ಬೆಂಗಳೂರು: ಇತ್ತೀಚೆಗೆ ಕೆಲಸ ಕೊಡಿಸುವುದಾಗಿ ಮೋಸ ಮಾಡುತ್ತಿರುವ ಘಟನೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಆದರೂ ಜನರ ಮತ್ತೆ ಮತ್ತೆ ಯಾಮಾರುತ್ತಿರುವ ಉದಾಹರಣೆಗಳು ಜರಗುತ್ತಲೇ ಇವೆ.
ಇಲ್ಲಿ ಸೇನೆ ಸೇರಿವುದಾಗಿ ಹೇಳಿ ಬರೋಬ್ಬರಿ 1 ಕೋಟಿ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಹಾಗೂ ಮಿಲಿಟರಿ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ನಕಲಿ ಸೇನಾ ನೇಮಕಾತಿ ಹಗರಣ (Scam) ಬಯಲಿಗೆ ಎಳೆಯಲಾಗಿದೆ.
ಸೇನೆಗೆ ಸೇರಿಸುವ ನೆಪದಲ್ಲಿ ಬರೋಬ್ಬರಿ 150 ಯುವಕರಿಗೆ ವಂಚಿಸಲಾಗಿದೆ. ಚಿತ್ರದುರ್ಗದಲ್ಲಿ ವಂಚಕ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆಯ ಶಿವರಾಜ್ ವಟಗಲ್ (40 ವರ್ಷ) ಹಾಗೂ ಅವರ ಹೆಂಡತಿ ಭೀಮವ್ವ ಕೂಡ ಕೃತ್ಯಕ್ಕೆ ಸಾಥ್ ನೀಡಿದ್ದಾರೆ ಎಂಬ ಆರೋಪ ಕೂಡ ಇದ್ದು, ಇಬ್ಬರನ್ನೂ ಬಂಧಿಸಿ ದಾಖಲೆ ವಶಕ್ಕೆ ಪಡೆಯಲಾಗಿದೆ.
ಯುವಕರಿಗೆ ನೇಮಕಾತಿ ನೆಪದಲ್ಲಿ 1 ಕೋಟಿ ರೂ. ವಂಚಿಸಿರುವುದು ಬಯಲಿಗೆ ಬಂದಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಕರ್ನಾಟಕದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಉದ್ಯೋಗವನ್ನು ಒದಗಿಸುವುದಾಗಿ ಮೋಸ ಮಾಡಲಾಗಿದೆ.