ಸುರತ್ಕಲ್ ಟೋಲ್ ಗೇಟ್ ನಲ್ಲಿ ಕಿರಾತಕರ ಕಿತಾಪತಿ : ಎಡೆಮುರಿಕಟ್ಟಿದ ಪೊಲೀಸ್ ಕಮಿಷನರ್ suratkal-tollgate saaksha tv
ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸ್ವಕ್ಷೇತ್ರದಲ್ಲಿ ಕಿರಾತಕರ ಕಿತಾಪತಿ ಮಿತಿಮೀರಿದೆ. ಜಿಲ್ಲೆ ಕೆಲವು ಕಡೆ ತಲೆ ಎತ್ತಿರುವ ಅನಧಿಕೃತ ಟೋಲ್ ಗೇಟ್ ನಲ್ಲಿ ಪುಂಡ ಪೋಕರಿಗಳ ಕಾಟ ಜನಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡಿದೆ.
ಮಂಗಳೂರಿನಲ್ಲಿ ವೃತ್ತಿಯಲ್ಲಿರುವ ಉಡುಪಿ ಮೂಲದ ದಂಪತಿಗಳು ವಾರಾಂತ್ಯದಲ್ಲಿ ತಮ್ಮ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದಾಗ, ಸುರತ್ಕಲ್ ಮುಕ್ಕದಲ್ಲಿ ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ನಲ್ಲಿ ಸಿಬ್ಬಂದಿಯೋರ್ವ ತೀರಾ ಅನುಚಿತ ವರ್ತನೆ ತೋರಿದ್ದಾನೆ. ಈ ವೇಳೆ ದಂಪತಿಗಳು ಸಹಾಯಕ್ಕಾಗಿ ಸುರತ್ಕಲ್ ಠಾಣೆಗೆ ಕರೆ ಮಾಡಿದ್ದಾರೆ. ಆದ್ರೆ ‘ಘಟನಾ ಸ್ಥಳಕ್ಕೆ ಕಳುಹಿಸಲು ತಮ್ಮಲ್ಲಿ ವಾಹನವಿಲ್ಲ’ ವೆಂದು ಸುರತ್ಕಲ್ ಠಾಣಾ ಪೊಲೀಸರು ಸಬೂಬು ಹೇಳಿದ್ದಾರಂತೆ. ಹೈವೇ ಗಸ್ತು ವಾಹನವನ್ನೂ ಕಳುಹಿಸದೆ ಕೈಚೆಲ್ಲಿದ್ದಾರೆ.
ದಾರಿ ಕಾಣದೆ ದಂಪತಿಗಳು ತೀವ್ರವಾಗಿ ನೊಂದು ಕೊನೆಗೆ ಮಂಗಳೂರು ಪೆÇಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ನೇರ ಕರೆ ಮಾಡಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಟೋಲ್ ಗೇಟ್ ಸಿಬ್ಬಂದಿಯನ್ನು ಬಂಧಿಸುವಂತೆ ಸುರತ್ಕಲ್ ಪೊಲೀಸರಿಗೆ ತಾಕೀತು ಮಾಡಿದ್ದಾರೆ.
ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ಸುರತ್ಕಲ್ ಠಾಣಾ ಪೊಲೀಸರು ಟೋಲ್ ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇದೀಗ ಆರೋಪಿಯು ಜಾಮೀನು ರಹಿತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಸಣ್ಣ ಸಮಸ್ಯೆಯನ್ನು ಕಮಿಷನರ್ ಅವರಂತಹ ಮೇಲಾಧಿಕಾರಿಗಳೇ ನಿಭಾಯಿಸುವ ಪರಿಸ್ಥಿತಿ ಬಂದಿದೆ.! ನಿಜವಾಗಿಯೂ ಕಮಿಷನರ್ ಅವರು ಈ ವಿಷಯದಲ್ಲಿ ಅಭಿನಂದನಾರ್ಹರು. ಆದ್ರೆ ಇಲ್ಲಿನ ಪೊಲೀಸರು ಏನು ಮಾಡುತ್ತಿದ್ದಾರೆ. ಇನ್ನಾದರೂ ಕಮಿಷನರ್ ಶಶಿಕುಮಾರ್ ಮಾದರಿಯಂತೆ ಪೆÇಲೀಸರು ಜನಸ್ನೇಹಿಯಾಗಿರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಂದಹಾಗೇ ಜಿಲ್ಲೆಯ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಕೃಪಾಪೆÇೀಷಿತದಿಂದ ಜಿಲ್ಲೆಯಲ್ಲಿ ಅನಧಿಕೃತ/ಕಾನೂನುಬಾಹಿರ ಟೋಲ್ ಗೇಟ್ ಕಾರ್ಯನಿರ್ವಹಿಸುತ್ತಿವೆ.
ಈ ಬಗ್ಗೆ ಮಾನ್ಯ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರೇ ಗಮನ ಹರಿಸಿ. ಪಕ್ಷಕ್ಕಾಗಿ ಹಗಲು ರಾತ್ರಿ ಎನ್ನದೇ ರಾಜ್ಯ ಸುತ್ತುತ್ತಿರುವ ಕಟೀಲ್ ಅವರೇ, ಕೊಂಚ ನಿಮ್ಮ ಕ್ಷೇತ್ರದ ಕಡೆಯೂ ಗಮನ ಹರಿಸಿ. ಜನರ ಸಂಕಷ್ಟಕ್ಕೆ ಸ್ಪಂದಿಸಿ.









