ADVERTISEMENT
Monday, May 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ಸುಲಭ , ರುಚಿಕರ , ಆರೋಗ್ಯಕರ ಸಾರು , ಗೊಜ್ಜು , ಗ್ರೇವಿ ರೆಸಿಪಿಗಳು..!

Namratha Rao by Namratha Rao
September 11, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

5 ಸುಲಭ , ರುಚಿಕರ , ಆರೋಗ್ಯಕರ ಸಾರು , ಗೊಜ್ಜು , ಗ್ರೇವಿ ರೆಸಿಪಿಗಳು..!

Saakshatv cooking recipe how to prepare hagalkayi kayirasa

1. ಹಾಗಲಕಾಯಿ ಕಾಯಿರಸ

Related posts

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

May 24, 2026
ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

May 24, 2026

ಬೇಕಾಗುವ ಸಾಮಗ್ರಿಗಳು

ಹಾಗಲಕಾಯಿ – 4
ಕಡಲೆ ಬೇಳೆ – 2 ಚಮಚ
ಉದ್ದಿನಬೇಳೆ – 1 ಚಮಚ
ಕಪ್ಪು ಎಳ್ಳು – 2 ಚಮಚ
ಕಾಯಿತುರಿ/ಒಣಕೊಬ್ಬರಿ – 4 ಚಮಚ
ಮೆಂತೆ – 1/4 ಚಮಚ
ಒಣಮೆಣಸಿನಕಾಯಿ – 5
ಹುಣಸೆ ರಸ – 1 ಕಪ್
ಬೆಲ್ಲ – 1/2 ಕಪ್

ಒಗ್ಗರಣೆಗೆ

ಸಾಸಿವೆ – 1/2 ಚಮಚ
ಎಣ್ಣೆ – 1 ಚಮಚ

ಮಾಡುವ ವಿಧಾನ

ಮೊದಲಿಗೆ ‌ಹಾಗಲಕಾಯಿಗಳನ್ನು ಚಿಕ್ಕದಾಗಿ ‌ಹೆಚ್ಚಿ‌ ತೊಳೆದು 1/2 ಚಮಚ ಅರಿಶಿನ, 1 ಚಮಚ‌‌ ಕಲ್ಲು ಉಪ್ಪು ಬೆರೆಸಿ 30 ನಿಮಿಷಗಳ ಕಾಲ ನೆನೆಸಿಡಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಕಡಲೆ ಬೇಳೆ, ಉದ್ದಿನಬೇಳೆ, ಕಪ್ಪು ಎಳ್ಳು, ಕಾಯಿತುರಿ/ಒಣಕೊಬ್ಬರಿ, ಮೆಂತೆ ಮತ್ತು ಒಣಮೆಣಸಿನಕಾಯಿಗಳನ್ನು ಹುರಿದು, ತಣ್ಣಗಾದ ಬಳಿಕ ರುಬ್ಬಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಸೇರಿಸಿ.‌ ಅದು ಸಿಡಿದ ಬಳಿಕ ಹಾಗಲಕಾಯಿ ಸೇರಿಸಿ ಹುರಿಯಬೇಕು. ನಂತರ ಇದಕ್ಕೆ ‌ಹುಣಸೆ ರಸ, ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಒಂದು ಕುದಿ ಬರಿಸಿ. ನಂತರ ರುಬ್ಬಿದ ಮಸಾಲೆ ಸೇರಿಸಿ, ಅಗತ್ಯವಿರುವಷ್ಟು ನೀರು ಹಾಕಿ ಮತ್ತೊಮ್ಮೆ ಕುದಿಸಿದರೆ ಹಾಗಲಕಾಯಿ ಕಾಯಿರಸ ಸವಿಯಲು‌ ರೆಡಿ.

 

Saakshatv cooking recipes pineapple gojju

2. ಅನಾನಸ್ ಹಣ್ಣಿನ ಗೊಜ್ಜು

ಬೇಕಾಗುವ ಪದಾರ್ಥಗಳು

ಅನಾನಸ್ – 1/2 ಹಣ್ಣು
ಮೆಣಸು – 8-10
ಕಡಲೆ ಬೇಳೆ- 2 ಚಮಚ
ಉದ್ದಿನ ಬೇಳೆ -2 ಚಮಚ
ಎಳ್ಳು -2 ಚಮಚ
ಮೆಂತೆ- 1/4 ಚಮಚ
ಸಾಸಿವೆ- 1/2 ಚಮಚ
ಎಣ್ಣೆ- ಒಗ್ಗರಣೆಗೆ ಸ್ವಲ್ಪ
ಕೊಬ್ಬರಿ ತುರಿ- 2 ಚಮಚ
ಬೆಲ್ಲ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ – ಸ್ವಲ್ಪ

ಮಾಡುವ ವಿಧಾನ

ಮೊದಲು ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಕತ್ತರಿಸಿ ಇಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಮೆಂತ್ಯ, ಬ್ಯಾಡಗಿ ಮೆಣಸು, ಎಳ್ಳು, ಕೊಬ್ಬರಿ ತುರಿ ಸೇರಿಸಿ ಹುರಿಯಿರಿ.
ಅದು ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಅರಿಶಿನ ಮತ್ತು ಅನಾನಸ್ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ನಂತರ ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಒಂದು ಕುದಿ ಬರಿಸಿಕೊಳ್ಳಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ರುಚಿಯಾದ ಅನಾನಸ್ ಗೊಜ್ಜು ‌ಸವಿಯಲು ಸಿದ್ಧವಾಗಿದೆ.

3 . ಉಡುಪಿ ಶೈಲಿಯ ಮಾವಿನ ಕಾಯಿ ಸಾರು ಅಥವಾ ಅಪ್ಪೆ ಸಾರು

ಬೇಕಾಗುವ ಸಾಮಗ್ರಿಗಳು

ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ – 1ಕಪ್
ಹಸಿಮೆಣಸು – 3
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 1ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಉದ್ದಿನ ಬೇಳೆ – 1/4 ಚಮಚ
ಕೆಂಪುಮೆಣಸು – 1
ಕರಿಬೇವು – 2 ಎಸಳು
ಇಂಗು ಚಿಟಿಕೆಯಷ್ಟು
ಅರಿಶಿನ ಚಿಟಿಕೆಯಷ್ಟು

ಮಾಡುವ ವಿಧಾನ

ಮೊದಲಿಗೆ ಮಾವಿನಕಾಯಿ, ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ, ಅರ್ಧ ಕಪ್ ನೀರು ಸೇರಿಸಿ ಕುಕ್ಕರ್‌ನಲ್ಲಿ 1 ವಿಸಲ್ ಹೊಡೆಯುವವರೆಗೆ ಬೇಯಿಸಿ. ಅದು ತಣ್ಣಗಾದ ಬಳಿಕ ನಯವಾಗಿ ರುಬ್ಬಿ.

ನಂತರ ಇದನ್ನು ಪಾತ್ರೆಗೆ ವರ್ಗಾಯಿಸಿ. ರುಚಿಗೆ ತಕ್ಕಂತೆ ಉಪ್ಪು (ಬೇಕಿದ್ದರೆ ಸಣ್ಣ ತುಂಡು ಬೆಲ್ಲ) ಮತ್ತು ಸಾಕಷ್ಟು ನೀರು ಸೇರಿಸಿ 2 ನಿಮಿಷ ಕುದಿಸಿ.

ನಂತರ ಪಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಉದ್ದಿನ ಬೇಳೆ, ಜೀರಿಗೆ, ಕರಿಬೇವಿನ ಎಲೆ, ಕೆಂಪು ಮೆಣಸು, ಅರಿಶಿನ, ಇಂಗು ಸೇರಿಸಿ ಒಗ್ಗರಣೆ ಕೊಡಿ.
ಈಗ ಮಾವಿನಕಾಯಿ ರಸಂ ಅಥವಾ ಅಪ್ಪೆ ಸಾರು ಸಿದ್ಧವಾಗಿದೆ.

4. ಅನಾನಸ್ (ಪೈನಾಪಲ್) ಹಣ್ಣಿನ ಗೊಜ್ಜು

ಬೇಕಾಗುವ ಪದಾರ್ಥಗಳು

ಅನಾನಸ್ ಅಥವಾ ಪೈನಾಪಲ್ – 1/2 ಹಣ್ಣು
ಬ್ಯಾಡಗಿ ಮೆಣಸು – 8-10
ಕಡಲೆ ಬೇಳೆ- 2 ಚಮಚ
ಉದ್ದಿನ ಬೇಳೆ -2 ಚಮಚ
ಎಳ್ಳು -2 ಚಮಚ
ಮೆಂತೆ- 1/4 ಚಮಚ
ಸಾಸಿವೆ- 1/2 ಚಮಚ
ಎಣ್ಣೆ- ಒಗ್ಗರಣೆಗೆ ಸ್ವಲ್ಪ
ಕೊಬ್ಬರಿ ತುರಿ- 2 ಚಮಚ
ಬೆಲ್ಲ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ – ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಹೆಚ್ಚಿ ಪಕ್ಕದಲ್ಲಿ ಇಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಮೆಂತ್ಯ, ಬ್ಯಾಡಗಿ ಮೆಣಸು, ಎಳ್ಳು, ಕೊಬ್ಬರಿ ತುರಿ ಸೇರಿಸಿ ಹುರಿಯಿರಿ.
ಅದು ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಅರಿಶಿನ ಮತ್ತು ಅನಾನಸ್ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ನಂತರ ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಒಂದು ಕುದಿ ಬರಿಸಿಕೊಳ್ಳಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ರುಚಿಯಾದ ಪೈನಾಪಲ್ ಗೊಜ್ಜು ಅನ್ನದ ಜೊತೆಗೆ ‌ಸವಿಯಲು ಸಿದ್ಧವಾಗಿದೆ.

Saakshatv cooking recipe dasavala

5. ದಾಸವಾಳ ಹೂವಿನ ತಿಳಿ ಸಾರು

ಬೇಕಾಗುವ ಸಾಮಗ್ರಿಗಳು

ಕೆಂಪು ದಾಸವಾಳದ ಎಸಳುಗಳು – 24 ಹೂಗಳು
ಹುಣಸೆ ಹಣ್ಣಿನ ರಸ – 2 ಚಮಚ
ಬೆಲ್ಲ – 1 ಸಣ್ಣ ತುಂಡು
ಜೀರಿಗೆ 1 ಟೇಬಲ್ ಸ್ಪೂನ್
ಕರಿಮೆಣಸು 6
ಧನಿಯಾ 1/2 ಟೇಬಲ್ ಸ್ಪೂನ್
ಮೆಂತೆ 1/4 ಟೇಬಲ್ ಸ್ಪೂನ್
ಇಂಗು ಚಿಟಿಕೆಯಷ್ಟು
ಬ್ಯಾಡಗಿ ಮೆಣಸು 1 ಅಥವಾ 2
ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ
ಸಾಸಿವೆ – 1/4 ಟೇಬಲ್ ಸ್ಪೂನ್
ಬೆಳ್ಳುಳ್ಳಿ – 4 ಎಸಳು
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ‌
Saakshatv cooking recipe dasavala

ಮಾಡುವ ವಿಧಾನ‌
ಮೊದಲಿಗೆ ದಾಸವಾಳದ ದಳಗಳನ್ನು ಹೂವಿನಿಂದ ಬೇರ್ಪಡಿಸಿ. ನಂತರ ಅದನ್ನು ತೊಳೆದು ಎರಡು ಲೋಟ ನೀರಿನಲ್ಲಿ ಬೇಯಿಸಿ. ನಂತರ ಆರಲು ಬಿಡಿ. ಈಗ ಬೇಯಿಸಿದ ನೀರಿನಿಂದ ಹೂವಿನ ಎಸಳುಗಳನ್ನು ಬೇರೆ ಮಾಡಿ.
ಒಂದು ಬಾಣಲೆಯಲ್ಲಿ ‌ಜೀರಿಗೆ, ಧನಿಯಾ,ಬ್ಯಾಡಗಿ ಮೆಣಸು, ಕರಿಮೆಣಸು, ಇಂಗು ಮತ್ತು ಮೆಂತೆಯನ್ನು ಎಣ್ಣೆ ಹಾಕದೆ ಹುರಿಯಿರಿ.‌ ಆರಿದ ನಂತರ ಮಿಕ್ಸಿ ಜಾರಿನಲ್ಲಿ ಹಾಕಿ.‌ ಅದರ ಜೊತೆಗೆ ಬೆಂದಿರುವ ದಾಸವಾಳ ಹೂವಿನ ಎಸಳುಗಳನ್ನು ಸೇರಿಸಿ ನುಣ್ಣಗೆ ರುಬ್ಬಿ.
ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ ಮತ್ತು ದಾಸವಾಳ ಹೂವಿನ ಎಸಳು ಬೇಯಿಸಿದ ನೀರನ್ನು ಸೇರಿಸಿ. ಅದಕ್ಕೆ ಇನ್ನೂ ಎರಡು ಗ್ಲಾಸ್ ನೀರನ್ನು ಸೇರಿಸಿ ಕುದಿಸಿ. ಅದಕ್ಕೆ ಬೆಲ್ಲ, ಹುಣಸೆ ಹಣ್ಣಿನ ರಸ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಕುದಿ ಬಂದ ಬಳಿಕ ಅದಕ್ಕೆ ಸಾಸಿವೆ – ಬೆಳ್ಳುಳ್ಳಿ ಒಗ್ಗರಣೆ ಕೊಡಿ.
ಈಗ ಆರೋಗ್ಯಕರ ರುಚಿಯಾದ ದಾಸವಾಳ ಹೂವಿನ ತಿಳಿಸಾರು ಸಿದ್ಧವಾಗಿದೆ. ಇದನ್ನು ಅನ್ನದ ಜೊತೆ ಸೇವಿಸಬಹುದು ಅಥವಾ ಸೂಪ್ ತರಹ ಕೂಡ ಸೇವಿಸಬಹುದು.

Tags: #saakshatvcookingFoodgravysambar
ShareTweetSendShare
Join us on:

Related Posts

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

ಕ್ರೀಡಾಂಗಣದ ಹೆಸರಿನಲ್ಲಿ ಕಮಿಷನ್ ದಂಧೆ, ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯೊಂದಿಗೆ ಕಾಂಗ್ರೆಸ್ ಚೆಲ್ಲಾಟ : ಆರ್. ಅಶೋಕ್

by Shwetha
May 24, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆನೇಕಲ್‌ನಲ್ಲಿ ಉದ್ದೇಶಿತ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ...

ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

ಬಾಂಗ್ಲಾ ನುಸುಳುಕೋರರಿಗೆ ಅಮಿತ್ ಷಾ ಖಡಕ್ ವಾರ್ನಿಂಗ್: ಶುರುವಾಗಲಿದೆ ಮಹಾ ಬೇಟೆ!

by Shwetha
May 24, 2026
0

ಭಾರತದ ಗಡಿಭಾಗಗಳಲ್ಲಿ ದಶಕಗಳಿಂದ ಕದ್ದುಮುಚ್ಚಿ ನುಸುಳುತ್ತಿರುವ ಹಾಗೂ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ, ಕೃತಕ ಜನಸಂಖ್ಯಾ ಬದಲಾವಣೆಗೆ ಕಾರಣವಾಗಿರುವ ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರ ಇದೀಗ...

ರಾಜ್ಯಸಭೆ ಅಂಗಳದಲ್ಲಿ ದೊಡ್ಡಗೌಡರ ಭವಿಷ್ಯ – ಪ್ರಧಾನಿ ಮೋದಿ ವಿವೇಚನೆಗೆ ಎಲ್ಲವನ್ನೂ ಬಿಟ್ಟ ದಳಪತಿಗಳು

ರಾಜ್ಯಸಭೆ ಅಂಗಳದಲ್ಲಿ ದೊಡ್ಡಗೌಡರ ಭವಿಷ್ಯ – ಪ್ರಧಾನಿ ಮೋದಿ ವಿವೇಚನೆಗೆ ಎಲ್ಲವನ್ನೂ ಬಿಟ್ಟ ದಳಪತಿಗಳು

by Shwetha
May 24, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ವಲಯದಲ್ಲಿ ಈಗ ರಾಜ್ಯಸಭಾ ಚುನಾವಣೆಯ ಕಾವು ಜೋರಾಗಿದೆ. ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮರು ಆಯ್ಕೆಯ ವಿಷಯ ಸಾಕಷ್ಟು ಚರ್ಚೆಗೆ...

ರಾಜ್ಯಸಭಾ ಚುನಾವಣೆ ಎಫೆಕ್ಟ್ ಸಿದ್ದು ಕುರ್ಚಿ ಸುಭದ್ರ ಡಿಕೆಶಿ ಸಿಎಂ ಕನಸಿಗೆ ಹೈಕಮಾಂಡ್ ಬ್ರೇಕ್

ರಾಜ್ಯಸಭಾ ಚುನಾವಣೆ ಎಫೆಕ್ಟ್ ಸಿದ್ದು ಕುರ್ಚಿ ಸುಭದ್ರ ಡಿಕೆಶಿ ಸಿಎಂ ಕನಸಿಗೆ ಹೈಕಮಾಂಡ್ ಬ್ರೇಕ್

by Shwetha
May 24, 2026
0

ಜೂನ್ 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಕರ್ನಾಟಕ ರಾಜಕಾರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಈ ಚುನಾವಣೆಯು ಕೇವಲ ದೆಹಲಿಗೆ ಪ್ರತಿನಿಧಿಗಳನ್ನು ಕಳುಹಿಸುವ ಪ್ರಕ್ರಿಯೆಯಾಗಿ ಉಳಿಯದೆ, ರಾಜ್ಯ...

ಮೋದಿ ರೋಮ್ಯಾಂಟಿಕ್ ಫೋಟೋ ನೋಡಿದರೆ ನಗು ಬರುತ್ತೆ; ದೇಶದಲ್ಲಿ ಸಮಸ್ಯೆಗಳಿದ್ದರೂ ಮೋದಿ ಮೆಲೋಡಿ ಹಂಚುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್

ಮೋದಿ ರೋಮ್ಯಾಂಟಿಕ್ ಫೋಟೋ ನೋಡಿದರೆ ನಗು ಬರುತ್ತೆ; ದೇಶದಲ್ಲಿ ಸಮಸ್ಯೆಗಳಿದ್ದರೂ ಮೋದಿ ಮೆಲೋಡಿ ಹಂಚುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್

by Shwetha
May 24, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸ ಹಾಗೂ ಅಲ್ಲಿನ ಫೋಟೋ ಶೂಟ್ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರ ವ್ಯಂಗ್ಯವಾಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram