ADVERTISEMENT
Saturday, May 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇದು ‘ಗ್ರೇಟ್ ವಾಲ್ ಆಫ್ ಇಂಡಿಯಾ’..!! ಕುಂಭಲಗಢ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು?

Namratha Rao by Namratha Rao
June 5, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಇದು ‘ಗ್ರೇಟ್ ವಾಲ್ ಆಫ್ ಇಂಡಿಯಾ’..!! ಕುಂಭಲಗಢ ಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು?

ನಿಮಗೆಲ್ಲ ಚೀನಾದ ಮಹಾಗೋಡೆಯ ಬಗ್ಗೆ ತಿಳಿದಿದೆ. ಆದರೆ ಭಾರತದ ಮಹಾಗೋಡೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ರಾಜಸ್ಥಾನದಲ್ಲಿರುವ ಕೋಟೆಯೊಂದು ಭಾರತದ ಮಹಾ ಗೋಡೆ ಎಂತಲೇ ಖ್ಯಾತಿ ಗಳಿಸಿದೆ. ರಾಜಸ್ಥಾನದ ಉದಯಪುರದಿಂದ 64 ಕಿ.ಮೀ. ದೂರದಲ್ಲಿರುವ ಕುಂಭಲಗಢ ಕೋಟೆಯು 15ನೇ ಶತಮಾನದಲ್ಲಿ ರಾಣಾ ಕುಂಭ ನಿಂದ ನಿರ್ಮಿತವಾಗಿದೆ. ಚೀನಾ ಗೋಡೆಯ ಬಳಿಕ ಜಗತ್ತಿನ ಎರಡನೇ ಅತಿ ಉದ್ದದ ಗೋಡೆ ಇದಾಗಿದೆ.

Related posts

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

May 22, 2026
ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

May 22, 2026

ಮುಂದಿನ ಗೋಡೆಗಳು 15 ಅಡಿಯಷ್ಟು ದಪ್ಪವಿದ್ದರೆ, ಕೆಲವೊಂದು ಕಡೆಗಳಲ್ಲಿ 15 ಮೀಟರ್ಗಷ್ಟು ದಪ್ಪವಾಗಿವೆ. ಕೋಟೆಯು ಬೃಹದಾಕಾರದ ಏಳು ಹೊರದ್ವಾರಗಳನ್ನು ಹೊಂದಿದೆ. ಅವುಗಳಲ್ಲಿ ರಾಮ್ಪೋಲ್ ದೊಡ್ಡದಾದುದಾಗಿದೆ. ಈ ಗೋಡೆಗಳ ನಿರ್ಮಾಣಕ್ಕೆ ಎಲ್ಲಿಯೂ ಮಣ್ಣಿನ ಇಟ್ಟಿಗೆಗಳನ್ನು ಬಳಸಿಲ್ಲ. ಬದಲು ಭಾರವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗೋಡೆಯ ಮೇಲ್ಭಾಗದಲ್ಲಿ ಕಲ್ಲಿನ ಅಲಂಕಾರಿಕ ಕೆತ್ತನೆಗಳನ್ನು ಕಾಣಬಹುದು. ಹೀಗಾಗಿ ಈ ಕೋಟೆ ಇನ್ನಷ್ಟು ರಮಣೀಯವಾಗಿ ಗೋಚರಿಸುತ್ತದೆ. ರಜಪೂತರ ಕಾಲದ ವಾಸ್ತುಶಿಲ್ಪಕ್ಕೆ ಈ ಗೋಡೆ ಒಂದು ಉತ್ತಮ ಉದಾಹರಣೆ.

ಸುತ್ತುಹಾಕಲು 8 ಗಂಟೆಬೇಕು!

ಗೋಡೆಗಳು ತುಂಬಾ ಓರೆಕೋರೆಯಾಗಿರುವುದರಿಂದ ಅದನ್ನು ಒಂದು ಸುತ್ತು ಹಾಕಲು ಕಡಿಮೆ ಅಂದರೂ 8 ಗಂಟೆಗಳು ಬೇಕು. ಕುಂಭಲ್‌ಘಡ್‌ ಕೋಟೆಯು ಸಮುದ್ರ ಮಟ್ಟದಿಂದ 3600 ಅಡಿ ಎತ್ತರದಲ್ಲಿ, ಇದನ್ನು ಹದಿಮೂರು ಎತ್ತರದ ಅರಾವಳಿ ಪರ್ವತ ಶಿಖರಗಳ ಮಡಿಲಲ್ಲಿ ನಿರ್ಮಿಸಲಾಗಿದೆ.

ಯಾರಿಂದಲೂ ಗೆಲ್ಲಲು ಸಾಧ್ಯವಾಗಿಲ್ಲ ಈ ಕೋಟೆಯನ್ನ..!!

ಈ ಕೋಟೆಯನ್ನು ಯಾರಿಂದಲೂ ಗೆಲ್ಲಲು ಸಾಧ್ಯವಾಗಿಲ್ಲ. ಕೋಟೆಯ ತುತ್ತತಿದಿಯಲ್ಲಿ ಈ ಕೋಟೆಯಲ್ಲಿ ಮಹಾರಾಣ ಪ್ರತಾಪ್ನಿಂದ ನಿರ್ಮಿತವಾದ ಡೋಮ್ ಆಕಾರದ ಒಂದು ಅರಮನೆಯಿದೆ. ಇದನ್ನು ಬಾದಲ್ ಮಹಲ್ ಎಂದು ಕರೆಯುತ್ತಾರೆ. ಮಹಾರಾಣ ಪ್ರತಾಪ್ ಇಲ್ಲಿ ಅನಭಿಶಕ್ತ ದೊರೆಯಾಗಿ ಆಡಳಿತ ನಡೆಸಿದ್ದ.

ಕೋಟೆಯ ಒಳಗೆ 360 ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ 300 ಪುರಾತನ ಜೈನ ದೇವಾಲಯಗಳಾಗಿದ್ದು, ಉಳಿದವು ಹಿಂದು ದೇವಾಲಯವಾಗಿದೆ. ಇಲ್ಲಿನ ಶಿವದೇವಾಲಯ ಅತ್ಯಂತ ಪ್ರಸಿದ್ಧವಾಗಿದ್ದು, ಬೃಹದಾಕಾರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಕೋಟೆಯನ್ನು 2013ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗಿದೆ.

ಕುಂಭಲ್‌ಘಡ್ ವನ್ಯಜೀವಿ ಅಭಯಾರಣ್ಯಗಳು ಲಯನ್ ಸಫಾರಿಗಳನ್ನು ಸಹ ಹೊಂದಿವೆ. ಅರಾವಳಿಯ ಬುಡದಲ್ಲಿ, ಈ ಪ್ರದೇಶವು ಆಸಕ್ತಿದಾಯಕ ಭೂಪ್ರದೇಶ ಮತ್ತು ಇತರ ನೈಸರ್ಗಿಕ ಅಂಶಗಳಿಂದ ಆಶೀರ್ವದಿಸಲ್ಪಟ್ಟಿದೆ. ಈ ಪ್ರದೇಶವು ಸಾಕಷ್ಟು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ರಜಪೂತ ರಾಯಲ್ಸ್ ಕಥೆಯನ್ನು ಚಿತ್ರಿಸುವ ಪ್ರತಿದಿನ ಸಂಜೆ 6: 45 ಕ್ಕೆ ಪ್ರಾರಂಭವಾಗುವ ವಿಶೇಷ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಆನಂದಿಸಬಹುದು. ಈ ಪ್ರದರ್ಶನವು ಹಿಂದಿ ಭಾಷೆಯಲ್ಲಿರುತ್ತದೆ. ಇದರ ಟಿಕೆಟ್‌ಗಳ ಬೆಲೆಯು ಭಾರತೀಯರಿಗೆ 100 ರೂ. ಮತ್ತು ವಿದೇಶಿಯರಿಗೆ 250 ರೂ. 45 ನಿಮಿಷಗಳ ಕಾಲ ಈ ಪ್ರದರ್ಶನ ನಡೆಯುತ್ತದೆ.

ಬೇಸಿಗೆಯಲ್ಲಿ ಕುಂಭಲ್‌ಘಡ್‌ ಬಿಸಿ ಮತ್ತು ಶುಷ್ಕ ವಾತಾವರಣವನ್ನು ಹೊಂದಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಪ್ರಯಾಣವು ಸಾಕಷ್ಟು ಆಯಾಸವನ್ನುಂಟುಮಾಡುತ್ತದೆ.ಹೀಗಾಗಿ, ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ರಾಜಸ್ಥಾನ ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಂದ ಕುಂಭಲ್‌ಘಡ್‌ಗೆ ಆಗಾಗ್ಗೆ ಬಸ್ ಸೇವೆಗಳಿವೆ. ಕ್ಯಾಬ್ ಅಥವಾ ಕಾರುಗಳನ್ನೂ ನೀವು ಬಾಡಿಗೆಗೆ ಪಡೆಯಬಹುದು.

ಬಾದಲ್ ಮಹಲ್ ವೀಕ್ಷಿಸದೇ ಹಿಂದಿರುಗಬೇಡಿ..!

ಈ ಕೋಟೆಯ ಮತ್ತೊಂದು ಆಕರ್ಷಣೆ ಬಾದಲ್ ಮಹಲ್. ಮೋಡಗಳ ಅರಮನೆ ಎಂದೂ ಕೂಡ ಕರೆಯಲಾಗುವ ಈ ಬಾದಲ್ ಮಹಲ್, ಕುಂಭಲ್ಗಡ್ ಕೋಟೆಯ ಮೇಲೆ ನೆಲೆಸಿದೆ. ಮರ್ದಾನಾ ಮಹಲ್ ಮತ್ತು ಜನಾನಾ ಮಹಲ್ ಈ ಅರಮನೆಗೆ ಕೂಡಿಕೊಂಡ ಎರಡು ಒಳಭಾಗಗಳು. ಇಲ್ಲಿನ ಭವ್ಯವಾದ ಕೊಠಡಿಗಳು ನೀಲಿ ಬಣ್ಣದ ಭಿತ್ತಿಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದು 19ನೇ ಶತಮಾನದ ಕಾಲವನ್ನು ಪ್ರತಿನಿಧಿಸುವಂತಿದೆ. ಟುರ್ಕಾಯ್ಸ್, ಹಸಿರು ಮತ್ತು ಬಿಳಿ ಬಣ್ಣಗಳು ಕೊಠಡಿಗಳಲ್ಲಿ ಪ್ರಮುಖವಾಗಿ ಆವರಿಸಿವೆ.ಪ್ರವಾಸಿಗರು, ಜನಾನಾ ಮಹಲ್ ನಲ್ಲಿ ಕಲ್ಲಿನ ಜಾಲಿಗಳನ್ನು ಕಾಣಬಹುದಾಗಿದೆ. ಅಂದಿನ ರಾಣಿಯರು ಈ ಜಾಲಿಗಳ ಮೂಲಕ ಅರಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕಲಾಪಗಳನ್ನು ವಿಕ್ಷೀಸುತ್ತಿದ್ದರು. ಕೋಣೆಗಳು ತಮ್ಮ ಅನನ್ಯವಾದ ಹವಾನಿಯಂತ್ರಣ ವ್ಯವಸ್ಥೆಯಿಂದ ಕೂಡಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

Tags: interesting factskumbhalghar fortRajasthantravelling
ShareTweetSendShare
Join us on:

Related Posts

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

by Shwetha
May 22, 2026
0

ನವದೆಹಲಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತೀವ್ರ ಕಾನೂನು ಸಮರದಲ್ಲಿ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್ ಮಹತ್ವದ...

ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

by Shwetha
May 22, 2026
0

ಎಬೋಲಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದಲ್ಲೂ ಆರೋಗ್ಯ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ. ಈ ಕುರಿತು ಮಾತನಾಡಿದ ಆರೋಗ್ಯ ಸಚಿವ...

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹತ್ಯೆ: PoKನಲ್ಲಿ ಹಮ್ಹಾ ಬುರ್ಹಾನ್‌ಗೆ ಗುಂಡೇಟು

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹತ್ಯೆ: PoKನಲ್ಲಿ ಹಮ್ಹಾ ಬುರ್ಹಾನ್‌ಗೆ ಗುಂಡೇಟು

by Shwetha
May 22, 2026
0

2019ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಎಂದು ಗುರುತಿಸಲಾಗಿದ್ದ ಹಮ್ಹಾ ಬುರ್ಹಾನ್ ಅಲಿಯಾಸ್ ಅರ್ಜುಮಂಡ್ ಗುಲ್ಬಾರ್ ದಾರ್‌ನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಅಪರಿಚಿತರು ಗುಂಡಿಕ್ಕಿ...

ಮೆಲೋಡಿ ಚಾಕಲೇಟ್ ಗಿಫ್ಟ್ ನೀಡಿ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಇಟಲಿಯಲ್ಲಿ ಅಬ್ಬರಿಸಿದ ಮೇಕ್ ಇನ್ ಇಂಡಿಯಾ ಬ್ರ್ಯಾಂಡ್

ಮೆಲೋಡಿ ಚಾಕಲೇಟ್ ಗಿಫ್ಟ್ ನೀಡಿ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಇಟಲಿಯಲ್ಲಿ ಅಬ್ಬರಿಸಿದ ಮೇಕ್ ಇನ್ ಇಂಡಿಯಾ ಬ್ರ್ಯಾಂಡ್

by Shwetha
May 22, 2026
0

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳು ಕೇವಲ ರಾಜತಾಂತ್ರಿಕ ಭೇಟಿಗಳಾಗಿ ಉಳಿಯದೆ, ಭಾರತದ ಸಂಸ್ಕೃತಿ ಮತ್ತು ಸ್ವದೇಶಿ ಉತ್ಪನ್ನಗಳ ಪ್ರಚಾರದ ವೇದಿಕೆಗಳಾಗುತ್ತಿವೆ. ಇಟಲಿಯಲ್ಲಿ ನಡೆದ ಜಿ7...

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

by Shwetha
May 22, 2026
0

ಭಾರತದ ಡಿಜಿಟಲ್ ಲೋಕದಲ್ಲಿ ಸುನಾಮಿಯಂತೆ ಅಬ್ಬರಿಸಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಈಗ ಭಾರೀ ವಿವಾದಕ್ಕೆ ಸಿಲುಕಿದೆ. ವ್ಯವಸ್ಥೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram