ಕುಡಿದ ಮತ್ತಲ್ಲಿ ‘ಜಾಲಿ ರೈಡ್’ ಹೊರಟ ಮೂವರು ‘ಮಸಣ’ ಸೇರಿದ್ರು..
ಬೆಂಗಳೂರು: ಕುಡಿದ ಮತ್ತಲ್ಲಿ ವಾಹನ ಚಲಾಯಿಸಬಾರದೆಂದೂ ಎಷ್ಟೇ ಬುದ್ದಿವಾದ ಹೇಳಿದ್ರು ಎಷ್ಟೇ ನಿಯಮ ತಂದ್ರು ಟ್ರಾಫಿಕ್ ರೂಲ್ಸ್ ಅನ್ನ ಹೆಚ್ಚು ಜನರು ಗಾಳಿಗೆ ತೂರುತ್ತಾರೆ. ಇದೇ ರೀತಿ ಕುಡಿದ ಮತ್ತಿನಲ್ಲಿ ಜಾಲಿ ರೈಡ್ ಹೊರೆಟಿದ್ದ ಮೂವರು ಯುವಕರು ಇದೀಗ ಯಮನ ಪಾದ ಸೇರಿದ್ದಾರೆ. ಹೌದು ಹೊಸಕೋಟೆಯ ಟೋಲ್ ಗೇಟ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕರ್ನಾಟಕದ ಕಾರವಾರದಲ್ಲಿ ಐತಿಹಾಸಿಕ ಮಧ್ಯಕಾಲೀನ ಕಲಾಕೃತಿಗಳು ಪತ್ತೆ
ರಾಜೇಶ್, ಲವನಿತ್ ಹಾಗೂ ಹರೀಶ್ ಮೃತ ದುರ್ದೈವಿಗಳಾಗಿದ್ದಾರೆ. ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರಿಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
10 ವರ್ಷಗಳಿಂದ ಚಿಂದಿ ಹಾಯುತ್ತಾ ಜೀವನ ಮಾಡ್ತಿದ್ದವ ಮರಳಿ ಕುಟುಂಬ ಸೇರಿದ : ಕಾರಣ ಹೇರ್ ಸ್ಟೈಲ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel