ಐಟಿ ರೈಡ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸೋನು ಹೇಳಿದ್ದೇನು..?
ಕೊರೊನಾ ಹಾವಳಿಯ ನಡುವೆ ಲಾಕ್ ಡೌಕ್ ಡೌನ್ ಸಮಯದಿಂದ ಹಿಡಿದು ಇಲ್ಲಿಯವರೆಗೂ ಬಾಲಿವುಡ್ ನಟ ಸೋನು ಸೂದ್ ತಮ್ಮ ಕೈಲಾದ ಸಹಾಯಗಳನ್ನ ಮಾಡುತ್ತಲೇ ಬಂದಿದ್ದಾರೆ. ಈ ಮೂಲಕ ಬಡವರ ಪಾಲಿನ ರಿಯಲ್ ಹೀರೋ ಆಗಿದ್ದಾರೆ. ರೀಲ್ ನಲ್ಲಿ ವಿಲ್ಲನ್ ಆದ್ರು ರಿಯಲ್ ಲೈಫ್ ನ ಹೀರೋ ಸೋನು ಸೂದ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಅಂತೆಯೇ ಕೆಲವರ ಕುದ್ರುಷ್ಠಿಯು ಅವರ ಮೇಲಿದೆ. ಇತ್ತೀಚೆಗೆ ಸೋನು ಸೂದ್ ಅವರು 20 ಕೋಟಿ ರೂ.ಗೂ ಅಧಿಕ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪ ಮಾಡಿತ್ತು. ಹೌದು ಐಟಿ ಇಲಾಖೆಯ ಅಧಿಕಾರಿಗಳು ಸತತ 3 ದಿನಗಳ ಕಾಲ ಸೂದ್ ಅವರ ಮುಂಬೈ ನಿವಾಸಕ್ಕೆ ಶೋಧಕ್ಕಾಗಿ ಭೇಟಿ ನೀಡಿದ ಬಳಿಕ ಸೋನು ವಿರುದ್ಧ ಐಟಿ ಅಧಿಕಾರಿಗಳು ಈ ಹೇಳಿಕೆ ನೀಡಿದ್ದರು.
ಅಲ್ಲದೇ ಸೋನು ಸೂದ್ ಅವರ ನಾನ್ ಪ್ರಾಫಿಟ್ ಸಂಸ್ಥೆ, ಸೂದ್ ಚ್ಯಾರಿಟಿ ಫೌಂಡೇಶನ್, ವಿದೇಶಿ ಕೊಡುಗೆ ಕಾಯ್ದೆಯ ಉಲ್ಲಂಘನೆ ಮಾಡಿ, ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್ ಮೂಲಕ ವಿದೇಶಿ ಕೊಡುಗೆದಾರರಿಂದ ಸುಮಾರು 2.1 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ ಎಂದೂ ಕೂಡ ಐಟಿ ಇಲಾಖೆ ಆರೋಪಿಸಿತ್ತು. ಇಷ್ಟೆಲ್ಲ ಆದ್ರೂ ಸೋನು ಅಭಿಮಾನಿಗಳು ಸೋನು ಪರ ಇದ್ದಾರೆ. ಆದ್ರೆ ಸೋನು ಸೂದ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಐಟಿ ದಾಳಿ ನಂತರ ಮೌನ ಮುರಿದಿರುವ ಸೋನು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವೆಬ್ ಸೀರೀಸ್ ರೂಪದಲ್ಲಿ ಬರಲಿದೆ ಸಲ್ಮಾನ್ ಖಾನ್ ಸಿನಿ ಜರ್ನಿ….!
ಸೋನು ಸೂದ್ ಅವರು ಹೇಳಿದ್ದೇನು..?
ಟ್ವೀಟ್ ಮಾಡಿರುವ ಸೋನು ಕಠಿಣ ಮಾರ್ಗದಲ್ಲೂ ಪ್ರಯಾಣ ಸುಲಭವೆನಿಸುತ್ತಿದೆ, ಇದು ಪ್ರತಿ ಹಿಂದೂಸ್ತಾನಿಯ ಶುಭ ಹಾರೈಕೆಗಳ ಪ್ರಭಾವ ಎನಿಸುತ್ತದೆ. ನೀವು ಪ್ರತಿ ಬಾರಿ ನಿಮ್ಮ ಕಡೆಯ ಕಥೆ ಹೇಳಬೇಕಿಲ್ಲ, ಸಮಯ ಹೇಳುತ್ತದೆ ಎಂದು ತಾವು ಸದ್ಯಕ್ಕೆ ಐಟಿ ಆರೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸೋನು ಸೂದ್ರ ಮುಂಬೈ, ಕಾನ್ಪುರ, ಜೈಪುರ, ಲಕ್ನೋ, ದೆಹಲಿ ಮತ್ತು ಗುರುಗ್ರಾಮದಲ್ಲಿರುವ ಆಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ನಡೆಸಿತ್ತು. ಈ ಕುರಿತಂತೆ ಸೋನು ಸೂದ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ನಿಮ್ಮ ಕಥೆಯನ್ನು ನೀವು ಯಾವಾಗಲೂ ಹೇಳಬೇಕಾಗಿಲ್ಲ. ಅದಕ್ಕೆ ಸಮಯ ಬರುತ್ತದೆ. ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಶನ್ನಲ್ಲಿರು ಪ್ರತಿ ಒಂದು ರೂಪಾಯಿಯನ್ನು ಅಮೂಲ್ಯವಾದಂತಹ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಿಸಲು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅನೇಕರು ಸೋನು ಸೂದ್ ಅವರ ಪರ ಬ್ಯಾಟ್ ಬೀಸಿದ್ದಾರೆ.