ಅಕ್ಷರ ಸಂತನಿಗೆ ಪದ್ಮಶ್ರೀ, ಪೇಜಾವರಾ ಶ್ರೀಗೆ ಪದ್ಮವಿಭೂಷಣ.
ಅಕ್ಷರ ಸಂತ, ಬರಿಗಾಲ ಫಕೀರ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಮತ್ತು ನಾಡು ಕಂಡ ಶ್ರೇಷ್ಠ ಸಂತ ಪೇಜಾವರದ ವೀಶ್ವೇಶತೀರ್ಥ ಶ್ರೀಗಳಿಗೆ ಪದ್ಮವಿಭೂಷಣ(ಮರಣೋತ್ತರ) ಪ್ರಶಸ್ತಿ ಘೋಷಿಸಿರುವುದು ನಿಮಗೆ ಗೊತ್ತಿದೆ. 2020 ರ ಗಣರಾಜ್ಯೋತ್ಸವದಂದು ಇವರಿಬ್ಬರಿಗೂ ಪ್ರಶಸ್ತಿಯನ್ನ ಘೋಷಿಸಲಾಗಿತ್ತು..
ಆದರೆ ಕರೋನಾ ಕಾರಣದಿಂದಾಗಿ ಸನ್ಮಾನ ಸಮಾರಂಭವನ್ನ ಏರ್ಪಡಿಸಲು ಸಾಧ್ಯವಾಗಿರಲಿಲ್ಲ.. ಈಗ ಮತ್ತೆ ನವೆಂಬರ್ ಎಂಟರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸಮಾರಂಭವನ್ನ ಏರ್ಪಡಸಿದ್ದು. ರಾಷ್ಟ್ರಪತಿ ರಾಮನಾಥ್ ಕೋವಿಂದ್ರಿಂದ ಪ್ರಶಸ್ತಿ ಸ್ವೀಕರಿಸಲು ನವದೆಹಲಿಗೆ ಬರಬೇಕೆಂದು ಕೇಂದ್ರ ಸರ್ಕಾರದಿಂದ ಅಧಿಕೃತ ಆಹ್ವಾನ ಬಂದಿದೆ.
ಹರೇಕಳ ಹಾಜಬ್ಬರು ಕಳೆದ 21 ವರ್ಷಗಳಿಂದ ತನ್ನೂರು ಹರೇಕಳದ ನ್ಯೂ ಪಡ್ಪು ಗ್ರಾಮದಲ್ಲಿ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣನ್ನು ಮಾರಿ, ಶಾಲೆಯ ಖರ್ಚುನ್ನು ನೋಡಿಕೊಳ್ಳುತ್ತಿದ್ದಾರೆ.ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.
ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹರಿಪಾದ ಸೇರಿ ಎರಡು ವರ್ಷಗಳು ಸನಿಹವಾಗುತ್ತಿದೆ.. 88 ವರ್ಷಗಳ ಕಾಲ ಬದುಕಿದ ಪೇಜಾವರ ಶ್ರೀಗಳು 2019ರ ಡಿಸೆಂಬರ್ 29ರಂದು ವಿಧಿವಶರಾಗಿದ್ದರು. ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರವಾಗಬೇಕೆಂದು ಶ್ರೀಗಳು ಕನಸನ್ನು ಹೊಂದಿದ್ದರು. ದೇಶದಲ್ಲಿ ಸಮಾನತೆ, ಜಾತಿ ಪದ್ಧತಿ ಹೋಗಲಾಡಿಸುವಿಕೆಗಾಗಿ ಅವಿರತ ಶ್ರಮಪಟ್ಟಿದ್ದರು. ಹಿಂದೂ ಧರ್ಮದ ಶ್ರೇಷ್ಠ ಸಂತನಾಗಿ ಗುರುತಿಸಿಕೊಂಡಿದ್ದರು. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳ ಪರವಾಗಿ ಪೇಜಾವರದ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಿ ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ.