ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ : ಹೊಸಪೇಟೆಯಲ್ಲಿ ಬಿಜೆಪಿ BJP ಪ್ರತಿಭಟನೆ
ವಿಜಯನಗರ : ಪಶ್ಚಿಮ ಬಂಗಾಳದ ಫಲಿತಾಂಶದ ಬಳಿಕ ಅಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಪ್ರತಿಭಟನೆಗಳಿಗೆ ನಿಬರ್ಂಧ ಏರಲಾಗಿದೆ. ಹೀಗಿದ್ದರೂ ನಗರದ ರೋಟರಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಪ್ರಕಾರ ಪ್ರತಿಭಟನೆ ನಡೆಸಬೇಕಾದರೇ ಪೊಲೋಸ್ ಮತ್ತು ಇಲ್ಲಿನ ತಹಶೀಲ್ದಾರ್ ಅವರ ಅನುಮತಿ ಪಡೆಯಬೇಕು.
ಆದ್ರೆ ಇವರು ಅನುಮತಿ ಪಡೆದೇ ಪ್ರತಿಭಟಿಸಿದ್ದಾರಾ..? ಅನ್ನೋ ಪ್ರಶ್ನೆ ಈಗ ಉದ್ಭವವಾಗಿದೆ.