ಚಾಮರಾಜನಗರ : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ A2 ಆರೋಪಿಯಾಗಿರುವ ರಾಗಿಣಿ ಬಿಜೆಪಿ ಸದಸ್ಯೆ. ಬಿಜೆಪಿ ನಾಯಕರೊಂದಿಗೆ ಸಂಪರ್ಕವಿದೆ ಎಂಬ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ ಈ ವಿಚಾರವಾಗಿ ಸಚಿವ ನಾರಾಯಣ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿರುವ ಅವರು ಚಿತ್ರರಂಗಕ್ಕೂ ನನಗೂ ಅಷ್ಟಾಗಿ ಸಂಪರ್ಕವಿಲ್ಲ. ಚಿತ್ರ ನಟಿ ರಾಗಿಣಿಯನ್ನು ಪ್ರಚಾರಕ್ಕೂ ನಾವೂ ಕರೆಸಿರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರು ಪ್ರಚಾರಕ್ಕೆ ಕರೆಸಿದ್ದರು. ರಾಗಿಣಿ ಈ ರೀತಿ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಸಚಿವರು ಶಿವಪ್ರಕಾಶ್ ರಾಗಿಣಿ ಜೊತೆ ಮೂರು ವರ್ಷಗಳ ಕೆಲಸ ಮಾಡಿದ್ದಾರೆ.. ಅವರ ಹೆಸರು ಸಹ ಕೇಳಿ ಬರುತ್ತಿದೆ. ಇದರ ಬಗ್ಗೆಯೂ ಸಹ ನನಗೆ ಗೊತ್ತಿಲ್ಲ. ನನ್ನ ಚುನಾವಣಾ ಪ್ರಚಾರಕ್ಕೆ ಅವರನ್ನ ಕರೆಸಿರಲಿಲ್ಲ. ಪ್ರಚಾರಕ್ಕೆ ಬಂದ್ರೆ ನಾವೇನೂ ಮಾಡೊಕೆ ಆಗುತ್ತೆ. ರಾಗಿಣಿ ಪರವಾಗಿ ನಮ್ಮ ಪಕ್ಷದಲ್ಲಿ ಯಾರು ಇಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.