ADVERTISEMENT
Monday, May 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಲಾಕ್ ಡೌನ್ ಅವಧಿಯಲ್ಲಿ ಈ 5 ರುಚಿಕರ ಅಡುಗೆಗಳ ರೆಸಿಪಿ ಟ್ರೈ ಮಾಡಿ

Namratha Rao by Namratha Rao
May 16, 2021
in Cooking, Newsbeat, ಅಡುಗೆ
Share on FacebookShare on TwitterShare on WhatsappShare on Telegram

ಲಾಕ್ ಡೌನ್  ಅವಧಿಯಲ್ಲಿ ಈ 5 ರುಚಿಕರ ಅಡುಗೆಗಳ ರೆಸಿಪಿ ಟ್ರೈ ಮಾಡಿ

  1. ಪನ್ನೀರ್ ಬಿರಿಯಾನಿ

ಬೇಕಾಗುವ ಸಾಮಾಗ್ರಿಗಳು

Related posts

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

May 24, 2026
ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

May 24, 2026

ಪನ್ನೀರ್ – 1 ಕಪ್
ಭಾಸ್ಮತಿ ಅಕ್ಕಿ 1 ಕಪ್

ಪಲಾವ್ ಎಲೆ 2,
ಚಕ್ಕೆ 1,
ಲವಂಗ 4,
ಏಲಕ್ಕಿ 2,
ಗೋಡಂಬಿ 8-10,
ಪುದೀನಾ ಸೊಪ್ಪು 1 ಕಟ್ಟು
ಕೊತ್ತಂಬರಿಸೊಪ್ಪು – ಸ್ವಲ್ಪ
ಬೆಳ್ಳುಳ್ಳಿ ಎಸಳು – 5-6
ಶುಂಠಿ – ಸಣ್ಣ ತುಂಡು
ಸೋಂಪು – 1 ಚಮಚ
ಗಟ್ಟಿ ಮೊಸರು – 2 ಚಮಚ

ಉದ್ದಕ್ಕೆ ಹೆಚ್ಚಿದ ಈರುಳ್ಳಿ – 1,
ಸಣ್ಣಗೆ ಕತ್ತರಿಸಿದ ಹಸಿಮೆಣಸು – 2
ಹೆಚ್ಚಿದ ಟೊಮೆಟೊ – 1

ಮೆಣಸಿನ ಪುಡಿ 1 ಚಮಚ,
ಬಿರಿಯಾನಿ ಮಸಾಲಾ 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಕತ್ತರಿಸಿಕೊಂಡ ಪನ್ನೀರ್ ತುಂಡುಗಳನ್ನು ಸ್ವಲ್ಪ ಕೆಂಪಗೆ ಆಗುವವರೆಗೆ ಹುರಿಯಿರಿ.
ನಂತರ ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಎಸಳು, ಚಿಕ್ಕ ಶುಂಠಿ, ಸೋಂಪ್ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಅದಕ್ಕೆ 2 ಚಮಚ ಗಟ್ಟಿ ಮೊಸರು ಸೇರಿಸಿ ಮತ್ತೊಮ್ಮೆ ರುಬ್ಬಿ.

ಈಗ ಕುಕ್ಕರಿನಲ್ಲಿ ಎಣ್ಣೆ ಬಿಸಿ ಮಾಡಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಗೋಡಂಬಿ ಗಳನ್ನು ಹುರಿಯಿರಿ. ನಂತರ
ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿಕೊಂಡ ಟೊಮೆಟೊ ಸೇರಿಸಿ ಹುರಿಯಿರಿ.
ಈಗ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಉಪ್ಪು, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಹುರಿದಿಟ್ಟುಕೊಂಡ ಪನ್ನೀರ್ ಸೇರಿಸಿ ಚೆನ್ನಾಗಿ ಬೆರೆಸಿ.

ಈಗ ಈ ಮಿಶ್ರಣಕ್ಕೆ ಅರ್ಧ ಗಂಟೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ. (1 ಅಳತೆಗೆ ಒಂದುವರೆ ಅಳತೆ ನೀರು) ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಬರುವವರೆಗೆ ಬೇಯಿಸಿ.
ರುಚಿಯಾದ ಪನ್ನೀರ್ ಬಿರಿಯಾನಿ ರೆಡಿಯಾಗಿದೆ. ಇದನ್ನು ರಾಯತ ಜೊತೆ ಸವಿಯಿರಿ.

2. ರೆಸ್ಟೋರೆಂಟ್ ‌ಸ್ಟೈಲ್ ಪನೀರ್ ಟಿಕ್ಕ

ಬೇಕಾಗುವ ಪದಾರ್ಥಗಳು

ಪನೀರ್ ತುಂಡು – 1 ½ ಕಪ್
ತ್ರಿಕೋನಾಕಾರದಲ್ಲಿ ಕತ್ತರಿಸಿದ ಕ್ಯಾಪ್ಸಿಕಂ – 1 ಕಪ್
ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ – 1ಕಪ್
ಮೊಸರು – ¾ ಕಪ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ½ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ½ ಟೀಸ್ಪೂನ್
ಗರಂ ಮಸಾಲ – 1 ಟೀಸ್ಪೂನ್
ಬ್ಲಾಕ್ ಸಾಲ್ಟ್ – ½ ಟೀಸ್ಪೂನ್
ಕಸೂರಿ ಮೆಥಿ – 1 ಟೀಸ್ಪೂನ್
ಪಿಂಚ್ ಇಂಗ್
ತಂದೂರಿ ಮಸಾಲ – 1 ಟೀಸ್ಪೂನ್ (optional)
ತುರಿದ ಶುಂಠಿ – 1-2 ಟೀಸ್ಪೂನ್
ನಿಂಬೆ ರಸ – 1-2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ

ಮಾಡುವ ವಿಧಾನ

ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಮೊಸರು ಸೇರಿಸಿ. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ತಂದೂರಿ ಮಸಾಲ, ಜೀರಿಗೆ, ಕೊತ್ತಂಬರಿ ಪುಡಿ, ಬ್ಲಾಕ್ ಸಾಲ್ಟ್, ಉಪ್ಪು, ಕಸೂರಿ ಮೆಥಿ, ಪಿಂಚ್ ಹಿಂಗ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈ ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ.

ನಂತರ ತುರಿದ ಶುಂಠಿ ಮತ್ತು ನಿಂಬೆ ರಸವನ್ನು ಸೇರಿಸಿ. ಪುನಃ ಕಲಸಿ ನಯವಾದ ಪೇಸ್ಟ್ ಮಾಡಿ.

ಮೊಸರು ಮಿಶ್ರಣಕ್ಕೆ ಪನೀರ್ ತುಂಡು, ಕ್ಯಾಪ್ಸಿಕಂ‌
ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.‌10 ನಿಮಿಷಗಳ ಕಾಲ ಹಾಗೆಯೇ ಇರಿಸಿ.

ಮ್ಯಾರಿನೇಟ್ ಮಾಡಿದ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿ ತುಂಡುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ, ಅದನ್ನು 20-30 ನಿಮಿಷಗಳ ಕಾಲ ಫ್ರಿಜ್‌ನಲ್ಲಿಡಿ.

ನಂತರ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಮರದ ಕಡ್ಡಿಯನ್ನು ಓರೆಯಾಗಿ ಚುಚ್ಚಿ.

ಈಗ ಹೆಚ್ಚಿನ ತಾಪಮಾನದಲ್ಲಿ ತಂದೂರಿನಲ್ಲಿ ಅಥವಾ ಒವನ್‌ ನಲ್ಲಿ ಕಾಯಿಸಿ.‌ ಬೇಕಿಂಗ್ ಶೀಟ್ ತೆಗೆದುಕೊಂಡು ಅದನ್ನು ಅಲ್ಯೂಮಿನಿಯಂ ಫಾಯಿಲ್ ಪೇಪರ್ ಬಳಸಿ ಮುಚ್ಚಿ, ನಂತರ ಅದರ ಮೇಲೆ ತಯಾರಾದ ತುಂಡುಗಳನ್ನು ಜೋಡಿಸಿ, ಎಣ್ಣೆಯನ್ನು ಸಿಂಪಡಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.

ನೀವು ಒಲೆಯನ್ನು ಬಳಸುವುದಾದರೆ ಸ್ವಲ್ಪ ಎಣ್ಣೆಯನ್ನು ಬಳಸಿ ಮ್ಯಾರಿನೇಟ್ ಮಾಡಿದ‌ ತುಂಡುಗಳನ್ನು ಗ್ರಿಡ್ಲ್ ಅಥವಾ ತವಾ ಮೇಲೆ ಹುರಿಯಬಹುದು.

ಎಲ್ಲಾ ಬದಿಗಳನ್ನು ಸರಿಯಾಗಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬೇಕು.

ಈಗ ಪನೀರ್ ಟಿಕ್ಕ ಸಿದ್ಧವಾಗಿದೆ. ನೀವು ಅದರ ಮೇಲೆ ಸ್ವಲ್ಪ ಚಾಟ್ ಮಸಾಲಾ, ನಿಂಬೆ ರಸವನ್ನು ಸಿಂಪಡಿಸಬಹುದು ಮತ್ತು ರುಚಿಯಾದ ಪನೀರ್ ಟಿಕ್ಕಾವನ್ನು ಪುದೀನ ಚಟ್ನಿಯೊಂದಿಗೆ ಸವಿಯಬಹುದು.

 

3. ಪೋಟ್ಯಾಟೋ( ಆಲೂಗಡ್ಡೆ) ಲಾಲಿಪಾಪ್

ಬೇಕಾಗುವ ‌ಸಾಮಾಗ್ರಿಗಳು

ಬೇಯಿಸಿದ ಆಲೂಗಡ್ಡೆ – 2-3
ಸಣ್ಣಗೆ ಹೆಚ್ಚಿದ ಈರುಳ್ಳಿ- 1
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/4 ಕಪ್
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1/2 ಚಮಚ
ಶುಂಠಿ ಬೆಳ್ಳುಳಿ ಪೇಸ್ಟ್ – 1 ಟೀಸ್ಪೂನ್
ನಿಂಬೆ – 1/2
ಮೈದಾ – 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕೆಂಪು ಮೆಣಸು – 10-12
ಬ್ರೆಡ್ – 3 ಸ್ಲೈಸ್

ಮಾಡುವ ವಿಧಾನ :

ಮೊದಲನೆಯದಾಗಿ ಬ್ರೆಡ್ ಗಳನ್ನು ಕತ್ತರಿಸಿ ಬ್ಲೆಂಡರ್ ಗೆ ಹಾಕಿ ನೀರನ್ನು ಸೇರಿಸದೆ ನಯವಾಗಿ ಪುಡಿ ಮಾಡಿ. ನಂತರ ಈ ಬ್ರೆಡ್ ಕ್ರಂಬ್ಸ್ ಅನ್ನು ಮಿಕ್ಸಿಂಗ್ ಬೌಲ್ ಗೆ ವರ್ಗಾಯಿಸಿ.
lollipop

ನಂತರ ಕೆಂಪು ಮೆಣಸುಗಳನ್ನು ಕಡಿಮೆ ಉರಿಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅವುಗಳನ್ನು ತರಿತರಿಯಾಗಿ ಹುಡಿ ಮಾಡಿ ಚಿಲ್ಲಿ ಫ್ಲೇಕ್ಸ್ ತಯಾರಿಸಿ
ಈಗ ಬ್ರೆಡ್ ಕ್ರಮ್ಸ್ ಮತ್ತು ಚಿಲ್ಲಿ ಫ್ಲೇಕ್ಸ್ ಒಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.

ಬಳಿಕ ಬೇಯಿಸಿದ ಆಲೂಗಡ್ಡೆಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಮ್ಸ್, ಮೆಣಸಿನ ಪುಡಿ, ಧನಿಯಾ ಪುಡಿ, ಶುಂಠಿ ಬೆಳ್ಳುಳಿ ಪೇಸ್ಟ್, ನಿಂಬೆ ರಸ, ಉಪ್ಪು ಹಾಗೂ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲೆಸಿರಿ. ನಂತರ ಅದರಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಕೊಳ್ಳಿ.

ಆನಂತರ ಉಳಿದ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಹದಕ್ಕೆ ಕಲಸಿ. ‌
ಈಗ ಬಾಣಲೆಯಲ್ಲಿ ಎಣ್ಣೆ ‌ಬಿಸಿ ಮಾಡಿ.‌ ತಯಾರಿಸಿ ಇಟ್ಟುಕೊಂಡ ಉಂಡೆಗಳನ್ನು ಮೈದಾ ಹಿಟ್ಟಿನ ಪೇಸ್ಟ್ ನಲ್ಲಿ ಅದ್ದಿ ಬ್ರೆಡ್ ಕ್ರಮ್ಸ್ ನಲ್ಲಿ ಉರುಳಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಹುರಿದು ತೆಗೆಯಿರಿ. ಈಗ ಪೋಟ್ಯಾಟೋ ಲಾಲಿಪಾಪ್ ಅನ್ನು ಟೊಮೆಟೊ ಸಾಸ್ ಜೊತೆ ಸವಿಯಿರಿ.

 

4. ಹೆಸರುಬೇಳೆಯ ಲಾಡು

ಬೇಕಾಗುವ ಪದಾರ್ಥಗಳು

2 ಕಪ್ – ಹೆಸರು ಬೇಳೆ
1/2 ಕಪ್ – ತುಪ್ಪ
1ಕಪ್ – ಸಕ್ಕರೆ
6 – ಏಲಕ್ಕಿ
ಸ್ವಲ್ಪ ಕತ್ತರಿಸಿದ ಗೋಡಂಬಿ

ಮಾಡುವ ವಿಧಾನ

ಮೊದಲು, ಬಾಣಲೆಯನ್ನು ಬಿಸಿ ಮಾಡಿ ಹೆಸರು ಬೇಳೆಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಹೆಸರು ಬೇಳೆ ಹೊಂಬಣ್ಣಕ್ಕೆ ತಿರುಗುವವರೆಗೆ ಮತ್ತು ಪರಿಮಳ ಬರುವವರೆಗೆ 15 ರಿಂದ 20 ನಿಮಿಷ ‌ಚೆನ್ನಾಗಿ ಹುರಿದು ತೆಗೆಯಿರಿ. ಇದು ತಣ್ಣಗಾದ ಬಳಿಕ‌ ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ಹುಡಿ ಮಾಡಿ. ನಂತರ ಇದನ್ನು ಅಗಲವಾದ ಪಾತ್ರೆಗೆ ಹಾಕಿ. ಇದಕ್ಕೆ ಪುಡಿ ಮಾಡಿದ ಸಕ್ಕರೆ, ಪುಡಿ ಮಾಡಿದ ಏಲಕ್ಕಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಚಿಕ್ಕದಾಗಿ ಕತ್ತರಿಸಿದ ಗೇರು ಬೀಜಗಳನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬೆರೆಸಿ. ಈಗ ಈ ಮಿಶ್ರಣಕ್ಕೆ ಬಿಸಿ ಮಾಡಿದ ತುಪ್ಪವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ಈ ಹಿಟ್ಟಿನಿಂದ ಸಣ್ಣ ಲಿಂಬೆ ಗಾತ್ರದ ಉಂಡೆಗಳನ್ನು ‌ಮಾಡಿ. ಈಗ ಹೆಸರು ಹಿಟ್ಟಿನ ಲಾಡು ಸವಿಯಲು ಸಿದ್ಧವಾಗಿದೆ.

5. ಬಾದೂಷ

ಬೇಕಾಗುವ ಸಾಮಗ್ರಿಗಳು

ಮೈದಾ ಹಿಟ್ಟು – 1 ಕಪ್
ಸಕ್ಕರೆ – 1 ಕಪ್
ತುಪ್ಪ – 5 ಚಮಚ
ಏಲಕ್ಕಿ – 3
ಅಡುಗೆ ಸೋಡಾ ಒಂದು ‌ಪಿಂಚ್
ನಿಂಬೆರಸ – 4 ಹನಿ
ಮೊಸರು – ಸ್ವಲ್ಪ
ಹುರಿಯಲು ಎಣ್ಣೆ

ಮಾಡುವ ವಿಧಾನ:

ಮೊದಲಿಗೆ ಸಕ್ಕರೆ ಪಾಕವನ್ನು ತಯಾರಿಸಿ ಇಟ್ಟುಕೊಳ್ಳಿ. 100ml ನೀರಿಗೆ 1 ಕಪ್ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿ ಬರೆಸಿ. ನಂತರ ಇದಕ್ಕೆ ನಿಂಬೆ ರಸ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಪಾಕ ತಯಾರಿಸಿ.

ನಂತರ ಒಂದು ಪಾತ್ರೆಯಲ್ಲಿ ತುಪ್ಪ ಮತ್ತು ಮೊಸರನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಮೈದಾ ಹಿಟ್ಟನ್ನು ಬೆರೆಸಿ, ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ. ಬಳಿಕ ಹಿಟ್ಟನ್ನು ಚೆನ್ನಾಗಿ ನಾದಿ.‌

ಆನಂತರ ನಿಂಬೆ ಗಾತ್ರದ ಸಣ್ಣಸಣ್ಣ ಉಂಡೆಗಳನ್ನು ಮಾಡಿ.
ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿಮಾಡಿ. ನಂತರ ಮಾಡಿಟ್ಟುಕೊಂಡ ಹಿಟ್ಟಿನ ಉಂಡೆಗಳನ್ನು ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ.

ನಂತರ ಇದನ್ನು ತಯಾರಿಸಿ ಇಟ್ಟುಕೊಂಡ ಸಕ್ಕರೆ ಪಾಕಕ್ಕೆ ಸ ಹಾಕಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬೇಕಿದ್ದರೆ ಬಾದಾಮಿ,ಪಿಸ್ತಾ, ಗೋಡಂಬಿಗಳಿಂದ ಅಲಂಕರಿಸಿ.

ಸಿಹಿಯಾದ ಬಾದೂಷ ಸವಿಯಲು ಸಿದ್ಧ.

 

Tags: coockingdelitious recipiesFood
ShareTweetSendShare
Join us on:

Related Posts

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

by Shwetha
May 24, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆನೇಕಲ್‌ನಲ್ಲಿ ಉದ್ದೇಶಿತ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ...

ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

by Shwetha
May 24, 2026
0

ಭಾರತದ ಗಡಿಭಾಗಗಳಲ್ಲಿ ದಶಕಗಳಿಂದ ಕದ್ದುಮುಚ್ಚಿ ನುಸುಳುತ್ತಿರುವ ಹಾಗೂ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ, ಕೃತಕ ಜನಸಂಖ್ಯಾ ಬದಲಾವಣೆಗೆ ಕಾರಣವಾಗಿರುವ ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರ ಇದೀಗ...

ರಾಜ್ಯಸಭೆ ಅಂಗಳದಲ್ಲಿ ದೊಡ್ಡಗೌಡರ ಭವಿಷ್ಯ – ಪ್ರಧಾನಿ ಮೋದಿ ವಿವೇಚನೆಗೆ ಎಲ್ಲವನ್ನೂ ಬಿಟ್ಟ ದಳಪತಿಗಳು

ರಾಜ್ಯಸಭೆ ಅಂಗಳದಲ್ಲಿ ದೊಡ್ಡಗೌಡರ ಭವಿಷ್ಯ – ಪ್ರಧಾನಿ ಮೋದಿ ವಿವೇಚನೆಗೆ ಎಲ್ಲವನ್ನೂ ಬಿಟ್ಟ ದಳಪತಿಗಳು

by Shwetha
May 24, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ವಲಯದಲ್ಲಿ ಈಗ ರಾಜ್ಯಸಭಾ ಚುನಾವಣೆಯ ಕಾವು ಜೋರಾಗಿದೆ. ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮರು ಆಯ್ಕೆಯ ವಿಷಯ ಸಾಕಷ್ಟು ಚರ್ಚೆಗೆ...

ರಾಜ್ಯಸಭಾ ಚುನಾವಣೆ ಎಫೆಕ್ಟ್ ಸಿದ್ದು ಕುರ್ಚಿ ಸುಭದ್ರ ಡಿಕೆಶಿ ಸಿಎಂ ಕನಸಿಗೆ ಹೈಕಮಾಂಡ್ ಬ್ರೇಕ್

ರಾಜ್ಯಸಭಾ ಚುನಾವಣೆ ಎಫೆಕ್ಟ್ ಸಿದ್ದು ಕುರ್ಚಿ ಸುಭದ್ರ ಡಿಕೆಶಿ ಸಿಎಂ ಕನಸಿಗೆ ಹೈಕಮಾಂಡ್ ಬ್ರೇಕ್

by Shwetha
May 24, 2026
0

ಜೂನ್ 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಕರ್ನಾಟಕ ರಾಜಕಾರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಈ ಚುನಾವಣೆಯು ಕೇವಲ ದೆಹಲಿಗೆ ಪ್ರತಿನಿಧಿಗಳನ್ನು ಕಳುಹಿಸುವ ಪ್ರಕ್ರಿಯೆಯಾಗಿ ಉಳಿಯದೆ, ರಾಜ್ಯ...

ಮೋದಿ ರೋಮ್ಯಾಂಟಿಕ್ ಫೋಟೋ ನೋಡಿದರೆ ನಗು ಬರುತ್ತೆ; ದೇಶದಲ್ಲಿ ಸಮಸ್ಯೆಗಳಿದ್ದರೂ ಮೋದಿ ಮೆಲೋಡಿ ಹಂಚುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್

ಮೋದಿ ರೋಮ್ಯಾಂಟಿಕ್ ಫೋಟೋ ನೋಡಿದರೆ ನಗು ಬರುತ್ತೆ; ದೇಶದಲ್ಲಿ ಸಮಸ್ಯೆಗಳಿದ್ದರೂ ಮೋದಿ ಮೆಲೋಡಿ ಹಂಚುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್

by Shwetha
May 24, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸ ಹಾಗೂ ಅಲ್ಲಿನ ಫೋಟೋ ಶೂಟ್ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರ ವ್ಯಂಗ್ಯವಾಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram