ಬೆಂಗಳೂರು: ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಇದೀಗ ಕನ್ನಡಿಗರ ನಿದ್ದೆಗೆಡಿಸಿದೆ. ಜನರು ಕೊರೊನಾಗೆ ಹೆದರಿ ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಸುರಿಮಳೆಗೈದಿದ್ದಾರೆ. ಸಾರ್.. ನಂಗೆ ಎರಡು ದಿನದಿಂದ ಶೀತ, ಜ್ವರ, ಕೆಮ್ಮು. ನನಗೆ ಕೊರೊನಾ ಇದೆಯಾ?. ಇದೆಲ್ಲ ಕೊರೊನಾ ವೈರಸ್ ಲಕ್ಷಣಗಳಾ ಎಂದು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಮೇಲೆ ಕರೆಗಳು ಬರುತ್ತಿವೆ. ಸಹಾಯವಾಣಿಗೆ ಇದೂವರೆಗೆ ಆರೂವರೆ ಸಾವಿರ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಕೇವಲ 3-4 ತಿಂಗಳಲ್ಲಿ ಇಷ್ಟೊಂದು ಕರೆ ಬಂದಿದ್ದು, 104 ಸಹಾಯವಾಣಿಯ ಸಿಬ್ಬಂದಿಗೆ ಈಗ ಕೊರೊನಾ ಬಗ್ಗೆ ಮಾಹಿತಿ ಕೊಡೋದೆ ಕೆಲಸವಾಗಿದೆ.
ರಾಜೀನಾಮೆ ಹಾದಿಯಲ್ಲಿ ಮತ್ತಷ್ಟು ಎಐಎಡಿಎಂಕೆ ಶಾಸಕರು..!
ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಎಐಎಡಿಎಂಕೆ ಶಾಸಕರ ರಾಜೀನಾಮೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂವರು ಎಐಎಡಿಎಂಕೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ...








