ ಡಯಟ್ಗೆ ಆತನಲ್ಲಿ ಆರ್ಥಿಕ ಶಕ್ತಿಯೂ ಇರಲಿಲ್ಲ. ಇದನ್ನೆಲ್ಲಾ ಅರಿತುಕೊಂಡ ಜ್ವಾಲಾ ಸಿಂಗ್, ಆತನಿಗೆ ಒಂದು ಸಣ್ಣ ರೂಂ ಮಾಡಿಕೊಟ್ಟರು. ಹೊಟ್ಟೆ ತುಂಬಾ ಊಟ ಹಾಕಿದ್ರು. ಆ ಹುಡುಗನಲ್ಲಿರುವ ಕ್ರಿಕೆಟ್ ಪ್ರೀತಿ ಮತ್ತು ಬದ್ಧತೆಗೆ ಮಾರುಹೋದಜ್ವಾಲಾಸಿಂಗ್ ಹುಡುಗನ ಕ್ರಿಕೆಟ್ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡ್ರು.
ಇದು ಆ ಟೆಂಟ್ ಹೌಸ್ ಬಾಲಕನ ಕ್ರಿಕೆಟ್ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತ್ತು. ಅಲ್ಲದೆ ಮುಂಬೈನ ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಗಳಲ್ಲಿ ಈ ಎಡಗೈ ಬಾಲಕನ ಬ್ಯಾಟ್ ಸದ್ದು ಮಾಡಲು ಶುರು ಮಾಡಿತ್ತು. ಕಿರಿಯರ ಮತ್ತು ಹಿರಿಯರ ಜೊತೆ ಆಟವಾಡುತ್ತಲೇ ಬ್ಯಾಟಿಂಗ್ನಲ್ಲಿ ಪರಿಪಕ್ವತೆಯನ್ನುಪಡೆದುಕೊಂಡ. ಆನಂತರ ನಡೆದಿದ್ದು ಪವಾಡನೋ ಅಚ್ಚರಿನೋ ಅಥವಾ ಪ್ರತಿಭೆಗೆ ಸಿಕ್ಕ ಫಲವೋ ಗೊತ್ತಿಲ್ಲ. ಸಚಿನ್ ತೆಂಡುಲ್ಕರ್ ಸಲಹೆ, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ತಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾನೆ. ಇದೀಗ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲೂ ಕಾಣಿಸಿಕೊಂಡಿದ್ದಾನೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದಾನೆ. ಅಂದ ಹಾಗೇ ಈ ಟೆಂಟ್ಹೌಸ್ ಕ್ರಿಕೆಟಿಗನ ಹೆಸರು ಯಶಸ್ವಿ ಜೈಸ್ವಾಲ್.
ದೇಸಿಪಂದ್ಯಗಳು, ಐಪಿಎಲ್ನಲ್ಲಿ ಸುದ್ದಿ ಮಾಡಿರೋ ಯಶಸ್ವಿ ಜೈಸ್ವಾಲ್ ತನ್ನ ಹೆಸರಿನ ಹಾಗೇ ಬದುಕಿನಲ್ಲಿ ಯಶಸ್ವಿಯಾಗಿದ್ದಾನೆ. ಯಾವುದೇ ಒತ್ತಡ, ಅಂಜಿಕೆ, ಭಯವೇ ಇÀಲ್ಲದೆ ಬ್ಯಾಟ್ ಬೀಸುತ್ತಾನೆ. ಯಾಕಂದ್ರೆ ತನ್ನ ಚಿಕ ್ಕವಯಸ್ಸಿನಲ್ಲೇ ಇವೆಲ್ಲಾವನ್ನು ದಾಟಿ ಬಂದಿದ್ದಾನೆ. ಮುಂಬೈನಲ್ಲಿಕಳೆದಆರಂಭದದಿನಗಳಲ್ಲಿ ಅದೆಷ್ಟೋ ರಾತ್ರಿ ಯಶಸ್ವಿ Àನಿದ್ದೆ ಮಾಡುತ್ತಿರಲಿಲ್ಲ. ತನ್ನ ಬಡತನ ಬಗ್ಗೆ ಸಹ ಆಟಗಾರರು ಚುಚ್ಚು ಮಾತುಗಳನ್ನಾಡಿ ಲೇವಡಿ ಮಾಡುತ್ತಿದ್ದರು.
ಕೆಲವೊಂದು ಸಲ ಹೊಟ್ಟೆಹಸಿವನ್ನು ನೀಗಿಸಲು ರೊಟ್ಟಿ ಮಾಡ್ಕೊಂಡು ನೀರು ಕೂಡ ಕುಡಿಯುತ್ತಿದ್ದ. ರಾತ್ರಿ ವೇಳೆ ಶೌಚಾಲಯಕ್ಕೂ ಹೋಗಲು ಆಗದಂತº Àಪರಿಸ್ಥಿತಿಯಲ್ಲಿ ವಾಸಮಾಡಿಕೊಂಡಿದ್ದ ಯಶಸ್ವಿ,
ಮಳೆ, ಚಳಿ, ಬಿಸಿಲು ಹೀU Éಆತನ ದೇಹ ಎಲ್ಲದಕೂ ್ಕಒಗ್ಗಿಕೊಂಡಿತ್ತು. ಕ್ರಿಕೆಟ್ ಆಟವಾಡಿ ಸುಸ್ತಾಗಿ ರೂಮ್ಗೆ ಬಂದಾಗ ಆರೈಕೆ ಮಾಡೋರು ಇರಲಿಲ್ಲ. ್ರಸೊಳ್ಳೆಗಳ ಕಾಟ. ನೋವು, ಗಾಯ, ಅನಾರೋಗ್ಯ ಹೀಗೆಎಲ್ಲವನ್ನು ಸಹಿಸಿಕೊಂಡು ಕ್ರಿಕೆಟ್ಕ್ಕಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡಿದ್ದ.
.ಇದು ಯಶಸ್ವಿ ಜೈಸ್ವಾಲ್ ಅನ್ನೋ ಯುವ ಕ್ರಿಕೆಟಿಗನ ಕ್ರಿಕೆಟ್ ಬದುಕಿನ ನೈಜ ಚಿತ್ರಣ. ಅಲೆಮಾರಿಯಾಗಿ ಮುಂಬೈಗೆ ಬಂದಿದ್ದ ಯಶಸ್ವಿ ಜೈಸ್ವಾಲ್ ಮೂಲ ಊರು ಉತ್ತರಪ್ರದೇಶ. ಅಪ್ಪ ್ಪಸಣ್ಣ ದಿನಸಿ ಅಂಗಡಿ ವ್ಯಾಪಾರಿ. ಮಗನ ಕ್ರಿಕೆಟ್À ಪ್ರೀತಿಗೆ ಮನೆ ಬಿಟು ್ಟ ಮುಂಬೈಗೆ ಹೋಗುತ್ತೇನೆ ಅಂದಾಗ ಅಡ್ಡಿಪಡಿಸಲಿಲ್ಲ. ಆದ್ರೆ ತನ್ನ ಮಗ ಮುಂಬೈನಲ್ಲಿ ಇಷ್ಟೆಲ್ಲಾ ಕಷ್ಟಪಟ್ಟಿದ್ದಾನೆ ಅಂತ ಗೊತ್ತೆ ಇರಲಿಲ್ಲ. ಹೊಟ್ಟೆಹಸಿದುಕೊಂಡು, ಟೆಂಟ್ನಲ್ಲಿ ್ಲಮಲಗಿಕೊಂಡು ಕ್ರಿಕೆಟ್ ಅಭ್ಯಾಸ ನಡೆಸಿರುವ ವಿಚಾರವನ್ನು ಮನೆಯಲ್ಲಿ ಯಶಸ್ವಿ ಹೇಳಲೇ ಇರಲಿಲ್ಲ. ತನ್ನ ಸಾಧನೆಗೆ ಅಪ್ಪ ಅಮ್ಮನಿಗೆ ತೊಂದರೆಯಾಗಬಾರದು. ತಾನುಕ್ರಿಕೆಟಿಗನದ ನಂತರ ಎಲ್ಲವನ್ನು ಹೇಳಬೇಕು ಅಂತ ಅಂದುಕೊಂಡಿದ್ದ ಸ್ವಾಭಿಮಾನಿ ಯಶಸಿ ್ವಜೈಸ್ವಾಲ್. ಅದೇರೀತಿ ತಾನು ಕಷ್ಟದಲ್ಲಿದ್ದೇನೆ ಅಂತ ಯಾg Àಬಳಿಯೂ ಅಂಗಲಾಚುತ್ತಿರಲಿಲ್ಲ ಲ್ಲ. ಕ್ರಿಕೆಟ್ ಬದುಕಿನ ಯಶಸ್ವಿನಲ್ಲಿ ತನ್ನತನವನ್ನು ಉಳಿಸಿಕೊಂಡಿರೋ Àಯಶಸ್ವಿ ಜೈಸ್ವಾಲ್ ಯುವ ಕ್ರಿಕೆಟಿಗರಿಗೆ ಮಾದರಿ ಹಾಗೂ ಸ್ಪೂರ್ತಿಯಚಿಲುಮೆ.