ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಣೆ ಮಾಡಿದ್ದು, ಗ್ಯಾರಂಟಿಗಳಿಗಾಗಿ 52,009 ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ.
ಗೃಹಜ್ಯೋತಿ – 9,657 ಕೋಟಿ ರೂ., ಅನ್ನಭಾಗ್ಯ – 8,079 ಕೋಟಿ, ಶಕ್ತಿ – 5,015 ಕೋಟಿ, ಯುವನಿಧಿ – 650 ಕೋಟಿ, ಗೃಹಲಕ್ಷ್ಮಿ – 28,608 ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ. ಈಗಾಗಲೇ 2023-24ರಲ್ಲಿ ಗ್ಯಾರಂಟಿ ಯೋಜನೆಗಳಿಗೆ 35,410 ಕೋಟಿ ರೂ. ಹಣ ನಿಗದಿ ಮಾಡಲಾಗಿತ್ತು. ಈ ಪೈಕಿ ಗೃಹಲಕ್ಷ್ಮಿ – 8,181 ಕೋಟಿ ರೂ., ಅನ್ನಭಾಗ್ಯ – 2,900.12 ಕೋಟಿ ರೂ, ಗೃಹಜ್ಯೋತಿ – 2,900 ಕೋಟಿ ರೂ, ಶಕ್ತಿ- 2,800 ಕೋಟಿ ರೂ., ಖರ್ಚು ಮಾಡಲಾಗಿದೆ. ಗೃಹ ಜ್ಯೋತಿ ಗ್ಯಾರಂಟಿಯನ್ನು ಆಗಸ್ಟ್ ನಿಂದ ಚಾಲನೆ ನೀಡಲಾಗಿತ್ತು. ಎಲ್ಲ ಎಸ್ಕಾಂಗಳಿಗೆ ಪ್ರತಿ ತಿಂಗಳು 500 ರಿಂದ 700 ಕೋಟಿ ರೂ. ಹಣ ಮುಂಗಡ ಬಿಡುಗಡೆ ಮಾಡಲಾಗಿತ್ತು. ಅಂದರೆ, ಜನವರಿವರೆಗೆ 2,900 ಕೋಟಿ ರೂ. ಹಣವನ್ನು ಸರ್ಕಾರ ಇಲ್ಲಿಯವರೆಗೆ ಬಿಡುಗಡೆ ಮಾಡಿದೆ.