ಬೆಂಗಳೂರು: ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಇದೀಗ ಕನ್ನಡಿಗರ ನಿದ್ದೆಗೆಡಿಸಿದೆ. ಜನರು ಕೊರೊನಾಗೆ ಹೆದರಿ ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಸುರಿಮಳೆಗೈದಿದ್ದಾರೆ. ಸಾರ್.. ನಂಗೆ ಎರಡು ದಿನದಿಂದ ಶೀತ, ಜ್ವರ, ಕೆಮ್ಮು. ನನಗೆ ಕೊರೊನಾ ಇದೆಯಾ?. ಇದೆಲ್ಲ ಕೊರೊನಾ ವೈರಸ್ ಲಕ್ಷಣಗಳಾ ಎಂದು ಆರೋಗ್ಯ ಇಲಾಖೆಯ ಸಹಾಯವಾಣಿಗೆ ಕರೆಗಳ ಮೇಲೆ ಕರೆಗಳು ಬರುತ್ತಿವೆ. ಸಹಾಯವಾಣಿಗೆ ಇದೂವರೆಗೆ ಆರೂವರೆ ಸಾವಿರ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಕೇವಲ 3-4 ತಿಂಗಳಲ್ಲಿ ಇಷ್ಟೊಂದು ಕರೆ ಬಂದಿದ್ದು, 104 ಸಹಾಯವಾಣಿಯ ಸಿಬ್ಬಂದಿಗೆ ಈಗ ಕೊರೊನಾ ಬಗ್ಗೆ ಮಾಹಿತಿ ಕೊಡೋದೆ ಕೆಲಸವಾಗಿದೆ.
fifaworldcup2026- ಅಹಂ ಇಲ್ಲದ ಸೂಪರ್ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!
🏔️ಶ್ವೇತವರ್ಣದಂತೆ ಹೊಳೆಯುವ ಹಿಮಪರ್ವತಗಳೇ ಈ ವೀರಭೂಮಿಯ ಮುಕಟುಮಣಿ. ಪ್ರಕೃತಿಯ ರಮಣೀಯ ಸೌಂದರ್ಯವೇ ಈ ನಾಡಿನ ಮುಖವಾಣಿ. ಸಣ್ಣ ಸಣ್ಣ ದ್ವೀಪಗಳು, ಬೆಟ್ಟಗುಡ್ಡಗಳೇ ಈ ದೇಶದ ಒಡಲು.🌊 ಅಟ್ಲಾಂಟಿಕ್...








