ಬೆಳಗಾವಿ ನಗರದ ಹೊರಹೊಲಯದಲ್ಲಿ ಉದ್ದೇಶಿತ ಹಲಗ – ಮಚ್ಚೆ ಬೈಪಾಸ್ ರಸ್ತೆ ನಿರ್ಮಾಣವನ್ನ ವಿರೋಧಿಸಿ ರೈತರು ಮಾಡುತ್ತಿರುವ ಪ್ರತಿಭಟನೆ ತಾರಕಕ್ಕೆರಿದೆ. ಪ್ರತಿಭಟನೆಯಲ್ಲಿ ಪೊಲೀಸರು ಮತ್ತು ರೈತರ ನಡುವೆ ತಿಕ್ಕಾಟ, ವಾಗ್ವಾದ ನಡೆದಿದ್ದು ಈ ಸಮಯದಲ್ಲಿ ರೈತನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಬ್ಬ ರೈತ ಮರವೇರಿ ಆತ್ಮ ಹತ್ಯೆಗೆ ಯತ್ನಿಸಿದರೆ ಇನ್ನೊಬ್ಬ ರೈತ ಕುಡುಗೋಲಿನಿಂದ ಕತ್ತು ಕುಯ್ದುಕೊಳ್ಳುವುದಾಗಿ ಪೊಲೀಸರು ಮತ್ತು ಅಧಿಕಾರಿಗಳನ್ನ ಬೆದರಿಸಿದ್ದಾನೆ. ಆತನ ಕೈಯಿಂದ ಕುಡುಗೋಲು ಕಸಿದುಕೊಳ್ಳಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಹಲಗಾ – ಮಚ್ಚೆ ಬೈಪಾಸ್ ರಸ್ತೆಗಾಗಿ ಫಲವತ್ತದ ಕೃಷಿ ಭೂ ಮಿಯನ್ನ ವಶಕ್ಕೆ ಪಡೆಲಾಗುತ್ತಿದೆ ಎಂದು ರೈತರು ವಿರೋಧಿಸಿದ್ದಾರೆ. ಕೃಷಿ ಭೂಮಿಯ ಮೆಲೆ ರಸ್ತೆ ಮಾಡುವ ಯೋಜನೆಯನ್ನ ಕೈ ಬಿಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತರು ಸೇರಿದಂತೆ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಣ್ಣೀರಿಡುತ್ತಲೇ ರೈತ ಮಹಿಳೆಯರು ಪೊಲೀಸರಿಗೆ ಹಿಡಿಶಾಪ ಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೂರಾರು ಪೊಲೀಸರ ಭದ್ರತೆ ಪಡೆದುಕೊಂಡು ಕಾಮಗಾರಿ ಆರಂಭಿಸಿದ್ದಾರೆ ಎನ್ನಲಾಗಿದೆ.