ಮಂಡ್ಯ : 20 ಮೇಕೆಗಳು ನಿಗೂಢ ಸಾವು Mandya saaksha tv
ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20 ಮೇಕೆಗಳು ನಿಗೂಢವಾಗಿ ಸಾವನ್ನಪ್ಪಿವೆ.
ಈ ಮೇಕೆಗಳೆಲ್ಲವೂ ಶ್ರೀನಿವಾಸು ಎಂಬುವವರಿಗೆ ಸೇರಿದ ಆಡುಗಳಾಗಿದ್ದು, ಶ್ರೀನಿವಾಸು ಮೇಕೆಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದರಂತೆ.
ನಿನ್ನೆ ಮೇಕೆಗಳನ್ನು ಮೇಯಿಸಿಕೊಂಡು ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿದ್ದು, ಇಂದು ಬೆಳಿಗ್ಗೆ ನೋಡಿದಾಗ ಎಲ್ಲಾ ಮೇಕೆಗಳು ಸಾವನ್ನಪ್ಪಿರುವುದು ತಿಳಿದುಬಂದಿದೆ.
ಮೇಕೆಗಳ ನಿಗೂಢ ಸಾವಿನಿಂದ ಶ್ರೀನಿವಾಸು ಕಂಗಾಲಾಗಿದ್ದು, ಸ್ಥಳಕ್ಕೆ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಷದ ಪದಾರ್ಥ ತಿಂದು ಸಾವನ್ನಿಪ್ಪಿರಬೇಕೆಂದು ಶಂಕಿಸಿದ್ದಾರೆ.