ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಡಿ ಬಾಸ್ ದರ್ಶನ್ : 24 ವರ್ಷಗಳ ಬಾಸಿಸಂ

Mahesh M Dhandu by Mahesh M Dhandu
August 11, 2021
in Cinema, Newsbeat, ಮನರಂಜನೆ
DBoss Bossism
Share on FacebookShare on TwitterShare on WhatsappShare on Telegram

ಡಿ ಬಾಸ್ ದರ್ಶನ್ : 24 ವರ್ಷಗಳ ಬಾಸಿಸಂ

ದರ್ಶನ್ ತೂಗುದೀಪ.. ಕನ್ನಡ ಚಿತ್ರರಂಗದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಪ್ಪ ದೊಡ್ಡ ನಟನಾಗಿದ್ರೂ ಮಗ ದರ್ಶನ್ ಅಷ್ಟೊಂದು ಸುಲಭವಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಲಿಲ್ಲ. ತೂಗುದೀಪ ಶ್ರೀನಿವಾಸ್ ಅವರ ಮಗನಾಗಿದ್ರೂ ತುಂಬಾನೇ ಕಷ್ಟಪಟ್ಟಿದ್ದರು. ತನ್ನ ಸ್ವ ಪ್ರತಿಭೆ, ಸಾಮಥ್ರ್ಯದಿಂದಲೇ ಕನ್ನಡ ಚಿತ್ರದ ರಂಗದ ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆಯುತ್ತಿರುವ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 24 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಡಿ ಬಾಸ್: 24 ವರ್ಷಗಳ ಬಾಸಿಸಂ ಎಂಬ ಹೆಸರಿನಲ್ಲಿ ಸೋಶಿಯಲ್ ಮೀಡಿಯಾಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಆಲ್ಲದೆ ಕಾಮನ್ ಡಿಪಿ ಹಾಕಿ ಸಂಭ್ರಮಿಸುತ್ತಿದ್ದಾರೆ.

Related posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

July 1, 2026
ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

July 1, 2026

ತನ್ನ ಅಭಿಮಾನಿ ಬಳಗ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರಿಗೆ ಸಹಾಯ ಮಾಡಿರುವ ದರ್ಶನ್, ದಾನದಲ್ಲಿ ಕರ್ಣ.. ಹೃದಯವಂತಿಕೆಯಲ್ಲಿ ಧರ್ಮರಾಯ.. ಛಲದಲ್ಲಿ ದುಯೋಧನ.. ಹಾಗೇ ಶ್ರೀ ಕೃಷ್ಣನಂತಹ ಬುದ್ಧಿಯೂ ಇದೆ. ಅರ್ಜುನನಂತಹ ಪ್ರತಿಭೆ-ಸಾಮಥ್ರ್ಯವೂ ಇದೆ. ಆದ್ರೆ ಖಂಡಿತ ಶ್ರೀರಾಮಚಂದ್ರನಲ್ಲ. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ನಂತಹ ಮೇರು ನಟರನ್ನು ಕಂಡಿರುವ ಕನ್ನಡ ಚಿತ್ರರಂಗದಲ್ಲಿ ದರ್ಶನ್ ತೂಗುದೀಪ ತಮ್ಮದೇ ಆದ ಛಾಪು ಮೂಡಿಸಿದ್ದರು. ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಮೊದಲಾದ ಮುಂಚೂಣಿಯ ನಟರೊಂದಿಗೆ ಸ್ಪರ್ಧೆ ಮಾಡಿ ಚಾಲೆಂಜಿಂಗ್ ಸ್ಟಾರ್ ಆಗಿ ರೂಪುಗೊಂಡವರು ನಟ ದರ್ಶನ್ ತೂಗುದೀಪ. ಅಷ್ಟೇ ಅಲ್ಲ, ಸಿನಿಮಾ ಜೊತೆಗೆ ರೈತರ ಪಾಲಿಗೂ ಮಾದರಿಯಾಗಿದ್ದಾರೆ. ವನ್ಯ ಜೀವಿ ಸಂಕ್ಷರಣೆಯಲ್ಲೂ ದರ್ಶನ್ ಒಂದು ಹೆಜ್ಜೆ ಮುಂದಿದ್ದಾರೆ.

ಇನ್ನು ಕನ್ನಡ ಚಿತ್ರರಂಗಕ್ಕೆ ಬರುವುದಕ್ಕಿಂತ ಮುನ್ನ ದರ್ಶನ್ ಎಷ್ಟು ಕಷ್ಟ ಪಟ್ಟಿದ್ದರು, ಎಷ್ಟು ಸಂಕಷ್ಟ ಅನುಭವಿಸಿದ್ದರು, ಒಂದೊಂದು ರೂಪಾಯಿ ಸೇರಿಸಲು ಏನೇನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. 1997ರಲ್ಲಿ ಮಹಾಭಾರತ, ದೇವರ ಮಗ, ತಮಿಳಿನ ವಲ್ಲರಸು, ಎಲ್ಲರ ಮನೆ ದೋಸೆನು, ಮಿಸ್ಟರ್ ಹರಿಶ್ಚಂದ್ರ, ಭೂತಯ್ಯನ ಮಕ್ಕಳು ಮೊದಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ದರ್ಶನ್ ತೂಗೂದೀಪ.

ಆದ್ರೆ 2002ರಲ್ಲಿ ಮೆಜೆಸ್ಟಿಕ್ ಚಿತ್ರದಲ್ಲಿ ದಾಸನಾಗಿ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟ ದರ್ಶನ್ ನಂತ್ರ ಧೃವನಾಗಿ ಕನ್ನಡ ಚಿತ್ರರಂಗದ ಬೆಳ್ಳಿಪರದೆಯ ಮೇಲೆ ರಾರಾಜಿಸಿದ್ರು. ಆದ್ರೆ ನೀನಗೋಸ್ಕರ- ಕಿಟ್ಟಿ ಚಿತ್ರಗಳ ಮೂಲಕ ಕಾಣಿಸಿಕೊಂಡ್ರೂ ಸ್ಯಾಂಡಲ್ ವುಡ್ ನಲ್ಲಿ ತಳವೂರಲು ಸಾಧ್ಯವಾಗಲಿಲ್ಲ. ಆಗ ಪ್ರೇಮ್ ನಿದೇರ್ಶನದಲ್ಲಿ ಮೂಡಿ ಬಂದ ಕರಿಯ ಚಿತ್ರ ದರ್ಶನ್ ನೇಮ್ ಮತ್ತು ಫೇಮ್ ಅನ್ನು ತಂದುಕೊಟ್ಟಿತ್ತು. ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡ ದರ್ಶನ್ ಗೆ ಕರಿಯ ಸಿನಿಮಾದ ಯಶಸ್ಸು ದರ್ಶನ್ ಗೆ ನಿರ್ಮಾಪಕರು ಮನೆ ಬಾಗಿಲಿಗೆ ಬರುವಂತೆ ಮಾಡಿತ್ತು.

ಕರಿಯ ಚಿತ್ರದ ಯಶಸ್ಸಿನ ನಂತರ “ಲಾಲಿ ಹಾಡು” ಹಾಡುತ್ತಾ, ನೀನಂದ್ರೆ ಇಷ್ಟ ಅಂತ ಹೇಳುತ್ತಾ, ಕುಶಲವೇ ಕ್ಷೇಮವೇ ಎಂದು ಕೇಳುತ್ತಾ, “ಲಂಕೇಶ್ ಪತ್ರಿಕೆ”ಯಲ್ಲಿ ಬರೆಯುತ್ತಾ, ನೆಲಕಚ್ಚಿದ್ದ ದರ್ಶನ್ ಗೆ ಮತ್ತೆ ಮರುಜೀವ ನೀಡಿದ್ದು ನಮ್ಮ ಪ್ರೀತಿಯ ರಾಮು ಚಿತ್ರ. ನಮ್ಮ ಪ್ರೀತಿಯ ರಾಮು ಅಷ್ಟೇನೂ ಯಶ ಸಾಧಿಸದಿದ್ರೂ ದರ್ಶನ ಅಭಿನಯ ಮಾತ್ರ ಅದ್ಭುತವಾಗಿತ್ತು.

ಈ ನಡುವೆ, ಇಂದ್ರಜಿತ್ ಲಂಕೇಶ್ ನಿರ್ದೇಶನದ ಲಂಕೇಶ್ ಪತ್ರಿಕೆ ಚಿತ್ರದ ಬಳಿಕ ಮೊನಾಲಿಸಾ ಚಿತ್ರದಲ್ಲೂ ಆತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ದರ್ಶನ್. ನಂತರ ಕನ್ನಡ ಚಿತ್ರರಂಗಕ್ಕೆ ದಾಸನಾಗಿ ಮರುಜೀವ ಪಡೆದ ದರ್ಶನ್ ಆಗಲೇ ಯಶಸ್ಸಿನ ಉತ್ತುಂಗಕ್ಕೇರಿದ್ದರು.

ದಾಸ ಚಿತ್ರದ ಯಶಸ್ಸಿನ ನಂತರ ದರ್ಶನ್ ಕೂಡ ಹಿಂತಿರುಗಿ ನೊಡಲೇಇಲ್ಲ. ಸೂರ್ಯನಾಗಿ ಅಣ್ಣಾವು ಚಿತ್ರದಲ್ಲಿ ಕಾಣಿಸಿಕೊಂಡ ದರ್ಶನ್, ಧರ್ಮ, ದರ್ಶನ್ ಚಿತ್ರಗಳಲ್ಲೂ ಮಿಂಚು ಹರಿಸಿದ್ದರು. ಭಗವಾನ್ ಚಿತ್ರದಲ್ಲಿ ಭಾಗಿಯಾಗಿ, ಕಲಾಸಿಪಾಳ್ಯ ಚಿತ್ರದಲ್ಲಿ ಕೆಂಚನಾಗಿ ಸ್ಯಾಂಡಲ್ ವುಡ್ ನಲ್ಲಿ ಧೂಳು ಎಬ್ಬಿಸಿದ್ದರು ನಟ ದರ್ಶನ್.

DBoss Bossism

ಹಾಗೇ, ಅಯ್ಯ ಚಿತ್ರದಲ್ಲಿ ಅಯ್ಯನಾಗಿ, ಶಾಸ್ತ್ರಿ ಚಿತ್ರದಲ್ಲಿ ರಾಮ ಶಾಸ್ತ್ರಿಯಾಗಿ, ಸ್ವಾಮಿ ಚಿತ್ರದಲ್ಲಿ ಖಡಕ್ ಪೆÇಲೀಸ್ ಅಧಿಕಾರಿಯಾಗಿ ನಟಿಸಿದ್ದ ದರ್ಶಶ್ ಗೆ ಮಂಡ್ಯ ಚಿತ್ರದಲ್ಲಿ ರಾಧಿಕಾ ಮತ್ತು ರಕ್ಷಿತಾ ನಾಯಕಿಯಾಗಿದ್ದರು. ಬಳಿಕ ಜಗ್ಗಿಯಾಗಿ ಸುಂಟರಗಾಳಿ ಚಿತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಅಷ್ಟೇ ಅಲ್ಲ, ರಕ್ಷಿತಾ ಮತ್ತು ದರ್ಶನ್ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಯಾಗಿದ್ದರು.
ಇದಾದ ಬಳಿಕ ದತ್ತ ಚಿತ್ರದಲ್ಲಿ ದತ್ತನಾಗಿ ರಮ್ಯಾ ಜೊತೆ ಕಾಣಿಸಿಕೊಂಡ ದರ್ಶನ್, ವೀರಭದ್ರನಾಗಿ ತಂಗಿಗಾಗಿ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

2007ರಲ್ಲಿ ಭೂಪತಿಯಾಗಿ ಮೆರೆದಾಡಿದ್ದ ದರ್ಶನ್, ಸ್ನೇಹನಾ ಪ್ರೀತಿನಾ ಅಂತ ಹೇಳಿಕೊಂಡು, ಉಪೇಂದ್ರ ಜೊತೆಯಲ್ಲಿ ಅನಾಥ ಚಿತ್ರದಲ್ಲೂ ನಟಿಸಿದ್ದರು. ಈ ಬಂಧನ, ಇಂದ್ರ, ಅರ್ಜುನ್, ನವಗ್ರಹ, ಯೋಧ, ಅಭಯ್ ಚಿತ್ರಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಟನೆ ಮಾಡಿದ್ದರು.

ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ದರ್ಶನ್ ನಿರ್ಮಾಪಕರ ಪಾಲಿಗೆ ಅಚ್ಚುಮೆಚ್ಚಿನ ಹೀರೋ ಆಗಿದ್ದರು. 2010ರಲ್ಲಿ ಶೌರ್ಯ ಚಿತ್ರದಲ್ಲಿ ನಟನೆ ಮಾಡಿದ್ದ ದರ್ಶನ್ 2011ರಲ್ಲಿ ತೆರೆಕಂಡ ಬಾಸ್ ಚಿತ್ರದ ನಂತರ ಅಭಿಮಾನಿಗಳ ಬಾಯಿಂದ ಡಿ ಬಾಸ್ ಅನ್ನೋ ಬಿರುದನ್ನು ಪಡೆದುಕೊಂಡ್ರು.

ಪ್ರಿನ್ಸ್ ಚಿತ್ರದಲ್ಲಿ ವಿಷ್ಣುವಾಗಿದ್ದ ದರ್ಶನ್ ಬಳಿಕ ಸಾರಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ನಿಜವಾದ ಸಾರಥಿಯೂ ಆಗಿದ್ದರು. ಐತಿಹಾಸಿಕ ಸಂಗೋಳ್ಳಿ ರಾಯಣ್ಣ ಚಿತ್ರದ ಮೂಲಕ ದರ್ಶನ್ ಯಾವುದೇ ಪಾತ್ರದಲ್ಲೂ ನಟಿಸಬಲ್ಲೇ ಎಂಬುದನ್ನು ಕೂಡ ಸಾಬೀತುಪಡಿಸಿದ್ದರು.

ಹಾಗೇ ಚಿಂಗಾರಿ, ಬುಲ್ ಬುಲ್ ಮಾತಾಡಕ್ಕಿಲ್ವೋ ಅಂತ ಬೃಂದಾವನಕ್ಕೆ ಕಾಲಿಟ್ಟ ದರ್ಶನ್ ಅಗ್ರಜನಾದ್ರು. ಅಂಬರೀಷ, ಮಿಸ್ಟರ್ ಐರಾವತ, ವಿರಾಟ್, ಜಗ್ಗುದಾದಾ, ಹಾಗೂ ಮುಮ್ತಾಜ್, ನಾಗರಹಾವು, ನವಗ್ರಹ, ಚೌಕಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ದರ್ಶನ್, ಚಕ್ರವರ್ತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಚಕ್ರವರ್ತಿಯಾಗಿ ಹೊಹೊಮ್ಮಿದ್ರು.

ಬಳಿಕ ತಾರಕ್, ಯಜಮಾನ ಚಿತ್ರದ ಜೊತೆಗೆ ಅಮರ್ ಚಿತ್ರದಲ್ಲಿ ಆತಿಥಿ ಪಾತ್ರ ಮಾಡಿದ್ದ ದರ್ಶನ್ ಕುರುಕ್ಷೇತ್ರ ಚಿತ್ರದಲ್ಲಿ ಒಡ್ಡೋಲಗವನ್ನೇ ನಡೆಸಿದ್ದರು. ಅಲ್ಲದೆ ಒಡೆಯ ಮತ್ತು ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಬಾಕ್ಸಾಫಿಸ್ ಸುಲ್ತಾನನಾಗಿದ್ರು.

ಒಂದಂತೂ ಸತ್ಯ, ದರ್ಶನ್ ಸಿನಿಮಾ ಅಂದ್ರೆ ಹಾಕಿದ ಬಂಡಾವಳ ವಾಪಸ್ ಬರುತ್ತೆ ಅನ್ನೋ ಲೆಕ್ಕಚಾರ ನಿರ್ಮಾಪಕರದ್ದು. ಹಾಗೇ ಅಭಿಮಾನಿಗಳಿಗೆ ಚಿತ್ರ ಚೆನ್ನಾಗಿರಲಿ, ಇಲ್ಲದೆ ಇರಲಿ, ದರ್ಶನ್ ನಟನೆ ತುಂಬಾ ಇಷ್ಟಪಡುತ್ತಾರೆ. ಜೊತೆಗೆ ದರ್ಶನ್ ಮೇಲಿನ ಅಭಿಮಾನ, ಪ್ರೀತಿ ಕೂಡ ಇದೆ. ಇದೇ ಕಾರಣಕ್ಕೆ ದರ್ಶನ್ ರಾಜ್ಯದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

Tags: #Saaksha TVD-BossDarshanSandalwood
ShareTweetSendShare
Join us on:

Related Posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

by Shwetha
July 1, 2026
0

ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

by Shwetha
July 1, 2026
0

ರಾಜ್ಯಾದ್ಯಂತ ಇಂದು SIR ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ...

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

by Shwetha
July 1, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಪ್ರಕರಣ ಈಗ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೀನಾಯ ಘಟನೆಯಿಂದ ಮನನೊಂದ ಪ್ರದೀಪ್...

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

by Shwetha
July 1, 2026
0

ಚಂಪತ್ ರೈ ಅವರು ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಟಿನ್ನು ಯಾದವ್ ಹೀಗೆ...

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

by Shwetha
July 1, 2026
0

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ತೆರಿಗೆ ಹಣದ ಸದುಪಯೋಗದ ಕುರಿತು ನಡೆದ ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram